ETV Bharat / state

ಪ್ಲೀಸ್​ ಖಾಕಿ ಬಿಚ್ಚಿಡಬೇಡಿ... ಮತ್ತೆ ಖಾಕಿ ತೊಟ್ಟು ಮಿಂಚಿ: ಇದು ಅಣ್ಣಾಮಲೈ ಅಭಿಮಾನಿಗಳ ಕೋರಿಕೆ - R_Kn_Ckm_02_28_Dcp Annamali_Rajkumar_Ckm_pkg_7202347

ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ ಅಣ್ಣಾಮಲೈ ನಡೆ ಚಿಕ್ಕಮಗಳೂರು ಜನತೆಯಲ್ಲಿ ಭಾರೀ ಬೇಸರವನ್ನುಂಟು ಮಾಡಿದೆ. ಅವರು ಮತ್ತೆ ಪೊಲೀಸ್ ಸೇವೆಯಲ್ಲೇ ಮುಂದುವರಿಯಬೇಕೆಂದು ಅಭಿಮಾನಿಗಳು ಆಶಯವಾಗಿದೆ.

ಮತ್ತೆ ಖಾಕಿ ತೊಡುವಂತೆ ಅಣ್ಣಾಮಲೈಗೆ ಅಭಿಮಾನಿಗಳ ಮನವಿ
author img

By

Published : May 28, 2019, 5:20 PM IST

Updated : May 28, 2019, 5:34 PM IST

ಚಿಕ್ಕಮಗಳೂರು: ಸೂಪರ್ ಕಾಪ್, ಜನ ಮೆಚ್ಚಿದ ಅಧಿಕಾರಿ ಎಂದೇ ಜನ ಮೆಚ್ಚುಗೆ ಗಳಿಸಿದ್ದ ಅಣ್ಣಾಮಲೈ, ಜನ ಸ್ನೇಹಿ ಪೊಲೀಸ್ ಅಧಿಕಾರಿಗಳಲ್ಲಿ ಪ್ರಮುಖರು. ಹೀಗಾಗಿ ಜಿಲ್ಲೆಯ ಜನತೆ ಅಣ್ಣಾಮಲೈ, ಪೊಲೀಸ್ ಅಧಿಕಾರಿಯಾಗೇ ಮುಂದುವರಿಯಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಮತ್ತೆ ಖಾಕಿ ತೊಡುವಂತೆ ಅಣ್ಣಾಮಲೈಗೆ ಅಭಿಮಾನಿಗಳ ಮನವಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಣ್ಣಾಮಲೈ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ದಕ್ಷತೆ, ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರಿಗೂ ಚಿರಪರಿಚಿತ ಪೊಲೀಸ್ ಅಧಿಕಾರಿ. ಚಿಕ್ಕಮಗಳೂರು ಎಸ್ಪಿಯಾಗಿ ಕೆಲಸ ಮಾಡಿರುವ ಇವರು, ತಮ್ಮ ಕಾರ್ಯ ವೈಖರಿಯಿಂದಲೇ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಪೊಲೀಸ್ ಸಿಬ್ಬಂದಿಗೂ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ರು. ಪೊಲೀಸ್ ಇಲಾಖೆಯಲ್ಲಿಯೇ ಬೇರು ಮಟ್ಟದಿಂದ ಸರ್ಜರಿ ಮಾಡಿದ ಅಧಿಕಾರಿ ಇವರು.

