ಚಿಕ್ಕಮಗಳೂರು : ಒಮಿಕ್ರಾನ್ ವೈರಸ್ ವಿಚಾರದಲ್ಲಿ ಈಗ ಮಾಹಿತಿ ಬರುತ್ತಿದೆ. ನಿಖರವಾಗಿ ಯಾವುದೇ ಪ್ರಕರಣಗಳು ಹೊರ ಬರುತ್ತಿಲ್ಲ. ಅಲ್ಲಿ ಇಲ್ಲಿ ಒಂದೊಂದು ಪ್ರಕರಣಗಳ ಬಗ್ಗೆ ವರದಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷರ ಡಿ.ಕೆ ಶಿವಕುಮಾರ್ ಹೇಳಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವೈರಸ್ ಬಗ್ಗೆ ಭಯದ ವಾತಾವರಣ ಸೃಷ್ಟಿಸಬಾರದು. ಸರ್ಕಾರ, ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ವಹಿಸಬೇಕು. ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ, ನಾವು ಅಡ್ಡಿ ಬರುವುದಿಲ್ಲ ಎಂದರು.
ಈಗಾಗಲೇ ಇಡೀ ದೇಶದ ಜನರು ನರಳುತ್ತಿದ್ದಾರೆ. ಸುಮ್ನೆ ಭಯ ಉಂಟು ಮಾಡಿ, ಎಲ್ಲಾ ವ್ಯವಹಾರಗಳನ್ನು ನಿಲ್ಲಿಸುವಂತೆ ಆಗಬಾರದು. ಜಾಗ್ರತೆ ಇರಬೇಕು. ಇದರಲ್ಲಿ ಕೂಡ ಲಂಚ ಹೊಡೆಯುವುದನ್ನು ಸರ್ಕಾರ ಬಿಡಬೇಕು ಎಂದು ಡಿಕೆಶಿ ಆಗ್ರಹಿಸಿದರು.