ETV Bharat / state

ಈ ಶಾಲೆಯ ಮಕ್ಕಳಿಗಿಲ್ಲ ಪಬ್ಲಿಕ್ ಪರೀಕ್ಷೆಯ ಭಾಗ್ಯ.. ಯಾಕೆ ಅಂತೀರಾ? - There is no chance to a public school test

5ನೇ ತರಗತಿರವೆಗೂ ಕೊಠಡಿಗಳಿದ್ರೂ 7ನೇ ತರಗತಿವರೆಗೂ ಪಾಠಗಳನ್ನು ಮಾಡಲಾಗುತ್ತಿದ್ದ ಶಾಲೆಯಲ್ಲಿ ಈಗ ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಲು ತಿಳಿಸುತ್ತಿದ್ದಾರೆ. ಈಗಾಗಲೇ ಸುಮಾರು 20 ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಿಸಲಾಗಿದೆ.

there-is-no-chance-to-public-examination-for-chinthamani-school-students
ಈ ಶಾಲೆಯ ಮಕ್ಕಳಿಗಿಲ್ಲ ಪಬ್ಲಿಕ್ ಪರೀಕ್ಷೆಯ ಭಾಗ್ಯ
author img

By

Published : Jan 22, 2020, 7:33 PM IST

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ ಪ್ರಾಥಮಿಕ ಶಾಲೆಯ 7ನೇ ತರಗತಿ‌ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ‌ ನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲದೇ ಮಕ್ಕಳು ಪರದಾಡುವಂತಾಗಿದೆ.

ಈ ಶಾಲೆಯ ಮಕ್ಕಳಿಗಿಲ್ಲ ಪಬ್ಲಿಕ್‌ ಪರೀಕ್ಷೆಯ ಭಾಗ್ಯ..

ಶಿಕ್ಷಣ ಇಲಾಖೆ ಸರ್ಕಾರಿ ಊರ್ದು ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಅನುಮತಿ ನೀಡಿದೆ. ಅಂದರೆ ಇಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೂ ಶಿಕ್ಷಣ ನೀಡುವಂತೆ ಅನುಮತಿ ನೀಡಲಾಗಿದೆ. ಆದರೆ, ಇಲ್ಲಿ ಮಾತ್ರ 7ನೇ ತರಗತಿವರೆಗೂ ಪಾಠಗಳನ್ನ ಮಾಡಲಾಗುತ್ತಿದೆ. ಸದ್ಯ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಇಲ್ಲಿನ ಮಕ್ಕಳಿಗೆ ವರ್ಗಾವಣೆಯನ್ನು ನೀಡಿ ಬೇರೊಂದು ಶಾಲೆಗೆ ಸೇರಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ.

5ನೇ ತರಗತಿರವೆಗೂ ಕೊಠಡಿಗಳಿದ್ರೂ 7ನೇ ತರಗತಿವರೆಗೂ ಪಾಠಗಳನ್ನು ಮಾಡಲಾಗುತ್ತಿದ್ದ ಶಾಲೆಯಲ್ಲಿ ಈಗ ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಲು ತಿಳಿಸುತ್ತಿದ್ದಾರೆ. ಈಗಾಗಲೇ ಸುಮಾರು 20 ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಿಸಲಾಗಿದೆ.

ಇದೇ ವಿಚಾರವನ್ನು ನಗರದ 15ನೇ ವಾರ್ಡ್ ನಗರಸಭಾ ಸದಸ್ಯ ಬಶೀರ್ ಅಲ್ಲಾಬಕ್ಷ್‌ ಕಳೆದ ಮೂರು ವರ್ಷಗಳಿಂದ ಶಾಲೆಯ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಈಗ ಮಕ್ಕಳು ಇದರಿಂದಾಗಿ ತೊಂದರೆಗೀಡಾಗಿವೆ ಅಂತಾ ತಮ್ಮ ಅಸಹಾಯಕತೆ ತೋರಿಸುತ್ತಿದ್ದಾರೆ ಅಲ್ಲಾಬಕ್ಷ್‌.