ಕಳ್ಳಕಾಕರಿಗೆ ಸಿಂಹಸ್ವಪ್ನರಾಗಿದ್ದ ಇವರು, ಜತೆ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ. ಹತ್ತಾರೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಸಾಕಷ್ಟು ಕುಟುಂಬ ಕಲಹ ಪ್ರಕರಣಗಳನ್ನ ಸರಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಏಕೆ ತೂಕ ಇಳಿಸಿಕೊಂಡು ಬಂದ ಪೊಲೀಸ್ ಸಿಬ್ಬಂದಿಗೆ ನೀವು ಕೇಳಿದ ಜಾಗಕ್ಕೆ ವರ್ಗಾವಣೆ ಎಂಬ ಹೊಸ ನಿಯಮ ಜಾರಿ ತಂದು ಅನುಷ್ಠಾನ ಗೊಳಿಸಿದ್ದು ಇಲಾಖೆಯಲ್ಲಿ ಭಾರೀ ಸುದ್ದಿ ಮಾಡಿತ್ತು.

ಇನ್ನು ಮರಗಳ ದಂಧೆ ಕೋರರಿಗೆ ಕಡಿವಾಣ ಹಾಕಿದ್ದಲ್ಲದೇ, ಜಿಲ್ಲೆಯಲ್ಲಿ ದತ್ತಾಪೀಠ ಉತ್ಸವ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದ್ದು ಇವರ ದಕ್ಷತೆಗೆ ಹಿಡಿದ ಕೈಗನ್ನಡಿ. ಇದೀಗ ಅವರ ಸ್ಥಾನಕ್ಕೆ ರಾಜೀನಾಮೇ ನೀಡಿರುವ ವಿಚಾರ ತಿಳಿದು ಚಿಕ್ಕಮಗಳೂರಿನಲ್ಲಿರುವ ಅವರ ಅಭಿಮಾನಿಗಳು ದಿಕ್ಕು ತೋಚದಾಗಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಕೆಲಸಕ್ಕೆ ರಾಜೀನಾಮೆ ನೀಡಬಾರದು. ಅವರ ಅವಶ್ಯಕತೆ ಪೊಲೀಸ್ ಇಲಾಖೆಗೆ ತುಂಬಾ ಇದೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಚಿಕ್ಕಮಗಳೂರು: ಸೂಪರ್ ಕಾಪ್, ಜನ ಮೆಚ್ಚಿದ ಅಧಿಕಾರಿ ಎಂದೇ ಜನ ಮೆಚ್ಚುಗೆ ಗಳಿಸಿದ್ದ ಅಣ್ಣಾಮಲೈ, ಜನ ಸ್ನೇಹಿ ಪೊಲೀಸ್ ಅಧಿಕಾರಿಗಳಲ್ಲಿ ಪ್ರಮುಖರು. ಹೀಗಾಗಿ ಜಿಲ್ಲೆಯ ಜನತೆ ಅಣ್ಣಾಮಲೈ, ಪೊಲೀಸ್ ಅಧಿಕಾರಿಯಾಗೇ ಮುಂದುವರಿಯಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಮತ್ತೆ ಖಾಕಿ ತೊಡುವಂತೆ ಅಣ್ಣಾಮಲೈಗೆ ಅಭಿಮಾನಿಗಳ ಮನವಿ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಣ್ಣಾಮಲೈ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ಅಷ್ಟರ ಮಟ್ಟಿಗೆ ತಮ್ಮ ದಕ್ಷತೆ, ಪ್ರಾಮಾಣಿಕತೆಯಿಂದ ಪ್ರತಿಯೊಬ್ಬರಿಗೂ ಚಿರಪರಿಚಿತ ಪೊಲೀಸ್ ಅಧಿಕಾರಿ. ಚಿಕ್ಕಮಗಳೂರು ಎಸ್ಪಿಯಾಗಿ ಕೆಲಸ ಮಾಡಿರುವ ಇವರು, ತಮ್ಮ ಕಾರ್ಯ ವೈಖರಿಯಿಂದಲೇ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಪೊಲೀಸ್ ಸಿಬ್ಬಂದಿಗೂ ಅಚ್ಚು ಮೆಚ್ಚಿನ ಅಧಿಕಾರಿಯಾಗಿದ್ರು. ಪೊಲೀಸ್ ಇಲಾಖೆಯಲ್ಲಿಯೇ ಬೇರು ಮಟ್ಟದಿಂದ ಸರ್ಜರಿ ಮಾಡಿದ ಅಧಿಕಾರಿ ಇವರು.

