ETV Bharat / state

2023ಕ್ಕೆ ಬಸವರಾಜ್ ಬೊಮ್ಮಾಯಿ ಮತ್ತೆ CM ಆಗಲಿದ್ದಾರೆ : ಸಚಿವ ಸುಧಾಕರ್ ಭವಿಷ್ಯ - Chikkaballapur

ಬಸವಾರಾಜ್ ‌ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿರೋಧ ಪಕ್ಷದ ನಾಯಕರಿಗೆ ಆತಂಕ ಶುರುವಾಗಿದೆ. ಅವರು ಅನುಭವಿ ನಾಯಕ. ಅಧ್ಯಯನ ಶೀಲ ರಾಜಕಾರಣಿ. ಎಲ್ಲಾ ಕರಗತಗಳನ್ನು ಪಡೆದು ನಿಭಾಯಿಸುವ ಚಾಣಾಕ್ಷತನವಿದೆ..

Minister K.Sudhakar
ಸಚಿವ ಸುಧಾಕರ್
author img

By

Published : Aug 15, 2021, 5:13 PM IST

ಚಿಕ್ಕಬಳ್ಳಾಪುರ : ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ವಿಪಕ್ಷದವರಿಗೆ ಭಯ ಶುರುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಇಂದು ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿದ್ದಾರೆ.

2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.. ಸಚಿವ ಸುಧಾಕರ್ ಭವಿಷ್ಯ

ಬಸವಾರಾಜ್ ‌ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿರೋಧ ಪಕ್ಷದ ನಾಯಕರಿಗೆ ಆತಂಕ ಶುರುವಾಗಿದೆ. ಅವರು ಅನುಭವಿ ನಾಯಕ. ಅಧ್ಯಯನ ಶೀಲ ರಾಜಕಾರಣಿ. ಎಲ್ಲಾ ಕರಗತಗಳನ್ನು ಪಡೆದು ನಿಭಾಯಿಸುವ ಚಾಣಾಕ್ಷತನವಿದೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಸವರಾಜ್ ಬೊಮ್ಮಾಯಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕೇಸರಿ ಷರಾಯಿ ಧರಿಸಿ ಗಮನ ಸೆಳೆದ ಸಚಿವ : ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸಚಿವ ಸುಧಾಕರ್ ಕೇಸರಿ ಷರಾಯಿ ಧರಿಸಿ ಧ್ವಜಾರೋಹ ಮಾಡಿದ್ದು, ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಪ್ರತಿ ಬಾರಿಯಂತೆ ನಗರದ ಸರ್ ​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳ ಪರೇಡ್ ಗಮನ ಸೆಳೆದಿತ್ತು.

ಚಿಕ್ಕಬಳ್ಳಾಪುರ : ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆ ವಿಪಕ್ಷದವರಿಗೆ ಭಯ ಶುರುವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಇಂದು ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿದ್ದಾರೆ.

2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.. ಸಚಿವ ಸುಧಾಕರ್ ಭವಿಷ್ಯ

ಬಸವಾರಾಜ್ ‌ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವೀಕರಿಸಿದ ನಂತರ ವಿರೋಧ ಪಕ್ಷದ ನಾಯಕರಿಗೆ ಆತಂಕ ಶುರುವಾಗಿದೆ. ಅವರು ಅನುಭವಿ ನಾಯಕ. ಅಧ್ಯಯನ ಶೀಲ ರಾಜಕಾರಣಿ. ಎಲ್ಲಾ ಕರಗತಗಳನ್ನು ಪಡೆದು ನಿಭಾಯಿಸುವ ಚಾಣಾಕ್ಷತನವಿದೆ.

ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ವೇಗ ಹೆಚ್ಚಾಗಲಿದೆ. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಸವರಾಜ್ ಬೊಮ್ಮಾಯಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಕೇಸರಿ ಷರಾಯಿ ಧರಿಸಿ ಗಮನ ಸೆಳೆದ ಸಚಿವ : ದೇಶದಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸಚಿವ ಸುಧಾಕರ್ ಕೇಸರಿ ಷರಾಯಿ ಧರಿಸಿ ಧ್ವಜಾರೋಹ ಮಾಡಿದ್ದು, ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಪ್ರತಿ ಬಾರಿಯಂತೆ ನಗರದ ಸರ್ ​ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ತುಕಡಿಗಳ ಪರೇಡ್ ಗಮನ ಸೆಳೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.