ETV Bharat / state

ಆನೆ ನಡೆದದ್ದೇ ಹಾದಿ... ಕಾಡಾನೆ ಹಾವಳಿಗೆ ಬೇಸತ್ತ ಪ್ರಯಾಣಿಕರು!

author img

By

Published : May 16, 2019, 4:33 PM IST

ಕಾಡಾನೆ ಹಾವಳಿಯಿಂದ ಸಂತವೇರಿ ಘಾಟ್​ನ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾಯಾಣಿಸಬೇಕಿದೆ.

ಕಾಡಾನೆಗಳ ಹಾವಳಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಹಗಲಿನಲ್ಲಿಯೂ ರಸ್ತೆಯಲ್ಲಿ ಸಂಚಾರ ಮಾಡಲು ಜನರು ಹಿಂದೇಟು ಹಾಕುವಂತಹ ಪರಿಸ್ಥತಿ ನಿರ್ಮಾಣವಾಗಿದೆ.

ಜಿಲ್ಲೆಯ ತರೀಕರೆ ತಾಲೂಕಿನ ಸಂತವೇರಿ ಘಾಟ್​ನ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾಯಾಣಿಸಬೇಕಿದೆ. ಸಂತವೇರಿ, ಉಡೇವಾ, ಲಿಂಗದಹಳ್ಳಿ, ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಒಂದು ಹಂತದವರೆಗೆ ಇದ್ದ ಆನೆ ಹಾವಳಿ ಇಂದು ನಡು ರಸ್ತೆಗೆ ಬಂದು ಜನರು ತೊಂದರೆ ಅನುಭವಿಸುವಂತಾಗಿದೆ.

ಕಾಡಾನೆಗಳ ಹಾವಳಿ ಬೇಸತ್ತ ಜನ

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಂತವೇರಿ ಘಾಟ್ ನಡು ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಬಸ್​ಗೆ ಅಡ್ಡವಾಗಿ ನಿಂತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಅಲ್ಲದೆ ಬಸ್ ಮುಂಭಾಗಕ್ಕೆ ಆಗಮಿಸಿ 1 ಕಿ.ಮೀ. ಫಾಲೋ ಮಾಡಿತ್ತು. ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿಗೆ ಅಡ್ಡವಾಗಿ ಬಂದು ಹಣ್ಣು ತಿಂದು ಗಾಡಿಯನ್ನು ಪಕ್ಕ ತಳ್ಳಿದ್ದ ಘಟನೆಯೂ ಈ ರಸ್ತೆಯಲ್ಲಿ ನಡೆದಿದೆ.

ರಾತ್ರಿ ಹಗಲು ಎನ್ನದೇ ದಾಳಿ ನಡೆಸುವ ಕಾಡಾನೆ ಕಾಟದಿಂದ ಜನರು ಈ ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾಗಿದೆ. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಇಬ್ಬರು ರೈತರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಮಾತ್ರ ಸಂತವೇರಿ ಘಾಟ್ ರಸ್ತೆಯಲ್ಲಿ ಆನೆ ಹವಾಳಿ ಇದೆ ಎನ್ನುವ ಬೋರ್ಡ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಹಗಲಿನಲ್ಲಿಯೂ ರಸ್ತೆಯಲ್ಲಿ ಸಂಚಾರ ಮಾಡಲು ಜನರು ಹಿಂದೇಟು ಹಾಕುವಂತಹ ಪರಿಸ್ಥತಿ ನಿರ್ಮಾಣವಾಗಿದೆ.

ಜಿಲ್ಲೆಯ ತರೀಕರೆ ತಾಲೂಕಿನ ಸಂತವೇರಿ ಘಾಟ್​ನ ರಾಜ್ಯ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಾಯಾಣಿಸಬೇಕಿದೆ. ಸಂತವೇರಿ, ಉಡೇವಾ, ಲಿಂಗದಹಳ್ಳಿ, ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ಒಂದು ಹಂತದವರೆಗೆ ಇದ್ದ ಆನೆ ಹಾವಳಿ ಇಂದು ನಡು ರಸ್ತೆಗೆ ಬಂದು ಜನರು ತೊಂದರೆ ಅನುಭವಿಸುವಂತಾಗಿದೆ.

