ETV Bharat / state

ಸಾವಿನ ಮನೆಗೆ ಹೊರಟವರನ್ನೂ ಬಿಡದ ಸಾಲ ಕೊಟ್ಟ ಫೈನಾನ್ಸ್​​ ಕಂಪನಿ..

author img

By

Published : Nov 15, 2019, 10:11 PM IST

ಸಾವಿನ ಮನೆಗೆ ಹೊರಟವರನ್ನೂ ಅಡ್ಡಗಟ್ಟಿ ಖಾಸಗಿ ಫೈನಾನ್ಸ್ ಕಂಪನಿಯವರು ಕಂತಿನ ಹಣ ಪಾವತಿಸುವಂತೆ ಪೀಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಸಾವಿನ ಮನೆಗೆ ಹೊರಟವರನ್ನು ಬಿಡದ ಸಾಲ ಕೊಟ್ಟ ಫೈನಾನ್ಸ್​​ ಕಂಪೆನಿ..!

ಚಿಕ್ಕಮಗಳೂರು: ಸಾವಿನ ಮನೆಗೆ ಹೊರಟವರನ್ನು ಅಡ್ಡಗಟ್ಟಿ ಖಾಸಗಿ ಫೈನಾನ್ಸ್ ಕಂಪನಿಯವರು ಕಂತಿನ ಹಣ ಕಟ್ಟಿ ಮುಂದೆ ಹೋಗಿ ಎಂದು ಸಾಲಗಾರರನ್ನು ಹಿಡಿದು ರಸ್ತೆಯ ಮಧ್ಯೆ ನಿಲ್ಲಿಸಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ಕೆಲವರಿಗೆ ಖಾಸಗಿ ಫೈನಾನ್ಸ್ ಕಂಪನಿಯವರು ಮನೆಗೆ ಬಂದು ಸಾಲ ನೀಡಿದ್ದಾರೆ. ಆದರೆ, ಕಾರಣಾಂತರಗಳಿಂದ ಸಾಲ ಕಟ್ಟಲು ಆಗಿಲ್ಲ. ಅದನ್ನು ವಸೂಲಿ ಮಾಡದೇ ಜಾಗ ಖಾಲಿ ಮಾಡಲ್ಲ ಎಂದು ಫೈನಾನ್ಸ್ ಕಂಪನಿಯ ಸಿಬ್ಬಂದಿ ಮಾತಿನ ಜಿದ್ದಿಗೆ ಬಿದ್ದಿದ್ದಾನೆ.

ಸಾವಿನ ಮನೆಗೆ ಹೊರಟವರನ್ನು ಬಿಡದ ಸಾಲ ಕೊಟ್ಟ ಫೈನಾನ್ಸ್​​ ಕಂಪನಿ..

