ETV Bharat / state

ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯ​ದೆ ಡ್ರಗ್​ ಮಾಫಿಯಾ ಹತ್ತಿಕ್ಕಲಿದೆ: ಸಚಿವ ಸಿ. ಟಿ. ರವಿ

ಡ್ರಗ್ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಇದರ ನಿಯಂತ್ರಣಕ್ಕೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡ ಬೇರು ಸಮೇತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಆದರೆ, ಸದ್ಯ ಸರ್ಕಾರ ಮಾಫಿಯಾವನ್ನ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.

author img

By

Published : Sep 4, 2020, 4:53 PM IST

Govt will crush the drug mafia without bothering to any pressure: Minister C. T. Ravi
ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯ​ದೆ ಡ್ರಗ್​ ಮಾಫಿಯಾ ಹತ್ತಿಕ್ಕಲಿದೆ: ಸಚಿವ ಸಿ. ಟಿ. ರವಿ

ಚಿಕ್ಕಮಗಳೂರು: ಚಂದನವನದಲ್ಲಿ ಡ್ರಗ್​ ಮಾಫಿಯಾ ಕುರಿತಂತೆ ಜಿಲ್ಲೆಯಲ್ಲಿ ಸಚಿವ ಸಿ. ಟಿ. ರವಿ ಹೇಳಿಕೆ ನೀಡಿದ್ದಾರೆ.

ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯ​ದೆ ಡ್ರಗ್​ ಮಾಫಿಯಾ ಹತ್ತಿಕ್ಕಲಿದೆ: ಸಚಿವ ಸಿ. ಟಿ. ರವಿ

ಡ್ರಗ್ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಇದರ ನಿಯಂತ್ರಣಕ್ಕೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡ ಬೇರು ಸಮೇತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಆದರೆ, ಸದ್ಯ ಸರ್ಕಾರ ಮಾಫಿಯಾವನ್ನ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

ಈಗಾಗಲೇ 84 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಯುತ್ತಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ಜಾಲ ಹೊರ ರಾಜ್ಯ, ಹೊರ ದೇಶಗಳನ್ನೂ ಸುತ್ತಿವರೆದಿದೆ. ಇದರಲ್ಲಿ ಕೆಲವೆಡೆ ಭಯೋತ್ಪಾದಕರು ತಳುಕು ಹಾಕಿಕೊಂಡಿದ್ದರೆ ಇನ್ನೂ ಕೆಲವೆಡೆ ರಾಜಕಾರಣಿಗಳು, ಸಿನಿಮಾ ನಟ-ನಟಿಯರನ್ನು ತಳುಕು ಹಾಕಿಕೊಂಡಿದ್ದಾರೆ.

ಇನ್ನೂ ಡ್ರಗ್​ ಮಾಫಿಯಾದಲ್ಲಿ ಯಾರೇ ಇದ್ರು ಸರಿಯೇ, ಅವರ ಗಂಭೀರ ತನಿಖೆಯಾಗ್ತಿದೆ. ಯುವ ಜನರನ್ನ ಈ ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ. ತನಿಖೆ ತಂಡದ ಮೇಲೆ ಒತ್ತಡ ತರುವಂತಹ ಕೆಲಸ ನಡೆಯುತ್ತಿದೆ. ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದರು.

ಚಿಕ್ಕಮಗಳೂರು: ಚಂದನವನದಲ್ಲಿ ಡ್ರಗ್​ ಮಾಫಿಯಾ ಕುರಿತಂತೆ ಜಿಲ್ಲೆಯಲ್ಲಿ ಸಚಿವ ಸಿ. ಟಿ. ರವಿ ಹೇಳಿಕೆ ನೀಡಿದ್ದಾರೆ.

ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯ​ದೆ ಡ್ರಗ್​ ಮಾಫಿಯಾ ಹತ್ತಿಕ್ಕಲಿದೆ: ಸಚಿವ ಸಿ. ಟಿ. ರವಿ

ಡ್ರಗ್ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಇದರ ನಿಯಂತ್ರಣಕ್ಕೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡ ಬೇರು ಸಮೇತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಆದರೆ, ಸದ್ಯ ಸರ್ಕಾರ ಮಾಫಿಯಾವನ್ನ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.

ಈಗಾಗಲೇ 84 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಯುತ್ತಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ಜಾಲ ಹೊರ ರಾಜ್ಯ, ಹೊರ ದೇಶಗಳನ್ನೂ ಸುತ್ತಿವರೆದಿದೆ. ಇದರಲ್ಲಿ ಕೆಲವೆಡೆ ಭಯೋತ್ಪಾದಕರು ತಳುಕು ಹಾಕಿಕೊಂಡಿದ್ದರೆ ಇನ್ನೂ ಕೆಲವೆಡೆ ರಾಜಕಾರಣಿಗಳು, ಸಿನಿಮಾ ನಟ-ನಟಿಯರನ್ನು ತಳುಕು ಹಾಕಿಕೊಂಡಿದ್ದಾರೆ.

ಇನ್ನೂ ಡ್ರಗ್​ ಮಾಫಿಯಾದಲ್ಲಿ ಯಾರೇ ಇದ್ರು ಸರಿಯೇ, ಅವರ ಗಂಭೀರ ತನಿಖೆಯಾಗ್ತಿದೆ. ಯುವ ಜನರನ್ನ ಈ ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ. ತನಿಖೆ ತಂಡದ ಮೇಲೆ ಒತ್ತಡ ತರುವಂತಹ ಕೆಲಸ ನಡೆಯುತ್ತಿದೆ. ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.