ETV Bharat / state

ವರುಣನ ರೌದ್ರ ನರ್ತನಕ್ಕೆ ಕಾಫಿ ನಾಡಿನ ಜನತೆ ಕಂಗಾಲು... ಜನಜೀವನ ಅಸ್ತವ್ಯಸ್ತ! - undefined

ಮಹಾಮಳೆಗೆ ಮಲೆನಾಡು ತತ್ತರಿಸಿದೆ. ಮೂಡಿಗೆರೆಯಲ್ಲಿ ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಹೇಮಾವತಿ ನದಿ ಪ್ರವಾಹದ ರೀತಿ ಹರಿಯುತ್ತಿದೆ. ಜೀವನದಿಗಳಾದ ಹೇಮಾವತಿ, ತುಂಗ- ಭದ್ರ ನದಿಗಳು ದಿನದಿಂದ ದಿನಕ್ಕೆ ತುಂಬಿ ಹರಿಯುತ್ತಿವೆ. ಮೂಡಿಗೆರೆಯ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತದಲ್ಲಿದೆ. ಹೀಗಾಗಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ.

ವರುಣನ ರೌದ್ರ ನರ್ತನಕ್ಕೆ ಕಾಫಿ ನಾಡಿನ ಜನತೆ ಕಂಗಾಲು
author img

By

Published : Jul 6, 2019, 1:21 PM IST

ಚಿಕ್ಕಮಗಳೂರು : ಮಹಾಮಳೆಗೆ ಮಲೆನಾಡಿಗರು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೌದು, ಮೈದುಂಬಿ ಹರಿಯುತ್ತಿರೋ ಹೇಮಾವತಿ ನದಿ. ಜಲಾವೃತಗೊಂಡಿರೋ ತೋಟಗಳು. ಮುಳುಗಿರೋ ಹೊಲ-ಗದ್ದೆಗಳು. ಎಲ್ಲೆಂದರಲ್ಲಿ ಮನಸ್ಸೋ ಇಚ್ಛೆ ಹರಿಯುತ್ತಿರೋ ನೀರು. ಮಲೆನಾಡು ಭಾಗದಲ್ಲಿ ಎಲ್ಲಿ ನೋಡಿದರೂ ನೀರು, ನೀರು ಹಾಗೂ ನೀರು. ಎರಡು ತಿಂಗಳಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರಿಗೆ ಸದ್ಯ ಮನೆಯಿಂದ ಹೊರಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಸತತ ಮೂರು ದಿನಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮೂಡಿಗೆರೆಯ ಗ್ರಾಮೀಣ ಭಾಗದಲ್ಲಿ ಎರಡು ದಿನಗಳಿಂದ ಕರೆಂಟ್ ಇಲ್ಲ. ಮೂಲರಹಳ್ಳಿ ಬಳಿ ಗುಡ್ಡ ಕುಸಿದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಬೀಸುತ್ತಿರೋ ರಣ ಗಾಳಿ ಭಯಾನಕತೆ ಸೃಷ್ಟಿಸುತ್ತಿದೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ವರುಣನ ರೌದ್ರ ನರ್ತನಕ್ಕೆ ಕಾಫಿ ನಾಡಿನ ಜನತೆ ಕಂಗಾಲು

ಮಕ್ಕಳು ಶಾಲೆಗೆ ಹೋಗೋದಕ್ಕೂ ಸಾಧ್ಯವಾಗುತ್ತಿಲ್ಲ. ಜನರಿಗೆ ಮನೆಯಿಂದ ಹೊರಬರಲೂ ಆಗುತ್ತಿಲ್ಲ. ತೋಟ-ಹೊಲ-ಗದ್ದೆಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಮೂರು ದಿನದ ವರುಣನ ರೌದ್ರ ನರ್ತನಕ್ಕೆ ಮಲೆನಾಡು ನಿಜಕ್ಕೂ ಬೆಚ್ಚಿ ಬಿದ್ದಿದೆ.