ನಮಗೆ ಸಮಸ್ಯೆ ಇದೆ ಮುಂದಿನ ವಾರ ಕಟ್ಟುತ್ತೇವೆ ಎಂದು ಹೇಳಿದರೂ ಬಿಡದ ಸಿಬ್ಬಂದಿ ಕಾರಿಗೆ ಅಡ್ಡಗಟ್ಟಿ ದುಡ್ಡು ಕಟ್ಟಿ ಇಲ್ಲದಿದ್ದರೇ ಕಾರನ್ನೇ ನನ್ನ ಮೇಲೆ ಹೊಡೆದುಕೊಂಡು ಹೋಗಿ ಎಂದೂ ಹೇಳಿದ್ದಾನೆ. ಸಾಲ ತೆಗೆದುಕೊಂಡವರು ನಮ್ಮ ಮನೆಯಲ್ಲಿ ಸಾವಾಗಿದೆ. ಈಗ ನಮ್ಮ ಹತ್ತಿರ ದುಡ್ಡಿಲ್ಲ ಮುಂದಿನ ವಾರ ಕಟ್ಟುತ್ತೇವೆ. ಡ್ಯೂ ಆದರೂ ಪರ್ವಾಗಿಲ್ಲ ಅದನ್ನೂ ಸೇರಿಸಿ ಕಟ್ಟುತ್ತೇವೆ ಎಂದು ಅಂಗಲಾಚುತ್ತಿದ್ದರೂ, ಇದಕ್ಕೆ ಒಪ್ಪದ ಫೈನಾನ್ಸ್ ಸಿಬ್ಬಂದಿ, ನೀವು ಹಣ ಕಟ್ಟದಿದ್ದರೇ ನನ್ನ ಕೆಲಸ ಹೋಗುತ್ತದೆ. ನನ್ನ ಕುಟುಂಬ ಬೀದಿಗೆ ಬೀಳುತ್ತದೆ. ನಿಮಗೆ ದುಡ್ಡು ಕೊಟ್ಟಿರುವ ತಪ್ಪಿಗೆ ನಾವು ಇವೆಲ್ಲಾ ಅನುಭವಿಸುವಂತಾಗಿದೆ. ಹಣವನ್ನು ಸಂಪೂರ್ಣ ಕಟ್ಟಿ ಎಂದು ಹೇಳುತ್ತಿಲ್ಲ. ಇನ್ನೂ ನಿಮಗೆ ಎರಡು ವರ್ಷ ಕಾಲಾವಕಾಶ ಇದೆ. ಆದರೆ, ಈ ವಾರದ ಕಂತಿನ ಹಣ ಮಾತ್ರ ಕಟ್ಟಿ ಎಂದು ಹೇಳುತ್ತಿದ್ದಾನೆ. ಇಲ್ಲಿ ಸರಿ ಯಾರದ್ದು ತಪ್ಪು ಯಾರದ್ದು ಎಂದು ಹೇಳೋದೇ ಕಷ್ಟಕರವಾಗಿದ್ದು, ಈ ವಿಡಿಯೋ ಸದ್ಯ ಚಿಕ್ಕಮಗಳೂರಿನ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಚಿಕ್ಕಮಗಳೂರು: ಸಾವಿನ ಮನೆಗೆ ಹೊರಟವರನ್ನು ಅಡ್ಡಗಟ್ಟಿ ಖಾಸಗಿ ಫೈನಾನ್ಸ್ ಕಂಪನಿಯವರು ಕಂತಿನ ಹಣ ಕಟ್ಟಿ ಮುಂದೆ ಹೋಗಿ ಎಂದು ಸಾಲಗಾರರನ್ನು ಹಿಡಿದು ರಸ್ತೆಯ ಮಧ್ಯೆ ನಿಲ್ಲಿಸಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ಕೆಲವರಿಗೆ ಖಾಸಗಿ ಫೈನಾನ್ಸ್ ಕಂಪನಿಯವರು ಮನೆಗೆ ಬಂದು ಸಾಲ ನೀಡಿದ್ದಾರೆ. ಆದರೆ, ಕಾರಣಾಂತರಗಳಿಂದ ಸಾಲ ಕಟ್ಟಲು ಆಗಿಲ್ಲ. ಅದನ್ನು ವಸೂಲಿ ಮಾಡದೇ ಜಾಗ ಖಾಲಿ ಮಾಡಲ್ಲ ಎಂದು ಫೈನಾನ್ಸ್ ಕಂಪನಿಯ ಸಿಬ್ಬಂದಿ ಮಾತಿನ ಜಿದ್ದಿಗೆ ಬಿದ್ದಿದ್ದಾನೆ.

ಸಾವಿನ ಮನೆಗೆ ಹೊರಟವರನ್ನು ಬಿಡದ ಸಾಲ ಕೊಟ್ಟ ಫೈನಾನ್ಸ್​​ ಕಂಪನಿ..