ಕಾಡಾನೆಗಳ ಹಾವಳಿ ಬೇಸತ್ತ ಜನ

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಂತವೇರಿ ಘಾಟ್ ನಡು ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಬಸ್​ಗೆ ಅಡ್ಡವಾಗಿ ನಿಂತು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಅಲ್ಲದೆ ಬಸ್ ಮುಂಭಾಗಕ್ಕೆ ಆಗಮಿಸಿ 1 ಕಿ.ಮೀ. ಫಾಲೋ ಮಾಡಿತ್ತು. ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿಗೆ ಅಡ್ಡವಾಗಿ ಬಂದು ಹಣ್ಣು ತಿಂದು ಗಾಡಿಯನ್ನು ಪಕ್ಕ ತಳ್ಳಿದ್ದ ಘಟನೆಯೂ ಈ ರಸ್ತೆಯಲ್ಲಿ ನಡೆದಿದೆ.

ರಾತ್ರಿ ಹಗಲು ಎನ್ನದೇ ದಾಳಿ ನಡೆಸುವ ಕಾಡಾನೆ ಕಾಟದಿಂದ ಜನರು ಈ ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾಗಿದೆ. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಇಬ್ಬರು ರೈತರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಮಾತ್ರ ಸಂತವೇರಿ ಘಾಟ್ ರಸ್ತೆಯಲ್ಲಿ ಆನೆ ಹವಾಳಿ ಇದೆ ಎನ್ನುವ ಬೋರ್ಡ್ ಹಾಕಿ ಕೈ ತೊಳೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

Intro:R_Kn_Ckm_02_16_Santaveri ghat_Rajkumar_Ckm_pkg_7202347Body:


ಚಿಕ್ಕಮಗಳೂರು :-

ಇಲ್ಲಿನ ಸ್ಥಳೀಯ ಜನರಿಗೆ ಜೀವನ ನಡೆಸೋದೆ ದುಸ್ತರವಾಗಿದೆ. ಹೇಗೆ ಜೀವ ಉಳಿಸಿಕೊಳ್ಳಬೇಕೋ ಎನ್ನುವ ಗೊಂದಲ ಅವರನ್ನು ಪ್ರತಿನಿತ್ಯ ಕಾಡುತ್ತಿದೆ. ಇನ್ನೊಂದಡೆ ರಸ್ತೆಯಲ್ಲಿ ಸಾಗುತ್ತಿದ್ದರೆ ಪ್ರತ್ಯಕ್ಷವಾಗುವ ಗಜಪಡೆಯ ಹಾವಳಿಗೆ ಯಾವ ಸಂದರ್ಭದಲ್ಲಿ ಆತಂಕ ಎದುರಾಗುತ್ತದೋ ಎನ್ನುವ ಭಯ ಪ್ರಯಾಣಿಕರಲ್ಲಿಯೂ ಮನೆ ಮಾಡಿದೆ. ಇದು ಆನೆ ಹಾವಳಿಯಿಂದ ಅಕ್ಷರಶಃ ತತ್ತರಿಸಿ ಹೋಗಿರುವ ಚಿಕ್ಕಮಗಳೂರು ಜಿಲ್ಲೆ ಸಂತವೇರಿ ಘಾಟಿ ರಸ್ತೆಯಲ್ಲಿ ಉಂಟಾಗಿರುವ ಕಳವಳಕಾರಿ ವಾತಾವರಣ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.......

ಹೌದು ಇದು ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲ್ಲೂಕಿನ ಸಂತವೇರಿ ಘಾಟಿ ರಾಜ್ಯ ಹೆದ್ದಾರಿ. ತರೀಕೆರೆ, ಶಿವಮೊಗ್ಗ ಜಿಲ್ಲೆಯನ್ನು ಸಂಪರ್ಕೀಸುವ ರಸ್ತೆ, ಇತ್ತೀಚೆಗೆ ರಸ್ತೆಯಲ್ಲಿ ಸಾಗುವ ಜನರಿಗೆ ಆತಂಕ ಎದುರಾಗಿದೆ. ಜೀವ ಭಯದಲ್ಲಿ ವಾಹನ ಸವಾರರು ಸಾಗುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣವಾಗಿರುವುದು ಗಜಪಡೆಯ ಹಾವಳಿ. ಈ ಘಾಟಿಯ ಮುಂದೆ ಬರುವ ಗ್ರಾಮ ಸಂತವೇರಿ. ಹಾಗೂ ಉಡೇವಾ, ಲಿಂಗದಹಳ್ಳಿ, ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗುತ್ತಿದೆ. ಒಂದು ಹಂತದವರೆಗೆ ಸಹನೀಯವೆನಿಸಿದ್ದ ಈ ಹಾವಳಿ ಇಂದು ನಡು ರಸ್ತೆಗೆ ಬಂದು ಜನರಿಗೆ ತೊಂದರೆ ಕೊಡಲು ಆರಂಭಿಸಿವೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಂತವೇರಿ ಘಾಟಿ ನಡು ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಬಸ್ ಗೆ ಅಡ್ಡವಾಗಿ ನಿಂತು ಪ್ರಯಾಣಿಕರಲ್ಲಿ ಆತಂಕವನ್ನು ಮೂಡಿಸಿತ್ತು. ಅಲ್ಲದೆ ಬಸ್ ಗೆ ಮುಂಭಾಗಕ್ಕೆ ಆಗಮಿಸಿದ ಒಂಟಿ ಸಲಗ ಒಂದು ಕಿ ಲೋ ಮೀಟರ್ ವೆಗೂ ಫಾಲೋ ಮಾಡಿತ್ತು. ಇದರ ಬಳಿಕ ಕಲ್ಲಗಂಡಿ ಹಣ್ಣು ತುಂಬಿಕೊಂಡು ಹೋಗುತ್ತಿದ್ದ ಮಿನಿ ಲಾರಿಗೆ ಅಡ್ಡವಾಗಿ ಬಂದು ಹಣ್ಣು ತಿಂದು ಗಾಡಿಯನ್ನು ಪಕ್ಕ ತಳ್ಳಿದ್ದ ಪ್ರಕರಣವೂ ಈ ರಸ್ತೆಯಲ್ಲಿ ನಡೆದಿದೆ....