ಕಳ್ಳಕಾಕರಿಗೆ ಸಿಂಹಸ್ವಪ್ನರಾಗಿದ್ದ ಇವರು, ಜತೆ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ. ಹತ್ತಾರೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಸಾಕಷ್ಟು ಕುಟುಂಬ ಕಲಹ ಪ್ರಕರಣಗಳನ್ನ ಸರಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಏಕೆ ತೂಕ ಇಳಿಸಿಕೊಂಡು ಬಂದ ಪೊಲೀಸ್ ಸಿಬ್ಬಂದಿಗೆ ನೀವು ಕೇಳಿದ ಜಾಗಕ್ಕೆ ವರ್ಗಾವಣೆ ಎಂಬ ಹೊಸ ನಿಯಮ ಜಾರಿ ತಂದು ಅನುಷ್ಠಾನ ಗೊಳಿಸಿದ್ದು ಇಲಾಖೆಯಲ್ಲಿ ಭಾರೀ ಸುದ್ದಿ ಮಾಡಿತ್ತು.

ಇನ್ನು ಮರಗಳ ದಂಧೆ ಕೋರರಿಗೆ ಕಡಿವಾಣ ಹಾಕಿದ್ದಲ್ಲದೇ, ಜಿಲ್ಲೆಯಲ್ಲಿ ದತ್ತಾಪೀಠ ಉತ್ಸವ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದ್ದು ಇವರ ದಕ್ಷತೆಗೆ ಹಿಡಿದ ಕೈಗನ್ನಡಿ. ಇದೀಗ ಅವರ ಸ್ಥಾನಕ್ಕೆ ರಾಜೀನಾಮೇ ನೀಡಿರುವ ವಿಚಾರ ತಿಳಿದು ಚಿಕ್ಕಮಗಳೂರಿನಲ್ಲಿರುವ ಅವರ ಅಭಿಮಾನಿಗಳು ದಿಕ್ಕು ತೋಚದಾಗಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಕೆಲಸಕ್ಕೆ ರಾಜೀನಾಮೆ ನೀಡಬಾರದು. ಅವರ ಅವಶ್ಯಕತೆ ಪೊಲೀಸ್ ಇಲಾಖೆಗೆ ತುಂಬಾ ಇದೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡುತ್ತಿದ್ದಾರೆ.

Intro:R_Kn_Ckm_02_28_Dcp Annamali_Rajkumar_Ckm_pkg_7202347Body:


ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆ ಕಂಡಂತಹ ಹಲವಾರು ಖಡಕ್, ಸೂಪರ್ ಸ್ಟಾರ್, ಸೂಪರ್ ಕಾಪ್, ಜನ ಮೆಚ್ಚಿನ ಅಧಿಕಾರಿ, ಜನ ಸ್ನೇಹಿ ಪೋಲಿಸ್ ಅಧಿಕಾರಿಗಳಲ್ಲಿ ಇವರೂ ಕೂಡ ಒಬ್ಬರು.ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಖಡಕ್ ಪೋಲಿಸ್ ವರಿಷ್ಠಧಿಕಾರಿಗಳು ತಮ್ಮದೇ ನಿಟ್ಟಿನಲ್ಲಿ ಕೆಲಸ ಮಾಡಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದ್ದರು. ಅದೇ ರೀತಿ ಚಿಕ್ಕಮಗಳೂರು ಸಿಗಂ ಎಂದೇ ಖ್ಯಾತಿ ಪಡೆದ ಪ್ರಮುಖ ಅಧಿಕಾರಿ ಅಂದರೇ ಅವರೇ ಕೆ.ಅಣ್ಣಾಮಲೈ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದಷ್ಟು ಸಮಯ ಹಗಲು ರಾತ್ರಿ ದುಡಿದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರೇ ತಪ್ಪಾಗಲಾರದು ಆದರೇ ಬೆಂಗಳೂರಿನಲ್ಲಿ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಇವರ ಕೆಲಸಕ್ಕೆ ರಾಜೀನಾಮೇ ನೀಡಿ ಪೋಲಿಸ್ ಇಲಾಖೆಯಿಂದಾ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ..ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ......

