ETV Bharat / state

ಈ ಬಾರಿ ಚುನಾವಣೆಯಲ್ಲಿ ಗೆಲುವು ನಮ್ಮದೇ.. ಸಚಿವ ಸಿ ಟಿ ರವಿ ಅಚಲ ವಿಶ್ವಾಸ

author img

By

Published : Nov 23, 2019, 5:01 PM IST

Updated : Nov 23, 2019, 9:30 PM IST

ಉಪಚುನಾವಣಾ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷದ ರಾಜಕೀಯ ನಾಯಕರು ಸಭೆ, ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದು, ಇಂದು ನಗರದಲ್ಲಿ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಟಿ ರವಿ , CT Ravi

ಚಿಕ್ಕಬಳ್ಳಾಪುರ: ಗುಪ್ತಚರ ವರದಿಗಳ ಪ್ರಕಾರ ಬಿಜೆಪಿ ಈ ಚುನಾವಣೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಭವಿಷ್ಯ ನುಡಿದಿದ್ದಾರೆ.

ಪ್ರವಾಸೋಧ್ಯಮ ಸಚಿವ ಸಿಟಿ ರವಿ

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಪಕ್ಷ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಗುಪ್ತಚರ ವರದಿಗಳು ತಿಳಿಸಿವೆ. ಬಿಜೆಪಿ ಪಕ್ಷವನ್ನು ಸೋಲಿಸಲು ಸಾಕಷ್ಟು ಪಿತೂರಿಗಳು ನಡೆಯುತ್ತಿವೆ. ಆದರೆ, ಆದ್ಯಾವುದೂ ಸಾಧ್ಯವಿಲ್ಲ. ಇನ್ನು, ಕಾರ್ಯಕರ್ತರು ತಳ ಮಟ್ಟದಿಂದ ಶ್ರಮವಹಿಸಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಸಾಕಷ್ಟು ಕಾರ್ಯಕರ್ತರು ಕಾಂಗ್ರೆಸ್,ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ನಮ್ಮ ಪಕ್ಷ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರೂ ಆ ಪಕ್ಷದಿಂದ ಬಂದವರು, ಈ ಪಕ್ಷದಿಂದ ಬಂದವರು ಎಂದು ಭೇದ ಭಾವ ತೋರದೆ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಮೋಹನ್,ವೈ ಎ ನಾರಾಯಸ್ವಾಮಿ,ಬೆಳ್ಳಿ ಪ್ರಕಾಶ್,ನಾಗೇಶ್, ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿಗೆ ಕ್ಷೇತ್ರದ ಹಲವು ಪಂಚಾಯತ್‌ಗಳ ಉಸ್ತುವಾರಿಗಳನ್ನು ಒಪ್ಪಿಸಿದರು.

ಚಿಕ್ಕಬಳ್ಳಾಪುರ: ಗುಪ್ತಚರ ವರದಿಗಳ ಪ್ರಕಾರ ಬಿಜೆಪಿ ಈ ಚುನಾವಣೆಯಲ್ಲಿ ಅತೀ ಹೆಚ್ಚಿನ ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಭವಿಷ್ಯ ನುಡಿದಿದ್ದಾರೆ.

ಪ್ರವಾಸೋಧ್ಯಮ ಸಚಿವ ಸಿಟಿ ರವಿ

ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಪಕ್ಷ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈಗಾಗಲೇ ಗುಪ್ತಚರ ವರದಿಗಳು ತಿಳಿಸಿವೆ. ಬಿಜೆಪಿ ಪಕ್ಷವನ್ನು ಸೋಲಿಸಲು ಸಾಕಷ್ಟು ಪಿತೂರಿಗಳು ನಡೆಯುತ್ತಿವೆ. ಆದರೆ, ಆದ್ಯಾವುದೂ ಸಾಧ್ಯವಿಲ್ಲ. ಇನ್ನು, ಕಾರ್ಯಕರ್ತರು ತಳ ಮಟ್ಟದಿಂದ ಶ್ರಮವಹಿಸಬೇಕಾಗಿದೆ ಎಂದು ವ್ಯಂಗ್ಯವಾಡಿದರು.

