ETV Bharat / state

ಫೀಲ್ಡ್​ ಆಫೀಸರ್​ PhonePe ಮೂಲಕ ಲಂಚ ಪಡೆದ ಆರೋಪ: ಸಾಕ್ಷಿ ಸಮೇತ ಪ್ರತಿಭಟನೆ ನಡೆಸಿದ ಫಲಾನುಭವಿಗಳು

author img

By

Published : Nov 10, 2021, 7:30 AM IST

ಚಿಕ್ಕಬಳ್ಳಾಪುರ ವಾಲ್ಮೀಕಿ ನಿಗಮದಲ್ಲಿ ಬಡವರಿಗೆ ಸಾಲ ನೀಡಲು ಫೀಲ್ಡ್ ಆಫೀಸರ್ ವೆಂಕಟರವಣಪ್ಪ ಸಾವಿರಾರು ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Valmiki corporation
Valmiki corporation

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಿಗಮಗಳನ್ನು ಸ್ಥಾಪಿಸಿದೆ. ಆದರೆ, ಚಿಕ್ಕಬಳ್ಳಾಪುರದ ವಾಲ್ಮೀಕಿ ನಿಗಮದಲ್ಲಿ ಬಡವರಿಗಾಗಿ ಮೀಸಲಿಟ್ಟ ಹಣ ಅಧಿಕಾರಿಗಳ ಜೇಬು ಸೇರುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಹೌದು, ವಾಲ್ಮೀಕಿ ನಿಗಮವು ಪ್ರತಿವರ್ಷ ವಾಡಿಕೆಯಂತೆ ಗಂಗಾಕಲ್ಯಾಣ ಯೋಜನೆಗೆ ,ಸ್ವಯಂ ಉದ್ಯೋಗ, ಕರಕುಶಲ ಯೋಜನೆಗಳು, ಮಹಿಳಾ ಸ್ತ್ರೀ ಸಂಘಗಳಿಗೆ ನೇರಸಾಲ, ಬ್ಯಾಂಕ್ ಸಾಲ ಹೀಗೆ ಕೋಟ್ಯಂತರ ರೂಪಾಯಿಗಳನ್ನು ಫಲಾನುಭವಿಗಳಿಗೆ ನೀಡುತ್ತಿದೆ. ಆದರೆ ಚಿಕ್ಕಬಳ್ಳಾಪುರ ವಾಲ್ಮೀಕಿ ನಿಗಮದಲ್ಲಿ ಬಡವರಿಗೆ ಸಾಲ ನೀಡಲು ಫೀಲ್ಡ್ ಆಫೀಸರ್ ವೆಂಕಟರವಣಪ್ಪ ಸಾವಿರಾರು ರೂಪಾಯಿ ಹಣವನ್ನು ಫೋನ್​ಪೇ(PhonePe) ಮೂಲಕ ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಫೋನ್ ಪೇ ಮೂಲಕ ಹಣವನ್ನು ತಮ್ಮ ಮಗ ಅಭಿಶೇಕ್ ಆಕೌಂಟ್​ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಜಿಲ್ಲಾಡಳಿತ ಭವನದ ಎದರು ಪ್ರತಿಭಟನೆ ನಡೆಸಿದ ಫಲಾನುಭವಿಗಳು

ವೆಂಕಟರವಣಪ್ಪ ಅವರು ಫಲಾನುಭವಿ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಆಡಿಯೋವೊಂದು ವೈರಲ್​ ಆಗಿದೆ. ಸಾಕ್ಷಿ ಸಮೇತ ಅಧಿಕಾರಿ ವಿರುದ್ಧ ಫಲಾನುಭವಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಕ್ರೋಶ ಹೊರಹಾಕಿದರು.

