ETV Bharat / state

ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ: ನಿದ್ದೆ, ಮೊಬೈಲ್​​ ನೋಡುವುದರಲ್ಲೇ ಅಧಿಕಾರಿಗಳು ಬ್ಯುಸಿ

author img

By

Published : Jul 12, 2022, 8:34 PM IST

ಚಿಂತಾಮಣಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಿದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೃಷಿ, ತೋಟಗಾರಿಕೆ, ರೇಷ್ಮೆ, ಕುಡಿಯುವ ನೀರು, ನೈರ್ಮಲ್ಯ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಹಾಗೂ ಇತರ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

mla-krishna-reddy-held-kdp-meeting-in-chintamani
ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ: ನಿದ್ದೆ, ಮೊಬೈಲ್​​ ನೋಡುವುದರಲ್ಲೇ ಅಧಿಕಾರಿಗಳು ಬ್ಯುಸಿ

ಚಿಂತಾಮಣಿ (ಚಿಕ್ಕಬಳ್ಳಾಪುರ): ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಮರ್ಪಕ ಮಾಹಿತಿ ಒದಗಿಸದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕೆಲ ಅಧಿಕಾರಿಗಳು ನಿದ್ದೆಗೆ ಜಾರಿದರೆ, ಮತ್ತೆ ಕೆಲ ಅಧಿಕಾರಿಗಳು ಮೊಬೈಲ್​​ ಹಾಗೂ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಮುಳುಗಿದ್ದರು. ಅಂತಹವರಿಗೂ ಕೃಷ್ಣಾರೆಡ್ಡಿ ಚಳಿ ಬಿಡಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಶಾಸಕರು, ಅಂಬೇಡ್ಕರ್ ಭವನಗಳ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಹಾಗೂ ಇನ್ನೂ ಹಲವು ಕಾಮಗಾರಿಗಳು ಪ್ರಾರಂಭ ಮಾಡದಿರುವುದಕ್ಕೆ ಜಿಲ್ಲಾ ಪಂಚಾಯತ್ ಪ್ರಭಾರ ಅಭಿಯಂತರ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಅದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ: ನಿದ್ದೆ, ಮೊಬೈಲ್​​ ನೋಡುವುದರಲ್ಲೇ ಅಧಿಕಾರಿಗಳು ಬ್ಯುಸಿ

ಸಭೆಗೆ ತಡವಾಗಿ ಬಂದ ಕೃಷಿ ಇಲಾಖೆಯ ಕೃಷಿ ಉಪನಿರ್ದೇಶಕಿ ರೂಪಾ ವಿರುದ್ದ ಶಾಸಕ ಕೃಷ್ಣಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಮುಂಗಾರು ಆರಂಭವಾಗಿರುವುದರಿಂದ ಸಮರ್ಪಕವಾಗಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ನೀಡಬೇಕು. ಗೊಬ್ಬರ ಅಂಗಡಿಗಳಲ್ಲಿ ದರದ ಪಟ್ಟಿ ಹಾಕಬೇಕು ಹಾಗೂ ಹೆಚ್ಚಿನ ದರಕ್ಕೆ ಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ರೈತರಿಂದ ಬರುವ ಅರ್ಜಿಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಸೂಚನೆ ನೀಡಿದರು.

ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಕಳಪೆ ಸಂಬಂಧ ಅಕ್ಷರ ದಾಸೋಹ ಹಾಗೂ ಬಿಇಓ ವಿರುದ್ಧವೂ ಕಿಡಿಕಾರಿದರು. ಗುಣಮಟ್ಟದ ಬಿಸಿಯೂಟ, ಕಳಪೆ ಅಕ್ಕಿ ಸರಬರಾಜು ಮಾಡಲಾತ್ತಿದೆ. ಇದರಿಂದ ಅನ್ನವನ್ನು ಮಕ್ಕಳು ತಿನ್ನಲು ಆಗದೆ ಬೀಸಾಡುವಂತೆ ಆಗಿದೆ. ಈ ಬಗ್ಗೆ ನಾನೇ ಖುದ್ದು ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆಂದು ಬಿಸಿ ಮುಟ್ಟಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಬಿಸಿಎಂ ವಸತಿ ನಿಲಯಗಳಲ್ಲೂ ಗುಣಮಟ್ಟದ ಆಹಾರವನ್ನು ನೀಡದಿರುವ ಬಗ್ಗೆಯೂ ಶಾಸಕರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕುಮಾರಿ ಹಾಗೂ ಬಿಸಿಎಂ ಇಲಾಖೆಯ ನಾರಾಯಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಒದಿಗಿಸುವಂತೆ ತಿಳಿಸಿದರು.

