ETV Bharat / state

ಮುಗಿಯದ ವಾಲ್ಮೀಕಿ, ಅಂಬೇಡ್ಕರ್ ಭವನ ಕಾಮಗಾರಿ: ಅಧಿಕಾರಿಯ ಕೊರಳಪಟ್ಟಿಗೆ ಕೈ ಹಾಕಿದ ಯುವಕರು - Social Welfare Officer

ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಸಮಾಜ ಕಲ್ಯಾಣಧಿಕಾರಿ ಹಾಗೂ ಸಮುದಾಯದ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಮುಗಿಯದ ವಾಲ್ಮೀಕಿ,ಅಂಬೇಡ್ಕರ್ ಭವನ ಕಾಮಗಾರಿ.. ಸಮಾಜ ಕಲ್ಯಾಣಧಿಕಾರಿ ಮೇಲೆ ಹಲ್ಲೆಗೆ ಯತ್ನ
author img

By

Published : Oct 4, 2019, 1:53 AM IST

ಚಿಕ್ಕಬಳ್ಳಾಪುರ: ವಾಲ್ಮೀಕಿ ಸಮುದಾಯದ ಯುವಕರು, ಸಮಾಜ ಕಲ್ಯಾಣಾಧಿಕಾರಿಯ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಸಮಾಜ ಕಲ್ಯಾಣಾಧಿಕಾರಿಯ ಕೊರಳಪಟ್ಟಿಗೆ ಕೈ ಹಾಕಿದ ಯುವಕರು.

ತಾಲೂಕು ಅಧಿಕಾರಿಗಳು ನಗರಸಭೆ ಆವರಣದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಈ ಘಟನೆ ನಡೆದಿದೆ. ಕಳೆದ 10 ವರ್ಷಗಳಿಂದ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದಲ್ಲಿ ವಾಲ್ಮೀಕಿ ಹಾಗೂ ಅಂಬೇಡ್ಕರ್ ಭವನ ಇನ್ನೂ ನಿರ್ಮಾಣವಾಗದ ಸಂಬಂಧ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರ ನಡುವೆ ಜಟಾಪಟಿ ನಡೆಯಿತು.

ನಗರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭವಾಗಿ 9 ವರ್ಷ ಹಾಗೂ ವಾಲ್ಮೀಕಿ ಭವನದ ಕಾಮಗಾರಿ 3 ವರ್ಷಗಳು ಕಳೆದರೂ ಕೂಡ ಇನ್ನು ಕಾಮಗಾರಿ ಮುಗಿಯದಿರುವ ಬಗ್ಗೆ ಇಲಾಖೆ ಅಧಿಕಾರಿ ಸಿದ್ಧನಾರಾಯಣ ಅವರನ್ನು ಕೇಳಿದಾಗ ಅವರ ಬೇಜವಾಬ್ದಾರಿ ಉತ್ತರ ನೀಡಿದ ಹಿನ್ನೆಲೆ ಮಾತಿನ ಚಕಮಕಿ ನಡೆದು, ಅಧಿಕಾರಿಯ ಕೊರಳಪಟ್ಟಿ ಹಿಡಿದಿದ್ದರು. ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಚಿಕ್ಕಬಳ್ಳಾಪುರ: ವಾಲ್ಮೀಕಿ ಸಮುದಾಯದ ಯುವಕರು, ಸಮಾಜ ಕಲ್ಯಾಣಾಧಿಕಾರಿಯ ಕೊರಳಪಟ್ಟಿ ಹಿಡಿದು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಸಮಾಜ ಕಲ್ಯಾಣಾಧಿಕಾರಿಯ ಕೊರಳಪಟ್ಟಿಗೆ ಕೈ ಹಾಕಿದ ಯುವಕರು.

ತಾಲೂಕು ಅಧಿಕಾರಿಗಳು ನಗರಸಭೆ ಆವರಣದಲ್ಲಿ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯ ಈ ಘಟನೆ ನಡೆದಿದೆ. ಕಳೆದ 10 ವರ್ಷಗಳಿಂದ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದಲ್ಲಿ ವಾಲ್ಮೀಕಿ ಹಾಗೂ ಅಂಬೇಡ್ಕರ್ ಭವನ ಇನ್ನೂ ನಿರ್ಮಾಣವಾಗದ ಸಂಬಂಧ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರ ನಡುವೆ ಜಟಾಪಟಿ ನಡೆಯಿತು.

ನಗರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭವಾಗಿ 9 ವರ್ಷ ಹಾಗೂ ವಾಲ್ಮೀಕಿ ಭವನದ ಕಾಮಗಾರಿ 3 ವರ್ಷಗಳು ಕಳೆದರೂ ಕೂಡ ಇನ್ನು ಕಾಮಗಾರಿ ಮುಗಿಯದಿರುವ ಬಗ್ಗೆ ಇಲಾಖೆ ಅಧಿಕಾರಿ ಸಿದ್ಧನಾರಾಯಣ ಅವರನ್ನು ಕೇಳಿದಾಗ ಅವರ ಬೇಜವಾಬ್ದಾರಿ ಉತ್ತರ ನೀಡಿದ ಹಿನ್ನೆಲೆ ಮಾತಿನ ಚಕಮಕಿ ನಡೆದು, ಅಧಿಕಾರಿಯ ಕೊರಳಪಟ್ಟಿ ಹಿಡಿದಿದ್ದರು. ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

Intro:ವಾಲ್ಮಿಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ ಯಲ್ಲಿ ಸಮಾಜ ಕಲ್ಯಾಣಧಿಕಾರಿಗಳ ಕೊರಳು ಪಟ್ಟಿ ಹಿಡಿದು ತರಾಟೆಗೆ ತಗೆದುಕೊಂಡ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.Body:ವಾಲ್ಮೀಕಿ ಜಯಂತಿಯ ಪರವಾಗಿ ತಾಲೂಕು ಅಧಿಕಾರಿಗಳು ನಗರಸಭೆ ಆವರಣದಲ್ಲಿ ಶಾಂತಿ ಸಭೆಯನ್ನು ಏರ್ಪಡಿಸಿದ್ದು ಕಳೆದ 10 ವರ್ಷಗಳಿಂದ ಅಧಿಕಾರಿಗಳ ಬೇಜಾವಬ್ದಾರಿಯಿಂದ ನಗರದಲ್ಲಿ ವಾಲ್ಮೀಕಿ ಭವನ ಹಾಗೂ ಅಂಭೇಡ್ಕರ್ ಇನ್ನೂ ನಿರ್ಮಾಣವಾಗದ ಕಾರಣ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮೂದಾಯದ ಮುಖಂಡರ ನಡುವೆ ಜಟಾಪಟಿ ನಡೆದಿದೆ.

ನಗರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ಆರಂಭವಾಗಿ 9 ವರ್ಷ ಹಾಗೂ ವಾಲ್ಮೀಕಿ ಭವನದ ಕಾಮಗಾರಿ 3 ವರ್ಷಗಳು ಕಳೆದರೂ ಕೂಡ ಇನ್ನು ಕಾಮಗಾರಿ ಮುಗಿಯದಿರುವ ಬಗ್ಗೆ ಇಲಾಖೆ ಅಧಿಕಾರಿ ಸಿದ್ಧನಾರಾಯಣ ಅವರನ್ನು ಕೇಳಿದ್ದಾಗ. ಬೇಜವಾಬ್ದಾರಿ ಉತ್ತರ ನೀಡಿದ ಕಾರಣ ವಾಲ್ಮೀಕಿ ಸಮುದಾಯದ ಯುವಕರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಕೊರಳಪಟ್ಟಿ ಹಿಡಿದು ಗೊಂದಲ ವಾತಾವರಣವನ್ನು ಏರ್ಪಡಿಸಿದ್ದಾರೆ.Conclusion:ವಾಲ್ಮೀಕಿ ಮುಖಂಡರು ಅಧಿಕಾರಿಗಳ ನಡುವೆ ಜಟಾಪಟಿ ಸಮಾಜ ಕಲ್ಯಾಣಾಧಿಕಾರಿ ಕೊರಳಪಟ್ಟಿ ಹಿಡಿದು ಎಳೆದಾಟ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.