ETV Bharat / state

ಚಿಕ್ಕಮಗಳೂರು: ಬ್ರೇಕ್​ ಫೇಲ್​​ ಆಗಿ ವಾಹನ ಅಪಘಾತ.. ತಪ್ಪಿದ ಅನಾಹುತ

ದೇವರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರ ವಾಹನದ ಬ್ರೇಕ್​ ಫೇಲ್​ ಆಗಿ ಮೋರಿಗೆ ಗುದ್ದಿ, ಗುಂಡಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

author img

By

Published : Mar 15, 2021, 3:10 PM IST

tourist vehicle collided to a bridge by failure of break
ಬ್ರೇಕ್​ ಫೇಲ್​​ ಆಗಿ ಮೋರಿಗೆ ಗುದ್ದಿದ ಪ್ರವಾಸಿಗರಿದ್ದ ವಾಹನ

ಚಿಕ್ಕಮಗಳೂರು: ಚಿಕ್ಕಬಳ್ಳಾಪುರದಿಂದ ದೇವರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರ ವ್ಯಾನ್ ಬ್ರೇಕ್​​ ಫೇಲ್​ ಆಗಿ ಪಕ್ಕದ ಮೋರಿಗೆ ಗುದ್ದಿ, ಗುಂಡಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗಲು ಗ್ರಾಮದ ಬಳಿ ನಡೆದಿದೆ.

ಬ್ರೇಕ್​ ಫೇಲ್​​ ಆಗಿ ಮೋರಿಗೆ ಗುದ್ದಿದ ಪ್ರವಾಸಿಗರಿದ್ದ ವಾಹನ

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕೊಟ್ಟಿಗೆಹಾರ ಮಾರ್ಗದಿಂದ ಧರ್ಮಸ್ಥಳಕ್ಕೆ ಹೊರಟ ವೇಳೆ ಈ ದುರಂತ ನಡೆದಿದೆ. ವಾಹನದಲ್ಲಿದ್ದ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓದಿ:ಎರಡು ವರ್ಷ ಕಳೆದರೂ ದುರಸ್ಥಿಯಾಗದ ಚಾರ್ಮಾಡಿ ಘಾಟ್.. ಸ್ಥಳೀಯರ ಆತಂಕ, ಆಕ್ರೋಶ

ಗಾಯಗೊಂಡ ಪ್ರವಾಸಿಗರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು: ಚಿಕ್ಕಬಳ್ಳಾಪುರದಿಂದ ದೇವರ ದರ್ಶನಕ್ಕೆ ಹೊರಟಿದ್ದ ಪ್ರವಾಸಿಗರ ವ್ಯಾನ್ ಬ್ರೇಕ್​​ ಫೇಲ್​ ಆಗಿ ಪಕ್ಕದ ಮೋರಿಗೆ ಗುದ್ದಿ, ಗುಂಡಿಗೆ ಬಿದ್ದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗಲು ಗ್ರಾಮದ ಬಳಿ ನಡೆದಿದೆ.

ಬ್ರೇಕ್​ ಫೇಲ್​​ ಆಗಿ ಮೋರಿಗೆ ಗುದ್ದಿದ ಪ್ರವಾಸಿಗರಿದ್ದ ವಾಹನ

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಕೊಟ್ಟಿಗೆಹಾರ ಮಾರ್ಗದಿಂದ ಧರ್ಮಸ್ಥಳಕ್ಕೆ ಹೊರಟ ವೇಳೆ ಈ ದುರಂತ ನಡೆದಿದೆ. ವಾಹನದಲ್ಲಿದ್ದ 13 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓದಿ:ಎರಡು ವರ್ಷ ಕಳೆದರೂ ದುರಸ್ಥಿಯಾಗದ ಚಾರ್ಮಾಡಿ ಘಾಟ್.. ಸ್ಥಳೀಯರ ಆತಂಕ, ಆಕ್ರೋಶ

ಗಾಯಗೊಂಡ ಪ್ರವಾಸಿಗರನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.