ರಾತ್ರಿ ಹಗಲು ಎನ್ನದೇ ಹಾವಳಿ ನಡೆಸುವ ಕಾಡಾನೆ ಕಾಟದಿಂದ ಜನರು ಈ ರಸ್ತೆಯಲ್ಲಿ ಸಾಗುವುದೇ ಕಷ್ಟಕರವಾಗಿದೆ. ಕಳೆದ ಒಂದು ವರ್ಷದಿಂದ ಈ ಭಾಗದಲ್ಲಿ ಇಬ್ಬರು ರೈತರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಮಾತ್ರ ಸಂತವೇರಿ ಘಾಟಿ ರಸ್ತೆಯಲ್ಲಿ ಆನೆ ಹವಾಳಿ ಇದೆ ಎನ್ನುವ ಬೋರ್ಡ್ ಹಾಕಿ ಕೈ ತೊಳದುಕೊಂಡಿದ್ದಾರೆ. ರಾತ್ರಿ ಮಾತ್ರವಲ್ಲ ಹಗಲಿನಲ್ಲಿ ರಸ್ತೆಯಲ್ಲಿ ಸಂಚಾರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಭದ್ರಾವತಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಕಾಟ ಜಾಸ್ತಿ ಆಗಿದೆ. ಇಲ್ಲಿ ವಾಸಿಸುವ ಜನರ ಸ್ಥಿತಿಯೂ ದುಸ್ಥಿರವಾಗಿ ಪರಿಣಾಮಿಸಿದೆ.....

ಒಟ್ಟಾರೆಯಾಗಿ ಅರಣ್ಯ ಇಲಾಖೆಯವರು ಆನೆಗಳ ಹಾವಳಿ ಹೇಗೆ ತಡೆಗಟ್ಟುವುದು ಎಂಬ ಚಿಂತೆಯಲ್ಲಿದ್ದಾರೆ. ಕಾಡಾನೆ ಕಾಟದಿಂದ ಸಂತವೇರಿ ರಸ್ತೆ ಮಾರ್ಗವನ್ನು ಬಿಟ್ಟು ಬದಲಿ ರಸ್ತೆಯಲ್ಲಿ ಪ್ರಯಾಣಿಕರು ಸಂಚಾರಿಸುವ ಸ್ಥಿತಿ ನಿರ್ಮಾಣವಾಗಿದೆ.ಸ್ಥಳೀಯ ಜನರು ಜೀವ ಭಯದಲ್ಲಿ ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳುವ ವರೆಗೂ ಆನೆ ನಡೆದದ್ದೇ ಹಾದಿ ಎನ್ನುವ ವಾತಾವರಣ ಈ ಭಾಗದಲ್ಲಿ ಇರುತ್ತದೆ....

byte:-1 ಮಹೇಂದ್ರ,,,,,ದಾರಿ ಹೋಕ (ಟೀ ಶರ್ಟ್ ಹಾಕಿರುವ ವ್ಯಕ್ತಿ)

byte:-2 ಕುಮಾರ್,,,,,ದಾರಿ ಹೋಕ

Conclusion:ರಾಜಕುಮಾರ್,,,,,,
ಈ ಟಿವಿ ಭಾರತ್,,,,,,
ಚಿಕ್ಕಮಗಳೂರು..........
ETV Bharat Logo

Copyright © 2024 Ushodaya Enterprises Pvt. Ltd., All Rights Reserved.