ಹೌದು ಕೆ.ಅಣ್ಣಾಮಲೈ ಐಪಿಎಸ್ ಎಂದರೇ ಎಲ್ಲರ ಕಿವಿ ನೆಟ್ಟಗೇ ನಿಲ್ಲುತ್ತದೆ.ಇವರಿಗೂ ಯಾರು ಗೊತ್ತಿಲ್ಲ ಅಂತಾ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೇಳುವ ಹಾಗೇ ಇಲ್ಲ.ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಚಿರಪರಿಚಿತ ಪೋಲಿಸ್ ಅಧಿಕಾರಿ. ಈ ಹಿಂದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾ ಎಸ್ವಿಯಾಗಿ ಕೆಲಸ ಮಾಡಿರುವ ಇವರು ತಮ್ಮ ಕಾರ್ಯ ವೈಖರಿಯಿಂದಾ ಜಿಲ್ಲೆಯಲ್ಲಿ ಮನೆ ಮಾತನಾಗಿದ್ದರು. ಪೋಲಿಸ್ ಸಿಬ್ಬಂಧಿಗಳಲ್ಲಿಯೂ ಅಚ್ಚು ಮೆಚ್ಚಿನ ಅಧಿಕಾರಿ. ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದಷ್ಟು ದಿನ ಇವರು ಮಾಡಿರುವ ಕೆಲಸ ಹೇಳತ್ತಾ ಹೋದರೇ ಸಮಯ ಸಾಕಾಗೋದಿಲ್ಲ. ಪೋಲಿಸ್ ಇಲಾಖೆಯಲ್ಲಿಯೇ ಬೇರು ಮಟ್ಟದಿಂದಾ ಸರ್ಜರಿ ಮಾಡಿದ ವ್ಯಕ್ತಿ, ಜನ ಸಾಮಾನ್ಯರಿಗೆ ನ್ಯಾಯ ಓದಗಿಸುತ್ತಿದ್ದ ವ್ಯಕ್ತಿ, ಪುಂಡ- ಪೋಕರಿಗಳಿಗೆ ನಡುಕ ಹುಟ್ಟಿಸಿದ ಅಧಿಕಾರಿ. ಹೌದು ಅಣ್ಣಾಮಲೈ ಚಿಕ್ಕಮಗಳೂರಿನಲ್ಲಿ ಎಸ್ವಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಪ್ರತಿನಿತ್ಯ ಸುದ್ದಿಯಲ್ಲಿರುತ್ತಿದ್ದರು. ಒಂದಲ್ಲ ಒಂದು ಕೆಲಸದಿಂದಾ ಜನರ ಹತ್ತಿರವಿರುತ್ತಿದ್ದರು.ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಅವರು ಮಾಡಿ ಹೋಗಿರುವ ಮರೆಯಲಾಗದ ಕೆಲಸಗಳು ಸಾಕಷ್ಟು ಇದೆ. ನಗರದ ಹೊರವಲಯದ ಮೂಗ್ತಿಹಳ್ಳಿಯಲ್ಲಿ ಪೋಲಿಸ್ ಅಧಿಕಾರಿಯನ್ನು ಸ್ಥಳೀಯರು ಮನೆಯಲ್ಲಿ ಕೂಡಿಟ್ಟು ರಸ್ತೆ ಬಂದ್ ಮಾಡಿದಾಗ ಸ್ಥಳಕ್ಕೇ ಭೇಟಿ ನೀಡಿ ಎಲ್ಲರಿಗೂ ಅವಾಜ್ ಹಾಕಿ ತನ್ನ ಅಧಿಕಾರಿಯನ್ನು ಬಿಡಿಸಿಕೊಂಡು ಕೆಲವರಿಗೆ ಬುದ್ದಿ ಕಲಿಸಿದ್ದರು. ಬಾಳೆಹೊನ್ನೂರು ಚಿಕ್ಕಮಗಳೂರು ರಸ್ತೆಯ ಮಧ್ಯೆ ಮಧ್ಯ ರಾತ್ರಿ ಪ್ರವಾಸಿಗರ ಕಾರು ಕೆಟ್ಟು ನಿಂತಾಗ ಇವರೇ ಕೈಯಲ್ಲಿ ಸ್ವಾನರ್ ಹಿಡಿದು ಕಾರು ಸರಿ ಮಾಡಿಕೊಟ್ಟಿದ್ದರು. ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಂಟ್ರೋಲ್ ಗೆ ಬರಲು ಹೊಸ ಹೊಸ ನಿಯಮ ಜಾರಿಗೆ ತಂದರು. ನಗರದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿದರು. ಮಾರು ವೇಷದಲ್ಲಿ ಹೋಗಿ ಅಂಗಡಿಗಳಲ್ಲಿ ಮಾರುತ್ತಿದ್ದ ಗುಟ್ಕಾ, ಸಿಗರೇಟು ವಶ ಪಡಿಸಿಕೊಂಡು ದಾಳಿ ಮಾಡಿದರು. ಕಡೂರು ತಾಲೂಕಿನಲ್ಲಿ ಮನೆಯವರು ವಿದ್ಯಾರ್ಥಿನಿಯ ಕೈ ಬಿಟ್ಟಾಗ ಅವಳ ಜವಾದ್ದಾರಿ ತೆಗೆದುಕೊಂಡು ಅಣ್ಣನ ಸ್ಥಾನದಲ್ಲಿ ನಿಂತೂ ಈ ಕ್ಷಣಕ್ಕೂ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದಾರೆ. ಹತ್ತಾರೂ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಿರೋದು, ಎಷ್ಟೋ ಕುಟಂಬ ಕಲಹ ಪ್ರಕರಣ ಸರಿ ಮಾಡಿರೋದು, ಚೈನ್ ಸ್ಯಾಚಿಂಗ್ ಗೆ ಬ್ರೇಕ್ ಹಾಕಿರೋದು, ತೂಕ ಇಳಿಸಿಕೊಂಡು ಬಂದ ಪೋಲಿಸ್ ಸಿಬ್ಬಂಧಿಗಳಿಗೆ ನೀವು ಕೇಳಿದ ಜಾಗಕ್ಕೆ ವರ್ಗಾವಣೆ ಎಂಬ ಹೊಸ ನಿಯಮ ತಂದೂ ಮಾತು ಉಳಿಸಿಕೊಂಡಿದ್ದು, ಮರಗಳು ದಂಧೆ ಕೊರರಿಗೆ ಕಡಿವಾಣ ಹಾಕಿದ್ದು, ಜಿಲ್ಲೆಯಲ್ಲಿ ದತ್ತಾಫೀಠ ಉತ್ಸವ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದ್ದು, ಜಾನುವಾರು ಕಳ್ಳತನಕ್ಕೆ ಬ್ರೇಕ್ ಹಾಕಿದ್ದು, ಕಚೇರಿಗೆ ಬಂದತಹ ಸಾರ್ವಜನಿಕರ ಜೊತೆ ಜನ ಸ್ನೇಹಿಯಾಗಿ ವರ್ತಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದದ್ದು, ಜನ ಪ್ರತಿನಿಧಿಗಳಿಗೆ ಸೋಪ್ಪು ಹಾಕದೇ ಅವರ ವಿರುದ್ದವೇ ನಿಂತದ್ದು, ಗರಿಷ್ಟ ಮಟ್ಟದ ಪ್ರಕರಣವನ್ನು ಬೇಧಿಸಿ ಯಶಸ್ಸು ಸಾಧಿಸಿದ್ದು, ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದು ಈ ರೀತಿಯಾಗಿ ನೂರಾರು ಕೆಲಸಗಳನ್ನು ಮಾಡಿ ಹೆಸರು ವಾಸಿಯಾಗಿದ್ದರು.