ಸಾಕಷ್ಟು ಕಾರ್ಯಕರ್ತರು ಕಾಂಗ್ರೆಸ್,ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ. ನಮ್ಮ ಪಕ್ಷ ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರೂ ಆ ಪಕ್ಷದಿಂದ ಬಂದವರು, ಈ ಪಕ್ಷದಿಂದ ಬಂದವರು ಎಂದು ಭೇದ ಭಾವ ತೋರದೆ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಮೋಹನ್,ವೈ ಎ ನಾರಾಯಸ್ವಾಮಿ,ಬೆಳ್ಳಿ ಪ್ರಕಾಶ್,ನಾಗೇಶ್, ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿಗೆ ಕ್ಷೇತ್ರದ ಹಲವು ಪಂಚಾಯತ್‌ಗಳ ಉಸ್ತುವಾರಿಗಳನ್ನು ಒಪ್ಪಿಸಿದರು.

Intro:ಗುಪ್ತಾಚರ ವರದಿಗಳು ಬಿಜೆಪಿ ಅತಿ ಹೆಚ್ಚಿನ ಗೆಲುವನ್ನು ಸಾಧಿಸಸಲಿದೆ ಎಂದು ವರದಿ ನೀಡಿದೆ ಎಂದು ಪ್ರವಾಸೋಧ್ಯಮ ಸಚಿವ ಸಿಟಿ ರವಿ ಚಿಕ್ಕಬಳ್ಳಾಪುರದ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.


Body:ಇಂದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯರ್ಶಿಗಳು ಬಿ ಎಲ್ ಸಂತೋಷ್ ಚಿಕ್ಕಬಳ್ಳಾಪುರ ನಗರದಲ್ಲಿ ಕಾರ್ಯಕರ್ತರ ಸಭೆಗೆ ಹಾಜರಾಗಿದ್ದ ಕಾರ್ಯಕ್ರಮದಲ್ಲಿ ಮಾತಾನಾಡಿದ ಸಿಟಿ ರವಿ ಬಿಜೆಪಿ ಪಕ್ಷ 15 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಲಿದೆ ಎಂದು ಈಗಾಗಲೇ ಗುಪ್ತಾಚರ ವರದಿಗಳು ತಿಳಿಸಿವೆ ಎಂದು ತಿಳಿಸಿದ್ದಾರೆ.

ಬಿಜೆಪಿ ಪಕ್ಷವನ್ನು ಸೋಲಿಸಲು ಸಾಕಷ್ಟು ಪಿತ್ತೂರಿಗಳು ನಡೆಯುತ್ತಿವೆ ಆದರೆ ಆದ್ಯಾವುದು ಸಾಧ್ಯವಿಲ್ಲಾ.ಇನ್ನೂ ಕಾರ್ಯಕರ್ತರು ತಳ ಮಟ್ಟದಿಂದ ಶ್ರಮವಹಿಸಬೇಕಾಗಿದೆ. ಸಾಕಷ್ಟು ಕಾರ್ಯಕರ್ತರು ಕಾಂಗ್ರೆಸ್,ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ ಎಲ್ಲಾರು ಆ ಪಕ್ಷದಿಂದ ಬಂದವರು ಎಂದು ಭೇಧಭಾವ ತೋರದೆ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕಾಗಿದೆ ಎಂದು ತಿಳಿಸಿದರು..

ಇನ್ನೂ ಕಾರ್ಯಕ್ರಮದಲ್ಲಿ ಸಂಸದ ಮೋಹನ್,ವೈಎ ನಾರಣಯಸ್ವಾಮಿ,ಬೆಳ್ಳಿ ಪ್ರಕಾಶ್ ,ನಾಗೇಶ್,ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿಗೆ ಕ್ಷೇತ್ರದ ಹಲವು ಪಂಚಯತಿಗಳ ಉಸ್ತುವಾರಿಗಳನ್ನು ಒಪ್ಪಿಸಿದರು.


Conclusion:
Last Updated : Nov 23, 2019, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.