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ ಪ್ರಾಥಮಿಕ ಶಾಲೆಯ 7ನೇ ತರಗತಿ‌ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಕುರಿತು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ‌ ನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲದೇ ಮಕ್ಕಳು ಪರದಾಡುವಂತಾಗಿದೆ.

ಈ ಶಾಲೆಯ ಮಕ್ಕಳಿಗಿಲ್ಲ ಪಬ್ಲಿಕ್‌ ಪರೀಕ್ಷೆಯ ಭಾಗ್ಯ..

ಶಿಕ್ಷಣ ಇಲಾಖೆ ಸರ್ಕಾರಿ ಊರ್ದು ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಅನುಮತಿ ನೀಡಿದೆ. ಅಂದರೆ ಇಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೂ ಶಿಕ್ಷಣ ನೀಡುವಂತೆ ಅನುಮತಿ ನೀಡಲಾಗಿದೆ. ಆದರೆ, ಇಲ್ಲಿ ಮಾತ್ರ 7ನೇ ತರಗತಿವರೆಗೂ ಪಾಠಗಳನ್ನ ಮಾಡಲಾಗುತ್ತಿದೆ. ಸದ್ಯ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಇಲ್ಲಿನ ಮಕ್ಕಳಿಗೆ ವರ್ಗಾವಣೆಯನ್ನು ನೀಡಿ ಬೇರೊಂದು ಶಾಲೆಗೆ ಸೇರಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿದೆ.

5ನೇ ತರಗತಿರವೆಗೂ ಕೊಠಡಿಗಳಿದ್ರೂ 7ನೇ ತರಗತಿವರೆಗೂ ಪಾಠಗಳನ್ನು ಮಾಡಲಾಗುತ್ತಿದ್ದ ಶಾಲೆಯಲ್ಲಿ ಈಗ ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಲು ತಿಳಿಸುತ್ತಿದ್ದಾರೆ. ಈಗಾಗಲೇ ಸುಮಾರು 20 ಮಕ್ಕಳಿಗೆ ಟಿಸಿ ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಿಸಲಾಗಿದೆ.

ಇದೇ ವಿಚಾರವನ್ನು ನಗರದ 15ನೇ ವಾರ್ಡ್ ನಗರಸಭಾ ಸದಸ್ಯ ಬಶೀರ್ ಅಲ್ಲಾಬಕ್ಷ್‌ ಕಳೆದ ಮೂರು ವರ್ಷಗಳಿಂದ ಶಾಲೆಯ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಈಗ ಮಕ್ಕಳು ಇದರಿಂದಾಗಿ ತೊಂದರೆಗೀಡಾಗಿವೆ ಅಂತಾ ತಮ್ಮ ಅಸಹಾಯಕತೆ ತೋರಿಸುತ್ತಿದ್ದಾರೆ ಅಲ್ಲಾಬಕ್ಷ್‌.

Intro:ಸಮ್ಮಿಶ್ರ ಸರ್ಕಾರ ಪತನದ ನಂತರ ಬಿಜೆಪಿ ಸರ್ಕಾರ ಪ್ರಾಥಮಿಕ ಶಾಲೆಯ 7 ನೇ ತರಗತಿ‌ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಕುರಿತು ಮಹತ್ವ ನಿರ್ಧಾರವನ್ನು ತಗೆದುಕೊಂಡಿದ್ದಾರೆ.

ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ‌ ನಗರದ ಸರ್ಕಾರಿ ಶಾಲೆಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಇಲ್ಲದೇ ಮಕ್ಕಳು ಪರದಾಡುವಂತಾಗಿದೆ.

