ETV Bharat / state

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನಮಗೆ ಸ್ಫೂರ್ತಿಯಾಗಬೇಕು: ಸಿಎಂ ಬಿಎಸ್​ವೈ

ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಸುಮಾರು 35 ಜನ ಪ್ರಾಣ ತೆತ್ತರು. ಅವರ ಬಲಿದಾನ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

author img

By

Published : Mar 12, 2021, 9:28 PM IST

ಸಿಎಂ ಬಿಎಸ್​ವೈ
ಸಿಎಂ ಬಿಎಸ್​ವೈ

ಗೌರಿಬಿದನೂರು: ತಾಲೂಕಿನ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಪ್ರಾಣ ತೆತ್ತ ಹೋರಾಟಗಾರರ ಬದುಕು ನಮಗೆ ಅದರ್ಶವಾಗಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ವಿದುರಾಶ್ವತ್ಥ ಕ್ಷೇತ್ರದ ನಾಗಿರೆಡ್ಡಿ ಸಭಾಂಗಣದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ -2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಈ ಭಾಗದ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಸುಮಾರು 38 ಜನ ಪ್ರಾಣ ತೆತ್ತರು. ಅವರ ಬಲಿದಾನ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಇಂತಹ ಸ್ಥಳವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾರ್ಪಾಡಿಸಲು ಸರ್ಕಾರದಿಂದ ಇಡಿಸಿ ಎಂಬ ಯೋಜನೆ ಅಡಿಯಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ -2021

ಬಳಿಕ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲ, ವಿದುರಾಶ್ವತ್ಥವು ದೇಶದ ಎರಡನೇ ಜಲಿಯನ್‌ವಾಲಾಬಾಗ್ ಎಂದು ಪ್ರಸಿದ್ದ ಪಡೆದಿದೆ. 1938ರಲ್ಲಿ ಸ್ವಾತಂತ್ರ್ಯಕ್ಕಾಗಿ ಸುಮಾರು 38 ಜನ ಈ ಭಾಗದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಇವರ ಆದರ್ಶಗಳು ನಮಗೆ ಮತ್ತು ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು, ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ತಿಳಿಸುವ ಕಾರ್ಯಕ್ರಮ ಆಗಬೇಕಿದೆ ಎಂದರು.

ಗೌರಿಬಿದನೂರು: ತಾಲೂಕಿನ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಪ್ರಾಣ ತೆತ್ತ ಹೋರಾಟಗಾರರ ಬದುಕು ನಮಗೆ ಅದರ್ಶವಾಗಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ತಾಲೂಕಿನ ವಿದುರಾಶ್ವತ್ಥ ಕ್ಷೇತ್ರದ ನಾಗಿರೆಡ್ಡಿ ಸಭಾಂಗಣದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ -2021 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಈ ಭಾಗದ ವಿದುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯದ ಕಿಚ್ಚು ಪ್ರಾರಂಭವಾಗಿತ್ತು. ಅಂದು ಸುಮಾರು 38 ಜನ ಪ್ರಾಣ ತೆತ್ತರು. ಅವರ ಬಲಿದಾನ ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಇಂತಹ ಸ್ಥಳವನ್ನು ಐತಿಹಾಸಿಕ ಸ್ಥಳವನ್ನಾಗಿ ಮಾರ್ಪಾಡಿಸಲು ಸರ್ಕಾರದಿಂದ ಇಡಿಸಿ ಎಂಬ ಯೋಜನೆ ಅಡಿಯಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿಗೆ ಒಪ್ಪಿಗೆ ನೀಡಲಾಗಿದೆ ಎಂದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ -2021

ಬಳಿಕ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲ, ವಿದುರಾಶ್ವತ್ಥವು ದೇಶದ ಎರಡನೇ ಜಲಿಯನ್‌ವಾಲಾಬಾಗ್ ಎಂದು ಪ್ರಸಿದ್ದ ಪಡೆದಿದೆ. 1938ರಲ್ಲಿ ಸ್ವಾತಂತ್ರ್ಯಕ್ಕಾಗಿ ಸುಮಾರು 38 ಜನ ಈ ಭಾಗದಲ್ಲಿ ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ. ಇವರ ಆದರ್ಶಗಳು ನಮಗೆ ಮತ್ತು ಇಂದಿನ ಯುವಕರಿಗೆ ಸ್ಫೂರ್ತಿಯಾಗಬೇಕು, ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ತಿಳಿಸುವ ಕಾರ್ಯಕ್ರಮ ಆಗಬೇಕಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.