ಚಿಕ್ಕಮಗಳೂರು ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಬೆಂಗಳೂರಿಗೆ ಡಿಸಿಪಿ ಆಗಿ ವರ್ಗಾವಣೆ ಆದಾಗ ಚಿಕ್ಕಮಗಳೂರು ಜಿಲ್ಲೆಯ ಜನತೆ ಇವರನ್ನು ಕಳುಹಿಸಿಕೊಡಲು ಒಪ್ಪಿರಲಿಲ್ಲ. ಆದರೂ ಅವರ ಕರ್ತವ್ಯ ಹಾಗೂ ಬಡ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು.ಆದರೇ ದಿಡೀರನೇ ಅವರ ಸ್ಥಾನಕ್ಕೆ ರಾಜೀನಾಮೇ ನೀಡುತ್ತಿರುವ ವಿಚಾರ ತಿಳಿದು ಚಿಕ್ಕಮಗಳೂರಿನಲ್ಲಿರುವ ಅವರ ಅಭಿಮಾನಿಗಳಿಗಳಿಗೆ ಅದರ ನೋವು ಅರಗಿಸಿಕೊಳ್ಳಲು ಆಗುತ್ತಿಲ್ಲ. ಯಾವುದೇ ಕಾರಣಕ್ಕೂ ಅವರು ಕೆಲಸಕ್ಕೆ ರಾಜೀನಾಮೇ ನೀಡಬಾರದು ಎಂದೂ ಆಗ್ರಹಿಸುತ್ತಿದ್ದಾರೆ. ಅವರ ಅವಶ್ಯಕತೆ ಪೋಲಿಸ್ ಇಲಾಖೆಗೆ ಇದ್ದು ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕು ಎಂದೂ ಮನವಿ ಮಾಡುತ್ತಿದ್ದಾರೆ...

