ETV Bharat / state

ಕೊರೊನಾ ಸೋಂಕಿನಿಂದ ಗರ್ಭಿಣಿಗೆ ಮುಕ್ತಿ: ಪಟಾಕಿ ಸಿಡಿಸಿ ಬರಮಾಡಿಕೊಂಡ ಗ್ರಾಮಸ್ಥರು

author img

By

Published : May 28, 2020, 9:27 PM IST

ತರೀಕೆರೆಯ ಗರ್ಭಿಣಿಯೊಬ್ಬಳು ಮಾಹಾಮಾರಿ ಕೊರೊನಾದಿಂದ ಮುಕ್ತಿ ಪಡೆದಿದ್ದು ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್​ ಮಾಡಲಾಯಿತು. ಖುಷಿಗೆ ಗ್ರಾಮಸ್ಥರು ಪಟಾಕಿ ಸಿಡಿಸಿ, ಹೂವಿನ ಹಾರ ಹಾಕಿ ಗರ್ಭಿಣಿಯನ್ನು ಬರಮಾಡಿಕೊಂಡ ದೃಶ್ಯ ಗಮನ ಸೆಳೆಯಿತು.

Pregnant women recoverd from coronavirus and Discharge from hospital
ಕೊರೊನಾದಿಂದ ಗುಣಮುಖರಾಗಿ ಗರ್ಭಿಣಿ ಡಿಸ್ಚಾರ್ಜ್​: ಪಟಾಕಿ ಸಿಡಿಸಿ ಬರಮಾಡಿಕೊಂಡ ಗ್ರಾಮಸ್ಥರು

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಹಾಗೂ ತರೀಕೆರೆ ತಾಲೂಕಿಲ್ಲಿ ಎರಡು ಕೊರೊನಾ ಪ್ರಕರಣ ದಾಖಲಾಗಿದ್ದವು. ಇದಾಗಿ ಮೂರು ದಿನಗಳ ನಂತರ ಮೂಡಿಗೆರೆಯ ವೈದ್ಯನ ನೆಗೆಟಿವ್ ಫಲಿತಾಂಶ ಬಂದಿತ್ತು. ಇದರಿಂದ ಮೂಡಿಗೆರೆ ತಾಲೂಕಿನ ಜನರು ನಿಟ್ಟುಸಿರುವ ಬಿಟ್ಟಿದ್ದರು. ಇದರ ಬೆನ್ನಲ್ಲೆ ಇದೀಗ ತರೀಕೆರೆಯ ಸೋಂಕಿತ ಗರ್ಭಿಣಿ ವರದಿ ಸಹ ನೆಗೆಟಿವ್ ಬಂದಿದ್ದು, ಈ ವರದಿಯಿಂದ ತಾಲೂಕಿನ ಜನ ಹರ್ಷ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತವು ಬೆಂಗಳೂರಿಗೆ ಕಳುಹಿಸಿದ್ದ ಸ್ಯಾಂಪಲ್​​ನಲ್ಲಿ ನೆಗೆಟಿವ್ ಬಂದಿದ್ದು, ಈ ಗರ್ಭಿಣಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಐದು ಬಾರಿ ಕಳುಹಿಸಿದ್ದರು. ಐದು ಬಾರಿ ನೆಗೆಟಿವ್ ಎಂದು ವರದಿ ಬಂದಿದೆ.

ಈ ಕಾರಣದಿಂದ ಗರ್ಭಿಣಿಯನ್ನು ಕೋವಿಡ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು, ತರೀಕೆರೆಯ ಕೋಡಿ ಕ್ಯಾಂಪ್​ನ ಜನರು ಈ ಮಹಿಳೆಯನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.

ಗರ್ಭಿಣಿಯನ್ನು ಬರಮಾಡಿಕೊಂಡ ಗ್ರಾಮಸ್ಥರು

ಈ ಮಹಿಳೆ ಹಾಗೂ ಆಕೆಯ ಕುಟುಂಬದ ಸದಸ್ಯರಿಗೆ ಹೂವಿನ ಹಾರ ಹಾಕಿ, ಚಪ್ಪಾಳೆ ಹೊಡೆದು, ಪಟಾಕಿ ಸಿಡಿಸಿ ಗರ್ಭಿಣಿಯನ್ನು ಬರ ಮಾಡಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 14 ಕೊರೊನಾ ಪಾಸಿಟಿವ್ ಪ್ರಕರಣ ಇದ್ದು, ಈ ಎಲ್ಲಾ ಕೊರೊನಾ ರೋಗಿಗಳನ್ನು ಕೋವಿಡ್ ಆಸ್ವತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಹಾಗೂ ತರೀಕೆರೆ ತಾಲೂಕಿಲ್ಲಿ ಎರಡು ಕೊರೊನಾ ಪ್ರಕರಣ ದಾಖಲಾಗಿದ್ದವು. ಇದಾಗಿ ಮೂರು ದಿನಗಳ ನಂತರ ಮೂಡಿಗೆರೆಯ ವೈದ್ಯನ ನೆಗೆಟಿವ್ ಫಲಿತಾಂಶ ಬಂದಿತ್ತು. ಇದರಿಂದ ಮೂಡಿಗೆರೆ ತಾಲೂಕಿನ ಜನರು ನಿಟ್ಟುಸಿರುವ ಬಿಟ್ಟಿದ್ದರು. ಇದರ ಬೆನ್ನಲ್ಲೆ ಇದೀಗ ತರೀಕೆರೆಯ ಸೋಂಕಿತ ಗರ್ಭಿಣಿ ವರದಿ ಸಹ ನೆಗೆಟಿವ್ ಬಂದಿದ್ದು, ಈ ವರದಿಯಿಂದ ತಾಲೂಕಿನ ಜನ ಹರ್ಷ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತವು ಬೆಂಗಳೂರಿಗೆ ಕಳುಹಿಸಿದ್ದ ಸ್ಯಾಂಪಲ್​​ನಲ್ಲಿ ನೆಗೆಟಿವ್ ಬಂದಿದ್ದು, ಈ ಗರ್ಭಿಣಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಐದು ಬಾರಿ ಕಳುಹಿಸಿದ್ದರು. ಐದು ಬಾರಿ ನೆಗೆಟಿವ್ ಎಂದು ವರದಿ ಬಂದಿದೆ.

ಈ ಕಾರಣದಿಂದ ಗರ್ಭಿಣಿಯನ್ನು ಕೋವಿಡ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು, ತರೀಕೆರೆಯ ಕೋಡಿ ಕ್ಯಾಂಪ್​ನ ಜನರು ಈ ಮಹಿಳೆಯನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ.

ಗರ್ಭಿಣಿಯನ್ನು ಬರಮಾಡಿಕೊಂಡ ಗ್ರಾಮಸ್ಥರು

ಈ ಮಹಿಳೆ ಹಾಗೂ ಆಕೆಯ ಕುಟುಂಬದ ಸದಸ್ಯರಿಗೆ ಹೂವಿನ ಹಾರ ಹಾಕಿ, ಚಪ್ಪಾಳೆ ಹೊಡೆದು, ಪಟಾಕಿ ಸಿಡಿಸಿ ಗರ್ಭಿಣಿಯನ್ನು ಬರ ಮಾಡಿಕೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 14 ಕೊರೊನಾ ಪಾಸಿಟಿವ್ ಪ್ರಕರಣ ಇದ್ದು, ಈ ಎಲ್ಲಾ ಕೊರೊನಾ ರೋಗಿಗಳನ್ನು ಕೋವಿಡ್ ಆಸ್ವತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಮುಂದುವರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.