ETV Bharat / state

ಹಜರತ್‌ ಅಮ್ಮಾಜಾನ್‌ ಬಾವಾಜಾನ್‌ ದರ್ಗಾ ಹುಂಡಿ ಎಣಿಕೆ.. ₹28,44,930 ಸಂಗ್ರಹ.. - ದರ್ಗಾ ಹುಂಡಿ ಎಣಿಕೆ

ದರ್ಗಾ ಆಡಳಿತ ಅಧಿಕಾರಿಯ ಅವಧಿ ಮುಗಿದಿದ್ದು, ಅವರ ವಿರುದ್ಧದ ಹಲವು ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಈ ಬಗ್ಗೆ ರಾಜ್ಯ ವಕ್ಫ್ ಬೋರ್ಡ್​ನ ನಿರ್ಣಯವನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದರ್ಗಾ ಮೇಲ್ವಿಚಾರಕರಾದ ತಯ್ಯೂಬ್ ನವಾಜ್, ಆರಿಫ್ ಖಾನ್, ಜಬೀವುಲ್ಲಾ, ರಾಜ್ಯ ವಕ್ಫ್ ಬೋರ್ಡ್ ಅಧಿಕಾರಿ ಎಸ್.ಎಫ್. ಫೈಜಿ ಉಪಸ್ಥಿತರಿದ್ದರು..

Hazrat AmmaJaan BawaJaan Dargah Hundi count
ದರ್ಗಾ ಹುಂಡಿ ಎಣಿಕೆ: ಲಕ್ಷಾಧಿಪತಿಯಾದ ಅಮ್ಮಾಜಾನ್ ಬಾವಾಜಾನ್
author img

By

Published : Mar 25, 2022, 7:48 PM IST

ಚಿಂತಾಮಣಿ : ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾ ಸ್ಥಳವಾದ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದೆ. ಭಕ್ತರಿಂದ ಕಾಣಿಕೆ ರೂಪದಲ್ಲಿ ₹28,44,930 ಹಣ ಸಂಗ್ರಹವಾಗಿದೆ.

ದರ್ಗಾ ಹುಂಡಿ ಎಣಿಕೆ : ಲಕ್ಷಾಧಿಪತಿಯಾದ ಅಮ್ಮಾಜಾನ್ ಬಾವಾಜಾನ್

ಪ್ರತಿ ಮೂರು ತಿಂಗಳಿಗೊಮ್ಮೆ ದರ್ಗಾದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಇಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಬೋರ್ಡ್​ನ ಅಧಿಕಾರಿ ರಜಿಯಾ ಸುಲ್ತಾನಾ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಸಲಾಯಿತು. ಹುಂಡಿ ಎಣಿಕೆ ಕಾರ್ಯಕ್ರಮ ಮುಕ್ತಾಯವಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿಗಳು, ಮಾರ್ಚ್‌ ತಿಂಗಳ 28ರಂದು ರಾಜ್ಯ ವಕ್ಫ್ ಬೋರ್ಡ್​ನಲ್ಲಿ ಸಭೆಯ ನಿರ್ಣಯದಂತೆ ಅಭಿವೃದ್ಧಿ ಮಾಡಲಾಗುವುದು.

ದರ್ಗಾ ಆಡಳಿತ ಅಧಿಕಾರಿಯ ಅವಧಿ ಮುಗಿದಿದ್ದು, ಅವರ ವಿರುದ್ಧದ ಹಲವು ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಈ ಬಗ್ಗೆ ರಾಜ್ಯ ವಕ್ಫ್ ಬೋರ್ಡ್​ನ ನಿರ್ಣಯವನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದರ್ಗಾ ಮೇಲ್ವಿಚಾರಕರಾದ ತಯ್ಯೂಬ್ ನವಾಜ್, ಆರಿಫ್ ಖಾನ್, ಜಬೀವುಲ್ಲಾ, ರಾಜ್ಯ ವಕ್ಫ್ ಬೋರ್ಡ್ ಅಧಿಕಾರಿ ಎಸ್.ಎಫ್. ಫೈಜಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಹೊಸ ಭತ್ತದ ತಳಿ ಕಂಡುಹಿಡಿದು ಪೇಟೆಂಟ್ ಪಡೆದ ರೈತ : ಗ್ರಾಂ ಲೆಕ್ಕದಲ್ಲಿ ಮಾತ್ರ ಮಾರುತ್ತಾರಂತೆ!

ಚಿಂತಾಮಣಿ : ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾ ಸ್ಥಳವಾದ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದೆ. ಭಕ್ತರಿಂದ ಕಾಣಿಕೆ ರೂಪದಲ್ಲಿ ₹28,44,930 ಹಣ ಸಂಗ್ರಹವಾಗಿದೆ.

ದರ್ಗಾ ಹುಂಡಿ ಎಣಿಕೆ : ಲಕ್ಷಾಧಿಪತಿಯಾದ ಅಮ್ಮಾಜಾನ್ ಬಾವಾಜಾನ್

ಪ್ರತಿ ಮೂರು ತಿಂಗಳಿಗೊಮ್ಮೆ ದರ್ಗಾದ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಇಂದು ಚಿಕ್ಕಬಳ್ಳಾಪುರ ಜಿಲ್ಲಾ ವಕ್ಫ್ ಬೋರ್ಡ್​ನ ಅಧಿಕಾರಿ ರಜಿಯಾ ಸುಲ್ತಾನಾ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಸಲಾಯಿತು. ಹುಂಡಿ ಎಣಿಕೆ ಕಾರ್ಯಕ್ರಮ ಮುಕ್ತಾಯವಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅಧಿಕಾರಿಗಳು, ಮಾರ್ಚ್‌ ತಿಂಗಳ 28ರಂದು ರಾಜ್ಯ ವಕ್ಫ್ ಬೋರ್ಡ್​ನಲ್ಲಿ ಸಭೆಯ ನಿರ್ಣಯದಂತೆ ಅಭಿವೃದ್ಧಿ ಮಾಡಲಾಗುವುದು.

ದರ್ಗಾ ಆಡಳಿತ ಅಧಿಕಾರಿಯ ಅವಧಿ ಮುಗಿದಿದ್ದು, ಅವರ ವಿರುದ್ಧದ ಹಲವು ದೂರುಗಳು ನಮ್ಮ ಗಮನಕ್ಕೂ ಬಂದಿವೆ. ಈ ಬಗ್ಗೆ ರಾಜ್ಯ ವಕ್ಫ್ ಬೋರ್ಡ್​ನ ನಿರ್ಣಯವನ್ನು ಪಾಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದರ್ಗಾ ಮೇಲ್ವಿಚಾರಕರಾದ ತಯ್ಯೂಬ್ ನವಾಜ್, ಆರಿಫ್ ಖಾನ್, ಜಬೀವುಲ್ಲಾ, ರಾಜ್ಯ ವಕ್ಫ್ ಬೋರ್ಡ್ ಅಧಿಕಾರಿ ಎಸ್.ಎಫ್. ಫೈಜಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಹೊಸ ಭತ್ತದ ತಳಿ ಕಂಡುಹಿಡಿದು ಪೇಟೆಂಟ್ ಪಡೆದ ರೈತ : ಗ್ರಾಂ ಲೆಕ್ಕದಲ್ಲಿ ಮಾತ್ರ ಮಾರುತ್ತಾರಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.