ಇನ್ನು ಪಶ್ಚಿಮ ಘಟ್ಟಗಳ ಸಾಲು, ಶೃಂಗೇರಿ, ಕಳಸ, ಕೆರೆಕಟ್ಟೆ, ಕುದುರೆಮುಖ ಭಾಗದಲ್ಲಿ ಸುರಿಯತ್ತಿರೋ ಮಹಾಮಳೆಗೆ ತುಂಗಾ-ಭದ್ರೆಯ ಒಡಲು ಕೂಡ ತುಂಬಿದೆ. ಮಳೆ ಜೊತೆ ಬೀಸುತ್ತಿರುವ ಭಾರೀ ಗಾಳಿಯಿಂದ ಮಲೆನಾಡಿನ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ಮೂರೇ ದಿನದ ಮಳೆಗೆ ಕಾಫಿ, ಅಡಿಕೆ, ಮೆಣಸಿಗೆ ರೋಗದ ಭೀತಿ ಶುರುವಾಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ಇದೇ ರೀತಿ ನಿರಂತರ ಮಳೆ ಸುರಿದರೆ ಮುಂದೆ ಹೇಗೆ ಎಂದು ಮಲೆನಾಡಿನ ಜನರು ಆತಂಕದಲ್ಲಿ ಇರುವಂತಾಗಿದೆ.

ಚಿಕ್ಕಮಗಳೂರು : ಮಹಾಮಳೆಗೆ ಮಲೆನಾಡಿಗರು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಹೌದು, ಮೈದುಂಬಿ ಹರಿಯುತ್ತಿರೋ ಹೇಮಾವತಿ ನದಿ. ಜಲಾವೃತಗೊಂಡಿರೋ ತೋಟಗಳು. ಮುಳುಗಿರೋ ಹೊಲ-ಗದ್ದೆಗಳು. ಎಲ್ಲೆಂದರಲ್ಲಿ ಮನಸ್ಸೋ ಇಚ್ಛೆ ಹರಿಯುತ್ತಿರೋ ನೀರು. ಮಲೆನಾಡು ಭಾಗದಲ್ಲಿ ಎಲ್ಲಿ ನೋಡಿದರೂ ನೀರು, ನೀರು ಹಾಗೂ ನೀರು. ಎರಡು ತಿಂಗಳಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರಿಗೆ ಸದ್ಯ ಮನೆಯಿಂದ ಹೊರಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಸತತ ಮೂರು ದಿನಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮೂಡಿಗೆರೆಯ ಗ್ರಾಮೀಣ ಭಾಗದಲ್ಲಿ ಎರಡು ದಿನಗಳಿಂದ ಕರೆಂಟ್ ಇಲ್ಲ. ಮೂಲರಹಳ್ಳಿ ಬಳಿ ಗುಡ್ಡ ಕುಸಿದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಬೀಸುತ್ತಿರೋ ರಣ ಗಾಳಿ ಭಯಾನಕತೆ ಸೃಷ್ಟಿಸುತ್ತಿದೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ವರುಣನ ರೌದ್ರ ನರ್ತನಕ್ಕೆ ಕಾಫಿ ನಾಡಿನ ಜನತೆ ಕಂಗಾಲು

ಮಕ್ಕಳು ಶಾಲೆಗೆ ಹೋಗೋದಕ್ಕೂ ಸಾಧ್ಯವಾಗುತ್ತಿಲ್ಲ. ಜನರಿಗೆ ಮನೆಯಿಂದ ಹೊರಬರಲೂ ಆಗುತ್ತಿಲ್ಲ. ತೋಟ-ಹೊಲ-ಗದ್ದೆಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಮೂರು ದಿನದ ವರುಣನ ರೌದ್ರ ನರ್ತನಕ್ಕೆ ಮಲೆನಾಡು ನಿಜಕ್ಕೂ ಬೆಚ್ಚಿ ಬಿದ್ದಿದೆ.

