ಚಿಕ್ಕಮಗಳೂರು: ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಕರ್ನಾಟಕದ ಸುಪ್ರಸಿದ್ಧ ಹೊರನಾಡು ದೇವಾಲಯ ಇಂದು ಬಂದ್ ಆಗಲಿದೆ ಎಂದು ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಶಿ ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ದೇವಸ್ಥಾನದ ಆಡಳಿತ ಮಂಡಳಿಯೂ ಸಾಥ್ ನೀಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನಪೂರ್ಣೇಶ್ವರಿ ದರ್ಶನವನ್ನು ಮುಂದೂಡಲು ಮನವಿ ಮಾಡಲಾಗಿದೆ ಎಂದರು.
ಆದರೆ ಕ್ಷೇತ್ರದಲ್ಲಿ ನಿರಂತರ ಪೂಜೆ, ಹೋಮ-ಹವನ ನಡೆಯಲಿದ್ದು, ವೈರಸ್ ಕ್ಷೀಣಿಸಲು ದೇವರಲ್ಲಿ ವಿಶೇಷ ಪೂಜೆ, ಹಾಗೂ ಪ್ರಾರ್ಥನೆ ಮಾಡಲಾಗುವುದು ಎಂದಿದ್ದಾರೆ.