ಒಟ್ಟಾರೆಯಾಗಿ ಕೆ,ಅಣ್ಣಾಮಲೈ ಐಪಿಎಸ್ ಅವರು ಪೋಲಿಸ್ ಇಲಾಖೆಯ ಮಾಣಿಕ್ಯ ಎಂದರೇ ತಪ್ಪಾಗಲಾರದು. ಅವರು ಹೋದಕಡೆಯೆಲ್ಲಾ ಸದ್ದು ಮತ್ತು ಸುದ್ದಿ ಇರುತ್ತಿತ್ತು.ಸಿಬ್ಬಂಧಿಗಳಿಗೆ ಕೆಲಸ ಮಾಡುವ ಉತ್ಸಹ ಇರುತ್ತಿತ್ತು. ಆದರೇ ಈಗ ಅವರ ಸ್ಥಾನಕ್ಕೆ ರಾಜೀನಾಮೇ ನೀಡಿರೋದು ನಿಜಕ್ಕೂ ಬೇಸರದ ಸಂಗತಿ.......

byte:-1 ಅನಿಲ್ ಆನಂದ್,,,,ಅಭಿಮಾನಿ
byte:-2 ಸತ್ಯನಾರಯಣ್,,,,,ಅಭಿಮಾನಿ (ಗುಲಾಬಿ ಬಣ್ಣದ ಶರ್ಟ್ ಹಾಕಿರುವ ವ್ಯಕ್ತಿ)

Conclusion:ರಾಜಕುಮಾರ್,,,,,,
ಈಟಿವಿ ಭಾರತ್,,,,,
ಚಿಕ್ಕಮಗಳೂರು........
Last Updated : May 28, 2019, 5:34 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.