ETV Bharat / state

ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಹುತಾತ್ಮ ಯೋಧನ ಸ್ಮಾರಕ

ಸೂಕ್ತ ನಿರ್ವಹಣೆಯಿಲ್ಲದೆ ಚಿಕ್ಕಬಳ್ಳಾಪುರದಲ್ಲಿ ಹುತಾತ್ಮ ಯೋಧನೊಬ್ಬನ ಸ್ಮಾರಕ ಅವನತಿಯ ಹಂತಕ್ಕೆ ತಲುಪಿದ್ದು, ಸ್ಮಾರಕದ ಅಭಿವೃದ್ದಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

author img

By

Published : Jul 26, 2019, 11:04 PM IST

ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಹುತಾತ್ಮ ಯೋಧನ ಸ್ಮಾರಕ

ಚಿಕ್ಕಬಳ್ಳಾಪುರ : ದೇಶದೆಲ್ಲೆಡೆ ಇಂದು ಕಾರ್ಗಿಲ್ ವಿಜಯ ದಿನ ಆಚರಿಸಿ ಹುತಾತ್ಮ ಯೋಧರ ಸ್ಮರಣೆ ಮಾಡಲಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಯೋಧನೊಬ್ಬನ ಸ್ಮಾರಕ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಇತಿಹಾಸ ಪುಟ ಸೇರುವ ಹಂತಕ್ಕೆ ತಲುಪಿದೆ.

ತಾಲೂಕಿನ ಕೈವಾರದ ಬಿ.ಎಸ್.ಎಫ್ ಯೋಧ ಕೆಲ್.ಎಲ್.ರಮೇಶ್ 2004ರಲ್ಲಿ ಹುತಾತ್ಮರಾಗಿದ್ದರು. ಇವರ ಸ್ಮರಣಾರರ್ಥ ಕೈವಾರದ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ಸ್ಮಾರಕ ಸೂಕ್ತ ನಿರ್ವಹಣೆಯಿಲ್ಲದೆ ಗಿಡ ಗಂಟಿಗಳಿಂದ ತುಂಬಿದ್ದು, ಹಾಳು ಕೊಂಪೆಯಂತಾಗಿದೆ.

ಸ್ಮಾರಕದ ಒಂದು ಕಡೆ ಕಸಕಡ್ಡಿ ತುಂಬಿದ್ದರೆ, ಮತ್ತೊಂದು ಕಡೆ ಗೋಣಿ ಚೀಲಗಳು ರಾಶಿ ಬಿದ್ದಿವೆ. ಸ್ಮಾರಕದ ಸುತ್ತ ಗಿಡಗಂಟಿಗಳು ಬೆಳೆದು ಸ್ಮಾರಕವನ್ನು ಸಂಪೂರ್ಣವಾಗಿ ಆವರಿಸುವ ಹಂತಕ್ಕೆ ತಲುಪಿದೆ. ಸದ್ಯ ಕಾರ್ಗಿಲ್ ವಿಜಯ ದಿನವಾದ ಇಂದು ಹುತಾತ್ಮ ಯೋಧನ ಸ್ಮಾರಕವನ್ನು ಕೈವಾರ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಸ್ವಚ್ಚಗೊಳಿಸಿ ಪುಷ್ಪಹಾರ ಹಾಕಿ ಗೌರವ ಸೂಚಿಸುವ ಕೆಲಸವನ್ನು ಮಾಡಿದ್ದಾರೆ.

ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಹುತಾತ್ಮ ಯೋಧನ ಸ್ಮಾರಕ

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಂಜುನಾಥ್ ಮಾತನಾಡಿ, ಕಳೆದ ವರ್ಷ ಕೇಂದ್ರದಿಂದ ಅಧಿಕಾರಿಗಳು ಆಗಮಿಸಿ ಗೌರವ ಅರ್ಪಿಸುವ ಕಾರ್ಯವನ್ನು ಮಾಡಿದ್ದರು. ಆದರೆ ಈ ವರ್ಷ ಯಾವುದೇ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ. ನರೇಗಾ ಯೋಜನೆಯಡಿಯಲ್ಲಿ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ದಪಡಿಸಿ ಅನುಮೋದನೆ ಪಡೆಯಲಾಗಿದೆ. ಏನೇ ಆಗಲಿ ನನ್ನ ಅಧಿಕಾರವದಿ ಕೊನೆಗೊಳ್ಳುವ ಮುನ್ನ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ

ಚಿಕ್ಕಬಳ್ಳಾಪುರ : ದೇಶದೆಲ್ಲೆಡೆ ಇಂದು ಕಾರ್ಗಿಲ್ ವಿಜಯ ದಿನ ಆಚರಿಸಿ ಹುತಾತ್ಮ ಯೋಧರ ಸ್ಮರಣೆ ಮಾಡಲಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಯೋಧನೊಬ್ಬನ ಸ್ಮಾರಕ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಇತಿಹಾಸ ಪುಟ ಸೇರುವ ಹಂತಕ್ಕೆ ತಲುಪಿದೆ.

ತಾಲೂಕಿನ ಕೈವಾರದ ಬಿ.ಎಸ್.ಎಫ್ ಯೋಧ ಕೆಲ್.ಎಲ್.ರಮೇಶ್ 2004ರಲ್ಲಿ ಹುತಾತ್ಮರಾಗಿದ್ದರು. ಇವರ ಸ್ಮರಣಾರರ್ಥ ಕೈವಾರದ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ಸ್ಮಾರಕ ಸೂಕ್ತ ನಿರ್ವಹಣೆಯಿಲ್ಲದೆ ಗಿಡ ಗಂಟಿಗಳಿಂದ ತುಂಬಿದ್ದು, ಹಾಳು ಕೊಂಪೆಯಂತಾಗಿದೆ.

ಸ್ಮಾರಕದ ಒಂದು ಕಡೆ ಕಸಕಡ್ಡಿ ತುಂಬಿದ್ದರೆ, ಮತ್ತೊಂದು ಕಡೆ ಗೋಣಿ ಚೀಲಗಳು ರಾಶಿ ಬಿದ್ದಿವೆ. ಸ್ಮಾರಕದ ಸುತ್ತ ಗಿಡಗಂಟಿಗಳು ಬೆಳೆದು ಸ್ಮಾರಕವನ್ನು ಸಂಪೂರ್ಣವಾಗಿ ಆವರಿಸುವ ಹಂತಕ್ಕೆ ತಲುಪಿದೆ. ಸದ್ಯ ಕಾರ್ಗಿಲ್ ವಿಜಯ ದಿನವಾದ ಇಂದು ಹುತಾತ್ಮ ಯೋಧನ ಸ್ಮಾರಕವನ್ನು ಕೈವಾರ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಸ್ವಚ್ಚಗೊಳಿಸಿ ಪುಷ್ಪಹಾರ ಹಾಕಿ ಗೌರವ ಸೂಚಿಸುವ ಕೆಲಸವನ್ನು ಮಾಡಿದ್ದಾರೆ.

ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಹುತಾತ್ಮ ಯೋಧನ ಸ್ಮಾರಕ

ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಂಜುನಾಥ್ ಮಾತನಾಡಿ, ಕಳೆದ ವರ್ಷ ಕೇಂದ್ರದಿಂದ ಅಧಿಕಾರಿಗಳು ಆಗಮಿಸಿ ಗೌರವ ಅರ್ಪಿಸುವ ಕಾರ್ಯವನ್ನು ಮಾಡಿದ್ದರು. ಆದರೆ ಈ ವರ್ಷ ಯಾವುದೇ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ. ನರೇಗಾ ಯೋಜನೆಯಡಿಯಲ್ಲಿ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ದಪಡಿಸಿ ಅನುಮೋದನೆ ಪಡೆಯಲಾಗಿದೆ. ಏನೇ ಆಗಲಿ ನನ್ನ ಅಧಿಕಾರವದಿ ಕೊನೆಗೊಳ್ಳುವ ಮುನ್ನ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ

Intro:ದೇಶದೆಲ್ಲೆಡೆ ಇಂದು ಕಾರ್ಗಿಲ್ ವಿಜಯ್ ದಿನಸ್ ಆಚರಣೆಯನ್ನು ಮಾಡಿ ಹುತಾತ್ಮ ಯೋಧರನ್ನು ನೆನಪಿಸಿಕೊಳ್ಳುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಗೆ ಸೇರಿದ ಯೋಧನ ಸ್ಮಾರಕ್ಕೆ ಯಾವುದೇ ಗೌರವನ್ನು ತೋರದೆ ಅಪಮಾನವನ್ನು ಮಾಡಿದ್ದಾರೆ.