ಹೌದು‌ ಶಿಕ್ಷಣ ಇಲಾಖೆ ಸರ್ಕಾರಿ ಊರ್ದು ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ಅನುಮತಿ ನೀಡಿದ್ದಾರೆ.ಅಂದರೆ ಇಲ್ಲಿ 1 ನೇ ತರಗತಿಯಿಂದ 5 ನೇ ತರಗತಿಯವರೆಗೂ ಶಿಕ್ಷಣ ನೀಡುವಂತೆ ಅನುಮತಿ ನೀಡಲಾಗಿದೆ.ಆದರೆ ಇಲ್ಲಿ ಮಾತ್ರ 7 ನೇ ತರಗತಿ ವರೆಗೂ ಪಾಠಗಳನ್ನ ಮಾಡಲಾಗುತ್ತದೆ.ಸದ್ಯ 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಇರುವುದರಿಂದ ಇಲ್ಲಿನ ಮಕ್ಕಳಿಗೆ ವರ್ಗಾವಣೆಯನ್ನು ನೀಡಿ ಬೇರೊಂದು ಶಾಲೆಗೆ ಸೇರಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ.ಸದ್ಯ ಇದೇ ವಿಚಾರ ಇಲ್ಲಿನ ಮಕ್ಕಳಿಗೆ ಹಾಗೂ ಪೋಷಕರಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ.


ಹೌದು ಇಲ್ಲಿನ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ವರೆಗೂ ಮಾತ್ರ ಪಾಠಗಳನ್ನು ಮಾಡುವಂತೆ ಅನುಮತಿ‌ ನೀಡಲಾಗಿದೆ‌. ಆದರೆ ಇಲ್ಲಿ 7 ನೇ ತರಗತಿಯರೆಗೂ ಪಾಠಗಳನ್ನು ಮಾಡಿ ವಿದ್ಯಾರ್ಥಿಗಳ ಪಾಲಿಗೆ ಮುಳ್ಳಾಗುತ್ತಿದೆ.




Body:5ನೇ ತರಗತಿ ರವೆಗೂ ಕೊಠಡಿಗಳಿದ್ರು 7 ನೇ ತರಗತಿವರೆಗೂ ಪಾಠಗಳನ್ನು ಮಾಡಲಾಗುತ್ತಿದ್ದ ಶಾಲೆಯಲ್ಲಿ ಈಗ ಮಕ್ಕಳಿಗೆ ಟಿಸಿಯನ್ನು ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಲು ತಿಳಿಸುತ್ತಿದ್ದಾರೆ.ಈಗಾಗಲೇ ಸುಮಾರು 20 ಮಕ್ಕಳಿಗೆ ಟಿಸಿಯನ್ನು ಕೊಟ್ಟು ಬೇರೊಂದು ಶಾಲೆಗಳಿಗೆ ಸೇರಿಸಲಾಗಿದೆ.


ಇನ್ನೂ ಇದೇ ವಿಚಾರವನ್ನು ನಗರದ 15 ವಾರ್ಡ್ ನಗರಸಭಾ ಸದ್ಯ ಬಶೀರ್ ಅಲ್ಲಾ ಬಕಾಶ್ ಕಳೆದ ಮೂರು ವರ್ಷಗಳಿಂದ ಶಾಲೆಯ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದರು ಯಾವುದೇ ಪ್ರಯೋಜನವಿಲ್ಲವೆಂದು ತಮ್ಮ ಅಸಹಾಯಕತೆಯನ್ನು ತಿಳಿಸಿದ್ದಾರೆ.

ಇನ್ನೂ ಕೆಲವೇ ದಿನಗಳಲ್ಲಿ ಪಬ್ಲಿಕ್ ಪರೀಕ್ಷೆಗಳು ಇರುವುದರಿಂದ ಶಾಲೆಯ ಮಕ್ಕಳ ಹಾಗೂ ಪೊಷಕರಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ.ಆದರೆ ಇಲ್ಲಿನ ಮಕ್ಕಳು ನಮಗೆ ಪಬ್ಲಿಕ್ ಪರೀಕ್ಷೆ ಇಲ್ಲವಾದ್ರೆ ಮತ್ತೇ 7 ನೇ ತರಗತಿಯನ್ನು ವ್ಯಾಸಾಂಗ ಮಾಡಬೇಕಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಶಿಕ್ಷಣಾ ಇಲಾಖೆ ಅಧಿಕಾರಿಗಳಾದ್ರು ಮಕ್ಕಳ ಭವಿಷ್ಯದ ಬಗ್ಗೆ ಯಾವ ನಿರ್ದಾರಗಳನ್ನು ತಗೆದೊಕೊಳ್ಳುತ್ತಾರೊ ಕಾದು ನೋಡಬೇಕಾಗಿದೆ.




Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.