ಶಾಸಕರು ಸಭೆ ನಡೆಸುತ್ತಿದ್ದರೂ ಕೆಲ ಅಧಿಕಾರಿಗಳು ನಿದ್ದೆಗೆ ಜಾರಿರುವುದು ಕಂಡು ಬಂತು. ಮತ್ತೆ ಕೆಲ ಅಧಿಕಾರಿಗಳು ವಾಟ್ಸ್​ಆ್ಯಪ್​ ಚಾಟಿಂಗ್​ನಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಶಾಸಕರು ಇಂತಹ ಅಧಿಕಾರಿಗಳಿಗೂ ತರಾಟೆ ತೆಗೆದುಕೊಂಡು, ಮುಂದೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಾರದೊಳಗೆ ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಿ: ಟಿ ಎಸ್​ ನಾಗಾಭರಣ ತಾಕೀತು

ಚಿಂತಾಮಣಿ (ಚಿಕ್ಕಬಳ್ಳಾಪುರ): ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಮರ್ಪಕ ಮಾಹಿತಿ ಒದಗಿಸದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಕೆಲ ಅಧಿಕಾರಿಗಳು ನಿದ್ದೆಗೆ ಜಾರಿದರೆ, ಮತ್ತೆ ಕೆಲ ಅಧಿಕಾರಿಗಳು ಮೊಬೈಲ್​​ ಹಾಗೂ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಮುಳುಗಿದ್ದರು. ಅಂತಹವರಿಗೂ ಕೃಷ್ಣಾರೆಡ್ಡಿ ಚಳಿ ಬಿಡಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಶಾಸಕರು, ಅಂಬೇಡ್ಕರ್ ಭವನಗಳ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಹಾಗೂ ಇನ್ನೂ ಹಲವು ಕಾಮಗಾರಿಗಳು ಪ್ರಾರಂಭ ಮಾಡದಿರುವುದಕ್ಕೆ ಜಿಲ್ಲಾ ಪಂಚಾಯತ್ ಪ್ರಭಾರ ಅಭಿಯಂತರ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಅದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಶಾಸಕರ ನೇತೃತ್ವದಲ್ಲಿ ಕೆಡಿಪಿ ಸಭೆ: ನಿದ್ದೆ, ಮೊಬೈಲ್​​ ನೋಡುವುದರಲ್ಲೇ ಅಧಿಕಾರಿಗಳು ಬ್ಯುಸಿ

ಸಭೆಗೆ ತಡವಾಗಿ ಬಂದ ಕೃಷಿ ಇಲಾಖೆಯ ಕೃಷಿ ಉಪನಿರ್ದೇಶಕಿ ರೂಪಾ ವಿರುದ್ದ ಶಾಸಕ ಕೃಷ್ಣಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ಮುಂಗಾರು ಆರಂಭವಾಗಿರುವುದರಿಂದ ಸಮರ್ಪಕವಾಗಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಸಾವಯವ ಗೊಬ್ಬರಗಳನ್ನು ಹೆಚ್ಚಾಗಿ ನೀಡಬೇಕು. ಗೊಬ್ಬರ ಅಂಗಡಿಗಳಲ್ಲಿ ದರದ ಪಟ್ಟಿ ಹಾಕಬೇಕು ಹಾಗೂ ಹೆಚ್ಚಿನ ದರಕ್ಕೆ ಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿ, ರೈತರಿಂದ ಬರುವ ಅರ್ಜಿಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಸೂಚನೆ ನೀಡಿದರು.

ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಕಳಪೆ ಸಂಬಂಧ ಅಕ್ಷರ ದಾಸೋಹ ಹಾಗೂ ಬಿಇಓ ವಿರುದ್ಧವೂ ಕಿಡಿಕಾರಿದರು. ಗುಣಮಟ್ಟದ ಬಿಸಿಯೂಟ, ಕಳಪೆ ಅಕ್ಕಿ ಸರಬರಾಜು ಮಾಡಲಾತ್ತಿದೆ. ಇದರಿಂದ ಅನ್ನವನ್ನು ಮಕ್ಕಳು ತಿನ್ನಲು ಆಗದೆ ಬೀಸಾಡುವಂತೆ ಆಗಿದೆ. ಈ ಬಗ್ಗೆ ನಾನೇ ಖುದ್ದು ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆಂದು ಬಿಸಿ ಮುಟ್ಟಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಬಿಸಿಎಂ ವಸತಿ ನಿಲಯಗಳಲ್ಲೂ ಗುಣಮಟ್ಟದ ಆಹಾರವನ್ನು ನೀಡದಿರುವ ಬಗ್ಗೆಯೂ ಶಾಸಕರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಕುಮಾರಿ ಹಾಗೂ ಬಿಸಿಎಂ ಇಲಾಖೆಯ ನಾರಾಯಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಒದಿಗಿಸುವಂತೆ ತಿಳಿಸಿದರು.

ಶಾಸಕರು ಸಭೆ ನಡೆಸುತ್ತಿದ್ದರೂ ಕೆಲ ಅಧಿಕಾರಿಗಳು ನಿದ್ದೆಗೆ ಜಾರಿರುವುದು ಕಂಡು ಬಂತು. ಮತ್ತೆ ಕೆಲ ಅಧಿಕಾರಿಗಳು ವಾಟ್ಸ್​ಆ್ಯಪ್​ ಚಾಟಿಂಗ್​ನಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಶಾಸಕರು ಇಂತಹ ಅಧಿಕಾರಿಗಳಿಗೂ ತರಾಟೆ ತೆಗೆದುಕೊಂಡು, ಮುಂದೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಾರದೊಳಗೆ ಇಂಗ್ಲಿಷ್ ನಾಮಫಲಕಗಳನ್ನು ತೆರವುಗೊಳಿಸಿ: ಟಿ ಎಸ್​ ನಾಗಾಭರಣ ತಾಕೀತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.