ಇನ್ನು ಪಶ್ಚಿಮ ಘಟ್ಟಗಳ ಸಾಲು, ಶೃಂಗೇರಿ, ಕಳಸ, ಕೆರೆಕಟ್ಟೆ, ಕುದುರೆಮುಖ ಭಾಗದಲ್ಲಿ ಸುರಿಯತ್ತಿರೋ ಮಹಾಮಳೆಗೆ ತುಂಗಾ-ಭದ್ರೆಯ ಒಡಲು ಕೂಡ ತುಂಬಿದೆ. ಮಳೆ ಜೊತೆ ಬೀಸುತ್ತಿರುವ ಭಾರೀ ಗಾಳಿಯಿಂದ ಮಲೆನಾಡಿನ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ಮೂರೇ ದಿನದ ಮಳೆಗೆ ಕಾಫಿ, ಅಡಿಕೆ, ಮೆಣಸಿಗೆ ರೋಗದ ಭೀತಿ ಶುರುವಾಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ. ಇದೇ ರೀತಿ ನಿರಂತರ ಮಳೆ ಸುರಿದರೆ ಮುಂದೆ ಹೇಗೆ ಎಂದು ಮಲೆನಾಡಿನ ಜನರು ಆತಂಕದಲ್ಲಿ ಇರುವಂತಾಗಿದೆ.

Intro:Kn_Ckm_01_Heavy Rain_pkg_7202347Body:

ಚಿಕ್ಕಮಗಳೂರು :-

ಮಲೆನಾಡಿನ ಮಹಾಮಳೆಗೆ ಮಲೆನಾಡಿಗರು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರೋ ಭಾರೀ ಮಳೆಗೆ ಜನಜೀವನ ಮಲೆನಾಡು ಭಾಗದಲ್ಲಿ ಅಸ್ತವ್ಯಸ್ತಗೊಂಡಿದೆ. ಜೀವನದಿಗಳಾದ ಹೇಮಾವತಿ, ತುಂಗ-ಭದ್ರ ನದಿಗಳು ದಿನದಿಂದಾ ದಿನಕ್ಕೆ ತುಂಬಿ ಹರಿಯುತ್ತಿವೆ, ಮೂಡಿಗೆರೆಯ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತದಲ್ಲಿದೆ. ಮೂಡಿಗೆರೆಯಲ್ಲಿ ಮೂರು ದಿನಗಳಿಂದಾ ನಿರಂತರ ಮಳೆ ಸುರಿಯುತ್ತಿದ್ದು ಹೇಮಾವತಿ ನದಿ ಪ್ರವಾಹದ ರೀತಿ ಹರಿಯುತ್ತಿದ್ದು ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.ಈ ಕುರಿತ ಒಂದು ವರದಿ ಇಲ್ಲಿದೇ ನೋಡಿ......

ಹೌದು ಮೈದುಂಬಿ ಹರಿಯುತ್ತಿರೋ ಹೇಮಾವತಿ ನದಿ. ಜಲಾವೃತಗೊಂಡಿರೋ ತೋಟಗಳು. ಮುಳುಗಿರೋ ಹೊಲಗದ್ದೆಗಳು. ಎಲ್ಲೆಂದರಲ್ಲಿ ಮನಸ್ಸೋ ಇಚ್ಛೆ ಹರಿಯುತ್ತಿರೋ ನೀರು. ಮಲೆನಾಡು ಭಾಗದಲ್ಲಿ ಎಲ್ಲಿ ನೋಡಿದರೂ ಮಳೆ. ಎರಡು ತಿಂಗಳಿಂದ ಮಳೆಗಾಗಿ ಆಕಾಶ ನೋಡುತ್ತಿದ್ದ ಮಲೆನಾಡಿಗರಿಗೆ ಇಂದು ಮನೆಯಿಂದ ಹೊರಬರಲು ಆಗದಂತ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಸತತ ಮೂರು ದಿನಗಳಿಂದಾ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವರುಣನ ರೌದ್ರನರ್ತನಕ್ಕೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಮೂಡಿಗೆರೆಯ ಗ್ರಾಮೀಣ ಭಾಗದಲ್ಲಿ ಎರಡು ದಿನಗಳಿಂದ ಕರೆಂಟ್ ಇಲ್ಲ. ಮೂಲರಹಳ್ಳಿ ಬಳಿ ಗುಡ್ಡ ಕುಸಿದು ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಬೀಸ್ತಿರೋ ರಣ ಗಾಳಿ ಭಯಾನಕತೆ ಸೃಷ್ಟಿಸ್ತಿದೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ.