ನಮಗೆ ಸಮಸ್ಯೆ ಇದೆ ಮುಂದಿನ ವಾರ ಕಟ್ಟುತ್ತೇವೆ ಎಂದು ಹೇಳಿದರೂ ಬಿಡದ ಸಿಬ್ಬಂದಿ ಕಾರಿಗೆ ಅಡ್ಡಗಟ್ಟಿ ದುಡ್ಡು ಕಟ್ಟಿ ಇಲ್ಲದಿದ್ದರೇ ಕಾರನ್ನೇ ನನ್ನ ಮೇಲೆ ಹೊಡೆದುಕೊಂಡು ಹೋಗಿ ಎಂದೂ ಹೇಳಿದ್ದಾನೆ. ಸಾಲ ತೆಗೆದುಕೊಂಡವರು ನಮ್ಮ ಮನೆಯಲ್ಲಿ ಸಾವಾಗಿದೆ. ಈಗ ನಮ್ಮ ಹತ್ತಿರ ದುಡ್ಡಿಲ್ಲ ಮುಂದಿನ ವಾರ ಕಟ್ಟುತ್ತೇವೆ. ಡ್ಯೂ ಆದರೂ ಪರ್ವಾಗಿಲ್ಲ ಅದನ್ನೂ ಸೇರಿಸಿ ಕಟ್ಟುತ್ತೇವೆ ಎಂದು ಅಂಗಲಾಚುತ್ತಿದ್ದರೂ, ಇದಕ್ಕೆ ಒಪ್ಪದ ಫೈನಾನ್ಸ್ ಸಿಬ್ಬಂದಿ, ನೀವು ಹಣ ಕಟ್ಟದಿದ್ದರೇ ನನ್ನ ಕೆಲಸ ಹೋಗುತ್ತದೆ. ನನ್ನ ಕುಟುಂಬ ಬೀದಿಗೆ ಬೀಳುತ್ತದೆ. ನಿಮಗೆ ದುಡ್ಡು ಕೊಟ್ಟಿರುವ ತಪ್ಪಿಗೆ ನಾವು ಇವೆಲ್ಲಾ ಅನುಭವಿಸುವಂತಾಗಿದೆ. ಹಣವನ್ನು ಸಂಪೂರ್ಣ ಕಟ್ಟಿ ಎಂದು ಹೇಳುತ್ತಿಲ್ಲ. ಇನ್ನೂ ನಿಮಗೆ ಎರಡು ವರ್ಷ ಕಾಲಾವಕಾಶ ಇದೆ. ಆದರೆ, ಈ ವಾರದ ಕಂತಿನ ಹಣ ಮಾತ್ರ ಕಟ್ಟಿ ಎಂದು ಹೇಳುತ್ತಿದ್ದಾನೆ. ಇಲ್ಲಿ ಸರಿ ಯಾರದ್ದು ತಪ್ಪು ಯಾರದ್ದು ಎಂದು ಹೇಳೋದೇ ಕಷ್ಟಕರವಾಗಿದ್ದು, ಈ ವಿಡಿಯೋ ಸದ್ಯ ಚಿಕ್ಕಮಗಳೂರಿನ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

