ETV Bharat / state

ಫೇಸ್​ಬುಕ್​ನಲ್ಲಿ ಫೊಟೋಗೆ ಕಾಮೆಂಟ್: ಪೊಲೀಸರಿಂದ ಯುವಕನ ಸ್ಟೈಲಿಶ್​​ ಕೂದಲಿಗೆ ಕತ್ತರಿ, ಥಳಿತ ಆರೋಪ - comment on face book post

ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನಲ್ಲಿ ಸುನೀಲ್ ಎಂಬಾತ ಶೇಖರ್ ಎಂಬುವವರ ಫೇಸ್​ಬುಕ್​ನಲ್ಲಿ ಅವರ ಫೋಟೋಗೆ ಕಾಮೆಂಟ್ ಮಾಡಿದ ಹಿನ್ನೆಲೆ ಶೇಖರ್ ಪೊಲೀಸರನ್ನು ಮುಂದೆ ಬಿಟ್ಟು ಹುಡುಗನ ಕೂದಲಿಗೆ ಕತ್ತರಿ ಹಾಕಿಸಿ ಹಿಗ್ಗಾಮಗ್ಗಾ ಥಳಿಸಿರುವುದಾಗಿ ಯುವಕ ಪೊಲೀಸರ ವಿರುದ್ಧ ಆರೋಪಿಸಿದ್ದಾನೆ.

Naveen
ನವೀನ್
author img

By

Published : Dec 28, 2020, 5:17 PM IST

ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಪೊಲೀಸ್​ ಸಿಬ್ಬಂದಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಯುವಕನ ಸ್ಟೈಲಿಶ್ ಹೇರ್​ಗೆ ಮಲ್ಲಂದೂರು ಪೊಲೀಸರು ಕತ್ತರಿ ಹಾಕಿಸಿದ್ದು, ಯುವಕನನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ಯುವಕನ ಸ್ಟೈಲಿಶ್​ ಕೂದಲಿಗೆ ಕತ್ತರಿ ಹಾಕಿದ ಪೊಲೀಸರು

ಹೌದು, ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನಲ್ಲಿ ಸುನೀಲ್ ಎಂಬಾತ ಶೇಖರ್ ಎಂಬುವವರ ಫೇಸ್​​ಬುಕ್​​ನಲ್ಲಿ ಅವರ ಫೋಟೋಗೆ ಕಾಮೆಂಟ್ ಮಾಡಿದ ಹಿನ್ನೆಲೆ ಶೇಖರ್ ಪೊಲೀಸರನ್ನು ಮುಂದೆ ಬಿಟ್ಟು ಈ ರೀತಿ ಮಾಡಿಸಿದ್ದಾರೆಂದು ಪೊಲೀಸರ ಮೇಲೆ ಯುವಕ ಗಂಭೀರ ಆರೋಪ ಮಾಡಿದ್ದಾನೆ.

Facebook post
ಫೇಸ್​ಬುಕ್​ ಪೋಸ್ಟ್​

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೇಖರ್ ಅವರ ಭಾವಚಿತ್ರಕ್ಕೆ ಕಾಮೆಂಟ್ ಮಾಡಿದ್ದಕ್ಕೆ ಶೇಖರ್ ದೂರಿನ ಹಿನ್ನೆಲೆ ಸುನಿಲ್ ನನ್ನನ್ನು ಪೊಲೀಸರು ಠಾಣೆಗೆ ಕರೆಸಿ ಹೇರ್ ಸಲೂನ್ ಶಾಪ್​ಗೆ ಕರೆದುಕೊಂಡು ಹೋಗಿ ಕೂದಲು ಕತ್ತರಿಸಿ, ಮೊಬೈಲ್ ಕಿತ್ತುಕೊಂಡು ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಜಿಲ್ಲಾಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್​ ಮಲ್ಲಂದೂರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾನೆ.

ಈ ಕುರಿತು ಠಾಣೆಯ ಪಿಎಸ್​ಐ ರೇಣುಕಾ ಎಫ್​ಐಆರ್​ ದಾಖಲಿಸದೆ ಸುನೀಲ್​ಗೆ ಥಳಿಸಿದ್ದಾರೆ ಎಂದು ಸುನೀಲ್ ಕುಟುಂಬದ ಸದಸ್ಯರು ಕೂಡ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿದ್ದಾರೆ.

ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಪೊಲೀಸ್​ ಸಿಬ್ಬಂದಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಯುವಕನ ಸ್ಟೈಲಿಶ್ ಹೇರ್​ಗೆ ಮಲ್ಲಂದೂರು ಪೊಲೀಸರು ಕತ್ತರಿ ಹಾಕಿಸಿದ್ದು, ಯುವಕನನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.

ಯುವಕನ ಸ್ಟೈಲಿಶ್​ ಕೂದಲಿಗೆ ಕತ್ತರಿ ಹಾಕಿದ ಪೊಲೀಸರು

ಹೌದು, ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರಿನಲ್ಲಿ ಸುನೀಲ್ ಎಂಬಾತ ಶೇಖರ್ ಎಂಬುವವರ ಫೇಸ್​​ಬುಕ್​​ನಲ್ಲಿ ಅವರ ಫೋಟೋಗೆ ಕಾಮೆಂಟ್ ಮಾಡಿದ ಹಿನ್ನೆಲೆ ಶೇಖರ್ ಪೊಲೀಸರನ್ನು ಮುಂದೆ ಬಿಟ್ಟು ಈ ರೀತಿ ಮಾಡಿಸಿದ್ದಾರೆಂದು ಪೊಲೀಸರ ಮೇಲೆ ಯುವಕ ಗಂಭೀರ ಆರೋಪ ಮಾಡಿದ್ದಾನೆ.

Facebook post
ಫೇಸ್​ಬುಕ್​ ಪೋಸ್ಟ್​

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶೇಖರ್ ಅವರ ಭಾವಚಿತ್ರಕ್ಕೆ ಕಾಮೆಂಟ್ ಮಾಡಿದ್ದಕ್ಕೆ ಶೇಖರ್ ದೂರಿನ ಹಿನ್ನೆಲೆ ಸುನಿಲ್ ನನ್ನನ್ನು ಪೊಲೀಸರು ಠಾಣೆಗೆ ಕರೆಸಿ ಹೇರ್ ಸಲೂನ್ ಶಾಪ್​ಗೆ ಕರೆದುಕೊಂಡು ಹೋಗಿ ಕೂದಲು ಕತ್ತರಿಸಿ, ಮೊಬೈಲ್ ಕಿತ್ತುಕೊಂಡು ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಜಿಲ್ಲಾಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀಲ್​ ಮಲ್ಲಂದೂರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದಾನೆ.

ಈ ಕುರಿತು ಠಾಣೆಯ ಪಿಎಸ್​ಐ ರೇಣುಕಾ ಎಫ್​ಐಆರ್​ ದಾಖಲಿಸದೆ ಸುನೀಲ್​ಗೆ ಥಳಿಸಿದ್ದಾರೆ ಎಂದು ಸುನೀಲ್ ಕುಟುಂಬದ ಸದಸ್ಯರು ಕೂಡ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.