ವರುಣನ ಅಬ್ಬರಕ್ಕೆ ಮಲೆನಾಡಿಗರು ಬದುಕು ತತ್ತರಿಸಿದ್ದು, ಮಕ್ಕಳು ಶಾಲೆಗೆ ಹೋಗೋಕೋ ಸಾಧ್ಯವಾಗುತ್ತಿಲ್ಲ. ಜನ ಮನೆಯಿಂದ ಹೊರಬರೋಕು ಆಗುತ್ತಿಲ್ಲ. ತೋಟ-ಹೊಲ-ಗದ್ದೆಗಳಿಗೂ ಹೋಗಲು ಸಾಧ್ಯವಾಗುಲತ್ತಿಲ್ಲ. ಮೂರೇ ದಿನದ ವರುಣನ ರೌದ್ರ ನರ್ತನಕ್ಕೆ ಮಲೆನಾಡು ಬೆಚ್ಚಿ ಬಿದ್ದಿದೆ. ಇನ್ನೂ ಪಶ್ಚಿಮ ಘಟ್ಟಗಳ ಸಾಲು, ಶೃಂಗೇರಿ, ಕಳಸ, ಕೆರೆಕಟ್ಟೆ, ಕುದುರೆಮುಖ ಭಾಗದಲ್ಲಿ ಸುರಿಯತ್ತಿರೋ ಮಹಾಮಳೆಗೆ ತುಂಗಾ-ಭದ್ರೆಯ ಒಡಲು ಕೂಡ ಜೋರಾಗಿದೆ. ಭದ್ರಾ ನದಿ ಮಳೆಗಾಲದಲ್ಲಿ ಭದ್ರೆಯ ಒಡಲು ತುಂಬಿ ಹರಿಯುತ್ತಿದೆ. ಕೊಪ್ಪ, ಎನ್.ಆರ್.ಪುರ, ವರುಣನ ಅಬ್ಬರ ಸಾಧಾರಾಣವಾಗಿದ್ದು ಮಳೆ ಮುಂದುವರೆದಿದೆ. ಮಳೆ ಜೊತೆ ಬೀಸಿಸುತ್ತಿರುವ ಭಾರೀ ಗಾಳಿಯಿಂದ ಮಲೆನಾಡಿನ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು ಕುಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ.

ಒಟ್ಟಾರೆಯಾಗಿ ಚಿಕ್ಕಮಗಳೂರು ಜಿಲ್ಲೆ ಹೊರ ಜಿಲ್ಲೆಯವರಿಗೆ ಭೂಲೋಕದ ಸ್ವರ್ಗದ ರೀತಿ ಕಾಣಿಸುತ್ತದೆ. ಮಳೆಯಿಂದ ಮಲೆನಾಡಿನ ಜನರು ಅನುಭವಿಸುತ್ತಿರುವ ನೋವು ಹೇಳತೀರಾಗಿದೆ. ಮೂರೇ ದಿನ ಮಳೆಗೆ ಕಾಫಿ-ಅಡಿಕೆ-ಮೆಣಸಿಗೆ ಶೀಥ ಹೆಚ್ಚಾಗಿದೆ. ಭತ್ತದ ಗದ್ದೆಗಳು ಜಲಾವೃತವಾಗಿವೆ.ಇದೇ ರೀತಿ ನಿರಂತರ ಮಳೆ ಸುರಿದರೇ ಮುಂದೆ ಹೇಗೆ ಎಂದೂ ಮಲೆನಾಡಿನ ಜನರು ಆತಂಕದಲ್ಲಿ ಇರುವಂತಾಗಿದೆ...

byte:-1 ಸದಾಶಿವ ಗೌಡ.......... ಸ್ಥಳೀಯರು (ಛತ್ರಿ ಇರುವ ವ್ಯಕ್ತಿ)
byte:-2 ಆನಂದ್............ ಸ್ಥಳೀಯರು

Conclusion:ರಾಜಕುಮಾರ್......
ಈ ಟಿವಿ ಭಾರತ್......
ಚಿಕ್ಕಮಗಳೂರು......

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.