Intro:Kn_Ckm_05_Money_Vasuli_av_7202347Body:ಚಿಕ್ಕಮಗಳೂರು :-

ಸಾವಿನ ಮನೆಗೆ ಹೊರಟವರ ಬಳಿ ಸಾಲ ನೀಡಿದ್ದ ಖಾಸಗೀ ಫೈನಾನ್ಸ್ ಕಂಪನಿಯವರು ಅಡ್ಡಗಟ್ಟಿ ಕಂತಿನ ಹಣ ಕಟ್ಟಿ ಮುಂದೆ ಹೋಗಿ ಎಂದೂ ಸಾಲ ಗಾರರನ್ನು ಹಿಡಿದು ರಸ್ತೆಯ ಮಧ್ಯೆ ನಿಲ್ಲಿಸಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ನಿಡಗೋಡು ಗ್ರಾಮದಲ್ಲಿ ಕೆಲವರಿಗೆ ಖಾಸಗೀ ಫೈನಾನ್ಸ್ ಕಂಪನಿಯವರು ಮನೆಗೆ ಬಂದೂ ಸಾಲ ನೀಡಿದ್ದಾರೆ.ಆದರೇ ಅನೇಕ ಸಮಸ್ಯೆಗಳಿಂದಾ ಸಾಲ ಕಟ್ಟಲು ಸ್ಥಳೀಯರಿಗೆ ಆಗಿಲ್ಲ. ಅದನ್ನು ವಸೂಲಿ ಮಾಡದೇ ನಾನು ಜಾಗ ಖಾಲಿ ಮಾಡೋಲ್ಲ ಎಂದೂ ಫೈನಾನ್ಸ್ ಕಂಪನಿಯ ಸಿಬ್ಬಂಧಿ ಮಾತಿನ ಜಿದ್ದಿಗೆ ಬಿದ್ದಿದ್ದಾನೆ. ಆನೆ ಕಾಲು ತುಳಿತದಿಂದಾ ಮೃತ ಪಟ್ಟ ವ್ಯಕ್ತಿಯನ್ನು ನಿಡುಗೋಡು ಗ್ರಾಮದವರು ಶವ ನೋಡಲು ಬೇರೆ ಊರಿಗೆ ಹೊರಟ್ಟಿದ್ದರು. ಅದೇ ಸಮಯಕ್ಕೆ ಬಂದ ಫೈನಾನ್ಸ್ ಸಿಬ್ಬಂಧಿ ಹಣದ ಕಂತೂ ಕಟ್ಟುವಂತೆ ಕೇಳಿಕೊಂಡಿದ್ದಾನೆ. ನಮ್ಮಗೆ ಸಮಸ್ಯೆ ಇದೆ ಮುಂದಿನ ವಾರ ಕಟ್ಟುತ್ತೇವೆ ಎಂದೂ ಹೇಳಿದರೂ ಬಿಡದ ಸಿಬ್ಬಂಧಿ ಕಾರಿಗೆ ಅಡ್ಡಗಟ್ಟಿ ದುಡ್ಡು ಕಟ್ಟಿ ಇಲ್ಲದಿದ್ದರೇ ಕಾರನ್ನೇ ನನ್ನ ಮೇಲೆ ಹೊಡೆದುಕೊಂಡು ಹೋಗಿ ಎಂದೂ ಹೇಳಿದ್ದಾನೆ. ಸಾಲ ತೆಗೆದುಕೊಂಡವರು ನಮ್ಮ ಮನೆಯಲ್ಲಿ ಸಾವಾಗಿದೆ ಈಗ ನಮ್ಮ ಹತ್ತಿರ ದುಡ್ಡಿಲ್ಲ ಮುಂದಿನ ವಾರ ಕಟ್ಟುತ್ತೇವೆ ಡ್ಯೂ ಆದರೂ ಪರ್ವಾಗಿಲ್ಲ ಅದನ್ನು ಸೇರಿಸಿ ಕಟ್ಟುತ್ತೇವೆ ಎಂದೂ ಅಂಗಲಾಚುತ್ತಿದ್ದರೂ ಇದಕ್ಕೆ ಒಪ್ಪದ ಫೈನಾನ್ಸ್ ಸಿಬ್ಬಂಧಿ ನೀವು ಹಣ ಕಟ್ಟದಿದ್ದರೇ ನನ್ನ ಕೆಲಸ ಹೋಗುತ್ತದೆ ನನ್ನ ಕುಟುಂಬ ಬೀದಿಗೆ ಬೀಳುತ್ತದೆ ನಿಮ್ಮಗೆ ದುಡ್ಡು ಕೊಟ್ಟ ತಪ್ಪಿಗೆ ನಾವು ಇವೆಲ್ಲಾ ಅನುಭವಿಸುವಂತಾಗಿದೆ. ಹಣವನ್ನು ಸಂಪೂರ್ಣ ಕಟ್ಟಿ ಎಂದೂ ಹೇಳುತ್ತಿಲ್ಲ ಇನ್ನು ನಿಮ್ಮಗೆ ಎರಡೂ ವರ್ಷ ಕಾಲವಕಾಶ ಇದೆ.ಆದರೇ ಈ ವಾರದ ಕಂತಿನ ಹಣ ಮಾತ್ರ ಕಟ್ಟಿ ಎಂದೂ ಹೇಳುತ್ತಿದ್ದಾನೆ.ಇಲ್ಲಿ ಯಾರದ್ದೂ ಸರಿ ಯಾರದ್ದೂ ತಪ್ಪು ಎಂದೂ ಹೇಳೋದೇ ಕಷ್ಟಕರವಾಗಿದ್ದು ಈ ವಿಡಿಯೋ ಸದ್ಯ ಚಿಕ್ಕಮಗಳೂರಿನ ಸಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ....

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು.....

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.