ETV Bharat / state

ಹೆಲ್ಮೆಟ್​​ ಧರಿಸಿದ್ದರೂ ಬೈಕ್​ ಸವಾರನ ತಲೆ ಅಪ್ಪಚ್ಚಿ!

ಬಸ್ಸಿನ ಟೈರ್​ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

author img

By

Published : Oct 28, 2019, 9:16 PM IST

ಹೆಲ್ಮೆಟ್ ದರಿಸಿದ್ದರೂ ಉಳಿಯಲಿಲ್ಲ ಪ್ರಾಣ..

ಚಿಕ್ಕಮಗಳೂರು: ಬಸ್ಸಿನ ಟೈರ್​ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

ಹೆಲ್ಮೆಟ್ ದರಿಸಿದ್ದರೂ ಉಳಿಯಲಿಲ್ಲ ಪ್ರಾಣ..

ಚಿಕ್ಕಮಗಳೂರು ತಾಲೂಕಿನ ಕರಿ ಸಿದ್ದನಹಳ್ಳಿ ನಿವಾಸಿ ಸೋಮಶೇಖರ್ (26) ಮೃತಪಟ್ಟವ ಎನ್ನಲಾಗಿದೆ. ಸೋಮಶೇಖರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಸರ್ಕಾರಿ ಬಸ್ಸಿಗೆ ಬೈಕ್ ಟಚ್ ಆಗಿದೆ. ಪರಿಣಾಮ ಸೋಮಶೇಖರ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಬಸ್ಸಿನ ಹಿಂಬದಿ ಟೈರ್​ ತಲೆ ಮೇಲೆ ಹರಿದಿದೆ. ಅಪಘಾತದ ವೇಳೆ ಸೋಮಶೇಖರ್​ ಹೆಲ್ಮೆಟ್ ಹಾಕಿದ್ದರೂ ತಲೆ ಸಂಪೂರ್ಣ ಅಪ್ಪಚ್ಚಿಯಾಗಿದೆ. ಸ್ಥಳದಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿಕ್ಕಮಗಳೂರು: ಬಸ್ಸಿನ ಟೈರ್​ಗೆ ಸಿಕ್ಕಿ ಬೈಕ್ ಸವಾರನ ತಲೆ ಅಪ್ಪಚ್ಚಿಯಾದ ಭೀಕರ ಘಟನೆ ತಾಲೂಕಿನ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

ಹೆಲ್ಮೆಟ್ ದರಿಸಿದ್ದರೂ ಉಳಿಯಲಿಲ್ಲ ಪ್ರಾಣ..

ಚಿಕ್ಕಮಗಳೂರು ತಾಲೂಕಿನ ಕರಿ ಸಿದ್ದನಹಳ್ಳಿ ನಿವಾಸಿ ಸೋಮಶೇಖರ್ (26) ಮೃತಪಟ್ಟವ ಎನ್ನಲಾಗಿದೆ. ಸೋಮಶೇಖರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಸರ್ಕಾರಿ ಬಸ್ಸಿಗೆ ಬೈಕ್ ಟಚ್ ಆಗಿದೆ. ಪರಿಣಾಮ ಸೋಮಶೇಖರ್ ರಸ್ತೆಗೆ ಬಿದ್ದಿದ್ದು, ಈ ವೇಳೆ ಬಸ್ಸಿನ ಹಿಂಬದಿ ಟೈರ್​ ತಲೆ ಮೇಲೆ ಹರಿದಿದೆ. ಅಪಘಾತದ ವೇಳೆ ಸೋಮಶೇಖರ್​ ಹೆಲ್ಮೆಟ್ ಹಾಕಿದ್ದರೂ ತಲೆ ಸಂಪೂರ್ಣ ಅಪ್ಪಚ್ಚಿಯಾಗಿದೆ. ಸ್ಥಳದಲ್ಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Kn_Ckm_04_Bus accident_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಎದೆ ಝಲ್ ಎನ್ನುವಂತಹ ಅಪಘಾತ ನಡೆದಿದೆ.ಯುವಕನ ಹೆಲ್ಮೆಟ್ ಇದ್ದರೂ ಆತನ ಪ್ರಾಣ ಉಳಿಯದೇ ಪ್ರಾಣ ಪಕ್ಷಿ ಹಾರಿ ಹೋಗಿದೆ. ಹೆಲ್ಮೆಟ್ ಸಮೇತ ತಲೆ ಅಪ್ಪಚ್ಚಿಯಾಗಿದ್ದು ಸರ್ಕಾರಿ ಬಸ್ಸಿಗೆ ಯುವಕನ ಬೈಕ್ ಟಚ್ ಆದ ಕೂಡಲೇ ಬೈಕ್ ಬಸ್ಸಿನ ಹಿಂಬದಿ ಟೈರಿಗೆ ಸಿಕ್ಕಿ ಬೈಕ್ ಸವಾರನ ತಲೆ ಪುಡಿ ಪುಡಿಯಾಗಿದ್ದು ಬೈಕ್ ಚಾಲಕನ ತಲೆ ಮೇಲೆ ಹತ್ತಿದ ಬಸ್ಸ್ ಹತ್ತಿ ಹೋಗಿದೆ. ಹಿಂಬದಿ ಟೈರ್ ಹೆಲ್ಮೆಟ್ ಸಮೇತ ಬೈಕ್ ಸವಾರನ ತಲೆ ಮೇಲೆ ಹೋಗಿದ್ದು ತಲೆ ಸಂಪೂರ್ಣ ಅಪ್ಪಚ್ಚಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ದೇವರಹಳ್ಳಿ ಗೇಟ್ ಬಳಿ ಈ ದುರಂತ ನಡೆದಿದ್ದು ಈ ಅಪಘಾತದಲ್ಲಿ ಸೋಮಶೇಖರ್ (26) ಮೃತ ದುರ್ದೈವಿಯಾಗಿದ್ದಾನೆ. ಸೋಮಶೇಖರ್ ಚಿಕ್ಕಮಗಳೂರು ತಾಲೂಕಿನ ಕರಿ ಸಿದ್ದನಹಳ್ಳಿ ನಿವಾಸಿಯಾಗಿದ್ದು ಗ್ರಾಮಾಂತರ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.