Body:ಹೌದು ತಾಲೂಕಿನ ಕೈವಾರ ದಲ್ಲಿ ಬಿಎಸ್ ಎಫ್ ಯೋಧ 2004 ರಲ್ಲಿ ಹುತಾತ್ಮರಾಗಿದ್ದು ಕೈವಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಯೋಧ ಕೆಲ್ ಎಲ್ ರಮೇಶ್ ರವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದು ಈಗ ಸ್ಮಾರಕದ ಬಳಿ ಯಾವುದೇ ಅಭಿವೃದ್ಧಿ ನಿರ್ಮಾಣವಿಲ್ಲದೆ ಮೂಲೆ ಗುಂಪಾಗಿದೆ.

ಒಂದು ಕಡೆ ಕಸಕಡ್ಡಿಗಳಿಂದ ತುಂಬಿದೆ,ಮತ್ತೊಂದು ಕಡೆ ಗೋಣಿ ಚೀಲಗಳು,ಸ್ಮಾರಕದ ಸುತ್ತಾ ಎದ್ದು ಬೆಳೆದು ನಿಂತ ಗಬ್ಬು ಗಿಡಗಳು ಸ್ಮಾರವನ್ನು ಆವರಿಸಿ ಯಾರು ಇಲ್ಲದಂತಾಗಿದೆ.
ಸದ್ಯ ಇಂದು ದೇಶವಿಡಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಮಾಡುತ್ತಿದ್ದು ಎಲ್ಲೆಡೆ ಹುತಾತ್ಮ ಯೋಧರಿಗೆ ನಮನವನ್ನು ಅರ್ಪಿಸುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಬಿಎಸ್ ಎಫ್ ಹುತಾತ್ಮ ಯೋಧ ರಮೇಶ್ ಸ್ಮಾರಕಕ್ಕೆ ಯಾವುದೇ ರಕ್ಷಣೆಯನ್ನು ನೀಡದೆ ಗಾಳಿಗೆ ತೂರಿರುವುದು ದೇಶ ಪ್ರೇಮಿಗಳಿಗೆ ಬೇಸರವನ್ನು ತಂದಿದೆ.

ಸದ್ಯ ಇಂದು ಯೋಧನ ಸ್ಮಾರಕಕ್ಕೆ ಕೈವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸ್ಮಾರಕವನ್ನು ಸ್ವಚ್ಚಗೊಳಿಸಿ ಹೂಮಾಲೆಯನ್ನು ಅರ್ಪಿಸಿ ಗೌರವನ್ನು ಸೂಚಿಸಿದರು.ಕಳೆದ ವರ್ಷದ ಹಿಂದೆ ಮಾತ್ರ ಕೇಂದ್ರದಿಂದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗೌರವನ್ನು ಅರ್ಪಿಸುತ್ತಿದ್ದರು ಆದರೆ ಈ ವರ್ಷ ಯಾವುದೇ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ ಎಂದು ಗ್ರಾಮಪಂಚಾಯತಿ ಅಧ್ಯಕ್ಷರು ತಿಳಿಸಿದ್ದು ಈಗ ನರೇಗಾ ಕಾಮಾಗಾರಿಯಲ್ಲಿ ಅಭಿವೃದ್ಧಿ ಪಡೆಸಲು ಪ್ಲಾನ್ ಸಿದ್ದಪಡಿಸಿ ಅನುಮೋದನೆಯನ್ನು ಪಡೆದುಕೊಂಡಿದ್ದಾರೆ. ಏನೇ ಆಗಲೀ ನನ್ನ ಅಧಿಕಾರ ಮುಗಿಯುವ ವೇಳೆಗೆ ಸ್ಮರಕವನ್ನು ಅಭಿವೃದ್ಧಿ ಪಡೆಸುತ್ತೇನೆಂದು ತಿಳಿಸಿದರು.






Conclusion:ಶಿಕ್ಷಕಿ ಆಯಿಶಾ ಖಾನಂ

ಗ್ರಾಮಪಂಚಾಯತಿ ಅಧ್ಯಕ್ಷರು ಶೈಲಜ ಮಂಜುನಾಥ್

ಶಿಕ್ಷಕ ಶಿವಾರೆಡ್ಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.