ಚಿಕ್ಕಮಗಳೂರು : ಓವರ್ ಟೇಕ್ ಮಾಡುವ ವೇಳೆ ಖಾಸಗಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಕೊಡಿಕ್ಯಾಂಪ್ ಬಳಿಯ ಆಶೀರ್ವಾದ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ.
ತರೀಕೆರೆಯ ಕನುಮನಹಟ್ಟಿ ನಿವಾಸಿ ಶಿವರಾಜ್ (22) ಮೃತ ಬೈಕ್ ಸವಾರ. ತರೀಕೆರೆಯ ಖಾಸಗಿ ಶೋ ರೂಮ್ನ ಉದ್ಯೋಗಿಯಾಗಿರುವ ಶಿವರಾಜ್, ಕೆಲಸಕ್ಕೆ ತೆರಳುವ ವೇಳೆ ದುರಂತ ನಡೆದಿದೆ.
ಓದಿ : ಕುಡಿಯುವ ನೀರಿನ ಮೋಟಾರ್ ಚಾಲನೆ ವೇಳೆ ವಿದ್ಯುತ್ ತಗುಲಿ ಮಹಿಳೆ ಸಾವು
ಕಳೆದ ಒಂದು ತಿಂಗಳ ಹಿಂದೆ ಶಿವರಾಜ್ ತಂದೆ ನಿಧನ ಹೊಂದಿದ್ದರು. ಇದೀಗ ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.