ETV Bharat / state

ಕಿಡಿಗೇಡಿಗಳ ಕೃತ್ಯಕ್ಕೆ 5 ಎಕರೆ ಕಾಡೇ ಭಸ್ಮ.... ಪ್ರಾಣಿಗಳು ವಿಲವಿಲ - ಚಿಕ್ಕಬಳ್ಳಾಪುರ ಕಾಡಿಗೆ ಬೆಂಕಿ

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ಸಮೀಪದ ಕಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಶಂಕೆ ವ್ಯಕ್ತವಾಗಿದೆ. ಇದರಿಂದ ಸುಮಾರು 5 ಎಕರೆ ಕಾಡು ಬೆಂಕಿಗೆ ಆಹುತಿಯಾಗಿದೆ.

fire  in chikkaballapura forest
ಕಿಡಿಗೇಡಿಗಳ ಕೃತ್ಯಕ್ಕೆ 5 ಎಕರೆ ಕಾಡು ಭಸ್ಮ
author img

By

Published : Apr 2, 2020, 11:12 PM IST

ಚಿಕ್ಕಬಳ್ಳಾಪುರ: ಕಿಡಿಗೇಡಿಗಳ ಕೃತ್ಯದಿಂದ ಸುಮಾರು‌ 5 ಎಕರೆ ಕಾಡು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ಬಳಿಯ ಕಾಡಿನಲ್ಲಿ ನಡೆದಿದೆ.

fire  in chikkaballapura forest
ಕಿಡಿಗೇಡಿಗಳ ಕೃತ್ಯಕ್ಕೆ 5 ಎಕರೆ ಕಾಡು ಭಸ್ಮ

ಕೆ.ಮುತ್ತುಕದಹಳ್ಳಿ ವೃಕ್ಷ ಬೆಳೆಗಾರರ ಸಹಕಾರ ಸಂಘವು ಸಂರಕ್ಷಣೆ ಮಾಡಿದ ಕಾಡು ಇದಾಗಿತ್ತು. ಗ್ರಾಮದ ಅಕ್ಕ- ಪಕ್ಕದ ಮನೆಗಳ ಸಮೀಪಕ್ಕೂ ಬೆಂಕಿಯ ಜ್ವಾಲೆ ಆವರಿಸಿದೆ. ಇದರಿಂದ ದಟ್ಟವಾದ ಹೊಗೆ ಆವರಿಸಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಇನ್ನೂ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು. ಬಿಸಿಲಿನ ಬೇಗೆಗೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ಅಲ್ಲಿ ವಾಸವಿದ್ದ ಜಿಂಕೆ, ಮೊಲ, ನವಿಲುಗಳು ಪರದಾಡಬೇಕಾದ ಸ್ಥಿತಿ ಎದುರಾಗಿದೆ.

ಚಿಕ್ಕಬಳ್ಳಾಪುರ: ಕಿಡಿಗೇಡಿಗಳ ಕೃತ್ಯದಿಂದ ಸುಮಾರು‌ 5 ಎಕರೆ ಕಾಡು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೆ.ಮುತ್ತಕದಹಳ್ಳಿ ಬಳಿಯ ಕಾಡಿನಲ್ಲಿ ನಡೆದಿದೆ.

fire  in chikkaballapura forest
ಕಿಡಿಗೇಡಿಗಳ ಕೃತ್ಯಕ್ಕೆ 5 ಎಕರೆ ಕಾಡು ಭಸ್ಮ

ಕೆ.ಮುತ್ತುಕದಹಳ್ಳಿ ವೃಕ್ಷ ಬೆಳೆಗಾರರ ಸಹಕಾರ ಸಂಘವು ಸಂರಕ್ಷಣೆ ಮಾಡಿದ ಕಾಡು ಇದಾಗಿತ್ತು. ಗ್ರಾಮದ ಅಕ್ಕ- ಪಕ್ಕದ ಮನೆಗಳ ಸಮೀಪಕ್ಕೂ ಬೆಂಕಿಯ ಜ್ವಾಲೆ ಆವರಿಸಿದೆ. ಇದರಿಂದ ದಟ್ಟವಾದ ಹೊಗೆ ಆವರಿಸಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಇನ್ನೂ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದ್ದು. ಬಿಸಿಲಿನ ಬೇಗೆಗೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ಅಲ್ಲಿ ವಾಸವಿದ್ದ ಜಿಂಕೆ, ಮೊಲ, ನವಿಲುಗಳು ಪರದಾಡಬೇಕಾದ ಸ್ಥಿತಿ ಎದುರಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.