ETV Bharat / state

ಉಳುಮೆ ಮಾಡುವಾಗ ಟ್ರ್ಯಾಕ್ಟರ್​ ರೋಟರಿಗೆ ಸಿಲುಕಿ ಚಾಲಕ ಸಾವು

author img

By

Published : May 30, 2022, 8:51 PM IST

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕ ಆಯಾತಪ್ಪಿ ರೋಟರಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.

Tractor driver dies in Kadabur village in Gauribidanur taluk
ಟ್ರಾಕ್ಟರ್

ಚಿಕ್ಕಬಳ್ಳಾಪುರ: ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಚಾಲಕ ಆಯಾತಪ್ಪಿ ರೋಟರಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್​ನ ರೋಟರಿಗೆ ಸಿಲುಕಿ ನಜ್ಜುಗುಜ್ಜಾಗಿರೋ ವ್ಯಕ್ತಿಯನ್ನು ಕಾಮಗಾನಹಳ್ಳಿಯ ದೊಡ್ಡ ನರಸಿಂಹಯ್ಯ (54) ಎಂದು ತಿಳಿದುಬಂದಿದೆ.

ಟ್ರ್ಯಾಕ್ಟರ್​ ರೋಟರಿಗೆ ಸಿಲುಕಿ ಚಾಲಕ ಸಾವು
ಟ್ರ್ಯಾಕ್ಟರ್​ ರೋಟರಿಗೆ ಸಿಲುಕಿ ಚಾಲಕ ಸಾವು

ಕಾಮಗಾನಹಳ್ಳಿ ನಿವಾಸಿ ರೈತರು ಆಗಿದ್ದ ದೊಡ್ಡ ನರಸಿಂಹಯ್ಯ ಟ್ರ್ಯಾಕ್ಟರ್ ಚಾಲಕರಾಗಿದ್ದು, ಉಳುಮೆ ಮಾಡುವ ಸಲುವಾಗಿ ಕಡುಬೂರು ಗ್ರಾಮಕ್ಕೆ ತೆರಳಿದ್ದರು. ಸದ್ಯ ಕಟುಂಬಸ್ಥರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ರೋಟರ್​ ಸಮೇತ ಟ್ರ್ಯಾಕ್ಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ-ಮಗಳಿಗೆ ಗುಪ್ತಾಂಗ ತೋರಿಸಿದ ಯುವಕ ಅರೆಸ್ಟ್​

ಚಿಕ್ಕಬಳ್ಳಾಪುರ: ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಚಾಲಕ ಆಯಾತಪ್ಪಿ ರೋಟರಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಡಬೂರು ಗ್ರಾಮದಲ್ಲಿ ನಡೆದಿದೆ. ಟ್ರ್ಯಾಕ್ಟರ್​ನ ರೋಟರಿಗೆ ಸಿಲುಕಿ ನಜ್ಜುಗುಜ್ಜಾಗಿರೋ ವ್ಯಕ್ತಿಯನ್ನು ಕಾಮಗಾನಹಳ್ಳಿಯ ದೊಡ್ಡ ನರಸಿಂಹಯ್ಯ (54) ಎಂದು ತಿಳಿದುಬಂದಿದೆ.

ಟ್ರ್ಯಾಕ್ಟರ್​ ರೋಟರಿಗೆ ಸಿಲುಕಿ ಚಾಲಕ ಸಾವು
ಟ್ರ್ಯಾಕ್ಟರ್​ ರೋಟರಿಗೆ ಸಿಲುಕಿ ಚಾಲಕ ಸಾವು

ಕಾಮಗಾನಹಳ್ಳಿ ನಿವಾಸಿ ರೈತರು ಆಗಿದ್ದ ದೊಡ್ಡ ನರಸಿಂಹಯ್ಯ ಟ್ರ್ಯಾಕ್ಟರ್ ಚಾಲಕರಾಗಿದ್ದು, ಉಳುಮೆ ಮಾಡುವ ಸಲುವಾಗಿ ಕಡುಬೂರು ಗ್ರಾಮಕ್ಕೆ ತೆರಳಿದ್ದರು. ಸದ್ಯ ಕಟುಂಬಸ್ಥರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ರೋಟರ್​ ಸಮೇತ ಟ್ರ್ಯಾಕ್ಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ-ಮಗಳಿಗೆ ಗುಪ್ತಾಂಗ ತೋರಿಸಿದ ಯುವಕ ಅರೆಸ್ಟ್​

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.