ETV Bharat / state

ಚಿಕ್ಕಮಗಳೂರು: ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಆರೋಪ.. ಎಇಇ ಅಮಾನತು

author img

By

Published : Jun 30, 2022, 5:00 PM IST

ಎನ್​​ಆರ್​ ಪುರ ತಾಲೂಕಿನ ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಇಇ ಅಮಾನತ್ತಾಗಿದ್ದಾರೆ.

AEE Manjunath suspended under corruption case
ಎಇಇ ಮಂಜುನಾಥ್‍ ಅಮಾನತು

ಚಿಕ್ಕಮಗಳೂರು: 37 ಕೆರೆಗಳ ಊಳೆತ್ತದೇ, ಕೆರೆಗಳ ಅಭಿವೃದ್ಧಿ ಮಾಡದೇ ಹಣ ಡ್ರಾ ಮಾಡಿದ್ದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಇಂಜಿನಿಯರ್ ಸಸ್ಪೆಂಡ್ ಆಗಿದ್ದಾರೆ. ಅಧಿಕಾರಿಗಳು, ಕಾಂಟ್ರ್ಯಾಕ್ಟರ್​ಗಳು ಭ್ರಷ್ಟಾಚಾರ ಎಸಗಿದ್ದಾರೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆ ಜಿ.ಪ ಸಿಇಒ ಪ್ರಭು ಅವರು ಎಇಇ ಮಂಜುನಾಥ್‍ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

37 ಕೆರೆಗಳ ಅಭಿವೃದ್ಧಿಗೆ 23 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿತ್ತು. ಕೆಲಸವನ್ನೇ ಮಾಡದ ಗುತ್ತಿಗೆದಾರನ ಖಾತೆಗೆ ಇಂಜಿನಿಯರ್ ಮಂಜುನಾಥ್ ಹಣ ಜಮೆ ಮಾಡಿದ್ದರು. 37 ಕೆರೆಗಳಲ್ಲಿ 20 ಕೆರೆಗಳ ಬಳಿ ದಾಖಲೆಗಾಗಿ ಜೆಸಿಬಿ, ಟ್ರ್ಯಾಕ್ಟರ್ ನಿಲ್ಲಿಸಿ ಫೋಟೋ ಕೂಡ ತೆಗೆಸಿದ್ದರು. ಉಳಿದ 17 ಕೆರೆಗಳ ಬಳಿ ಹೋಗೇ ಇರಲಿಲ್ಲ. ಆದರೂ ಮಾರ್ಚ್ 15 ರಂದೇ ಹಣ ಡ್ರಾ ಮಾಡಿದ್ದರು. ಕೆರೆ ಬಳಿ ಸ್ಥಳಿಯರು ತೊಡಿದ್ದ ಗುಂಡಿಯನ್ನೂ ಸಹ ನಾವೇ ತೋಡಿದ್ದು ಎಂದು ಬಿಲ್ ಮಾಡಿಸಿಕೊಂಡಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ಹೊಡೆದ್ರಾ ಅಧಿಕಾರಿಗಳು?

ಈ ಬಗ್ಗೆ ಸ್ಥಳೀಯರಿಂದ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ, ಜಿಲ್ಲಾ ಪಂಚಾಯತ್​ ಸಿಇಒ ಅವರು ತಾಲೂಕು ಪಂಚಾಯತ್ ಇಒ ನಯನಾ ಅವರಿಗೆ ಸ್ಥಳ ಮಹಜರು ವರದಿ ನೀಡುವಂತೆ ಸೂಚನೆ ನೀಡಿದ್ದರು. ಮೊದಲ ಏಳು ಕೆರೆಯ ಸ್ಥಳ ಮಹಜರ್​ನಲ್ಲೇ ಇಂಜಿನಿಯರ್ ಅಕ್ರಮ ಬಯಲಾಗಿದೆ. ಜಿಲ್ಲಾ ಪಂಚಾಯತ್​ ಸಿಇಒ ಪ್ರಭು ಅವರು ಎಇಇ ಮಂಜುನಾಥ್‍ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು: 37 ಕೆರೆಗಳ ಊಳೆತ್ತದೇ, ಕೆರೆಗಳ ಅಭಿವೃದ್ಧಿ ಮಾಡದೇ ಹಣ ಡ್ರಾ ಮಾಡಿದ್ದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಇಂಜಿನಿಯರ್ ಸಸ್ಪೆಂಡ್ ಆಗಿದ್ದಾರೆ. ಅಧಿಕಾರಿಗಳು, ಕಾಂಟ್ರ್ಯಾಕ್ಟರ್​ಗಳು ಭ್ರಷ್ಟಾಚಾರ ಎಸಗಿದ್ದಾರೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆ ಜಿ.ಪ ಸಿಇಒ ಪ್ರಭು ಅವರು ಎಇಇ ಮಂಜುನಾಥ್‍ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

37 ಕೆರೆಗಳ ಅಭಿವೃದ್ಧಿಗೆ 23 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿತ್ತು. ಕೆಲಸವನ್ನೇ ಮಾಡದ ಗುತ್ತಿಗೆದಾರನ ಖಾತೆಗೆ ಇಂಜಿನಿಯರ್ ಮಂಜುನಾಥ್ ಹಣ ಜಮೆ ಮಾಡಿದ್ದರು. 37 ಕೆರೆಗಳಲ್ಲಿ 20 ಕೆರೆಗಳ ಬಳಿ ದಾಖಲೆಗಾಗಿ ಜೆಸಿಬಿ, ಟ್ರ್ಯಾಕ್ಟರ್ ನಿಲ್ಲಿಸಿ ಫೋಟೋ ಕೂಡ ತೆಗೆಸಿದ್ದರು. ಉಳಿದ 17 ಕೆರೆಗಳ ಬಳಿ ಹೋಗೇ ಇರಲಿಲ್ಲ. ಆದರೂ ಮಾರ್ಚ್ 15 ರಂದೇ ಹಣ ಡ್ರಾ ಮಾಡಿದ್ದರು. ಕೆರೆ ಬಳಿ ಸ್ಥಳಿಯರು ತೊಡಿದ್ದ ಗುಂಡಿಯನ್ನೂ ಸಹ ನಾವೇ ತೋಡಿದ್ದು ಎಂದು ಬಿಲ್ ಮಾಡಿಸಿಕೊಂಡಿದ್ದರು ಎನ್ನಲಾಗ್ತಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ಹೊಡೆದ್ರಾ ಅಧಿಕಾರಿಗಳು?

ಈ ಬಗ್ಗೆ ಸ್ಥಳೀಯರಿಂದ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆ, ಜಿಲ್ಲಾ ಪಂಚಾಯತ್​ ಸಿಇಒ ಅವರು ತಾಲೂಕು ಪಂಚಾಯತ್ ಇಒ ನಯನಾ ಅವರಿಗೆ ಸ್ಥಳ ಮಹಜರು ವರದಿ ನೀಡುವಂತೆ ಸೂಚನೆ ನೀಡಿದ್ದರು. ಮೊದಲ ಏಳು ಕೆರೆಯ ಸ್ಥಳ ಮಹಜರ್​ನಲ್ಲೇ ಇಂಜಿನಿಯರ್ ಅಕ್ರಮ ಬಯಲಾಗಿದೆ. ಜಿಲ್ಲಾ ಪಂಚಾಯತ್​ ಸಿಇಒ ಪ್ರಭು ಅವರು ಎಇಇ ಮಂಜುನಾಥ್‍ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.