ಈ ಕುರಿತು ಅಧಿಕಾರಿ ವೆಂಕಟರವಣಪ್ಪ ಅವರನ್ನು ಕೇಳಿದ್ರೆ, ನಾನವನಲ್ಲ, ಫೋನ್ ಪೇಗೂ ನನಗೂ ಯಾವುದೇ‌ ಸಂಬಂಧವಿಲ್ಲ. ನನ್ನನ್ನು ಸಿಕ್ಕಿಸುವ ಉದ್ದೇಶದಿಂದ ನನ್ನ ಮಗನ ಅಕೌಂಟ್​ಗೆ ಹಣ ಹಾಕಿದ್ದಾರೆ ಎಂದು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಿಗಮಗಳನ್ನು ಸ್ಥಾಪಿಸಿದೆ. ಆದರೆ, ಚಿಕ್ಕಬಳ್ಳಾಪುರದ ವಾಲ್ಮೀಕಿ ನಿಗಮದಲ್ಲಿ ಬಡವರಿಗಾಗಿ ಮೀಸಲಿಟ್ಟ ಹಣ ಅಧಿಕಾರಿಗಳ ಜೇಬು ಸೇರುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

ಹೌದು, ವಾಲ್ಮೀಕಿ ನಿಗಮವು ಪ್ರತಿವರ್ಷ ವಾಡಿಕೆಯಂತೆ ಗಂಗಾಕಲ್ಯಾಣ ಯೋಜನೆಗೆ ,ಸ್ವಯಂ ಉದ್ಯೋಗ, ಕರಕುಶಲ ಯೋಜನೆಗಳು, ಮಹಿಳಾ ಸ್ತ್ರೀ ಸಂಘಗಳಿಗೆ ನೇರಸಾಲ, ಬ್ಯಾಂಕ್ ಸಾಲ ಹೀಗೆ ಕೋಟ್ಯಂತರ ರೂಪಾಯಿಗಳನ್ನು ಫಲಾನುಭವಿಗಳಿಗೆ ನೀಡುತ್ತಿದೆ. ಆದರೆ ಚಿಕ್ಕಬಳ್ಳಾಪುರ ವಾಲ್ಮೀಕಿ ನಿಗಮದಲ್ಲಿ ಬಡವರಿಗೆ ಸಾಲ ನೀಡಲು ಫೀಲ್ಡ್ ಆಫೀಸರ್ ವೆಂಕಟರವಣಪ್ಪ ಸಾವಿರಾರು ರೂಪಾಯಿ ಹಣವನ್ನು ಫೋನ್​ಪೇ(PhonePe) ಮೂಲಕ ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಫೋನ್ ಪೇ ಮೂಲಕ ಹಣವನ್ನು ತಮ್ಮ ಮಗ ಅಭಿಶೇಕ್ ಆಕೌಂಟ್​ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಜಿಲ್ಲಾಡಳಿತ ಭವನದ ಎದರು ಪ್ರತಿಭಟನೆ ನಡೆಸಿದ ಫಲಾನುಭವಿಗಳು

ವೆಂಕಟರವಣಪ್ಪ ಅವರು ಫಲಾನುಭವಿ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಆಡಿಯೋವೊಂದು ವೈರಲ್​ ಆಗಿದೆ. ಸಾಕ್ಷಿ ಸಮೇತ ಅಧಿಕಾರಿ ವಿರುದ್ಧ ಫಲಾನುಭವಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಕ್ರೋಶ ಹೊರಹಾಕಿದರು.

ಈ ಕುರಿತು ಅಧಿಕಾರಿ ವೆಂಕಟರವಣಪ್ಪ ಅವರನ್ನು ಕೇಳಿದ್ರೆ, ನಾನವನಲ್ಲ, ಫೋನ್ ಪೇಗೂ ನನಗೂ ಯಾವುದೇ‌ ಸಂಬಂಧವಿಲ್ಲ. ನನ್ನನ್ನು ಸಿಕ್ಕಿಸುವ ಉದ್ದೇಶದಿಂದ ನನ್ನ ಮಗನ ಅಕೌಂಟ್​ಗೆ ಹಣ ಹಾಕಿದ್ದಾರೆ ಎಂದು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.