ETV Bharat / state

ಗೌರಿಬಿದನೂರು, ಚಿಂತಾಮಣಿ ನಗರಸಭೆ ಮೇಲೆ ಎಸಿಬಿ ದಿಢೀರ್​ ದಾಳಿ

author img

By

Published : May 31, 2022, 8:03 PM IST

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಸೇರಿದಂತೆ ಚಿಂತಾಮಣಿ ನಗರಸಭೆಯ ಮೇಲೂ ದಾಳಿ ನಡೆಸಿದರು. ಈ ವೇಳೆ ಅಧಿಕಾರಿಗಳು ನಗರಸಭೆಯ ಕಡತಗಳನ್ನು ಪರಿಶೀಲನೆ ನಡೆಸಿದರು.

ACB attacks on Chintamani and gouribidanur Municipality
ಗೌರಿಬಿದನೂರು, ಚಿಂತಾಮಣಿ ನಗರಸಭೆಯ ಮೇಲೆ ಎಸಿಬಿ ದಿಢೀರ್​ ದಾಳಿ

ಚಿಕ್ಕಬಳ್ಳಾಪುರ: ನಗರಸಭೆಗಳ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜಿಲ್ಲೆಯ ಎರಡು ಕಡೆ ದಿಢೀರ್​​ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ನಗರಸಭೆಯ ಕಡತಗಳನ್ನು ಪರಿಶೀಲನೆ ನಡೆಸಿದರು. ಇತ್ತೀಚೆಗೆ ನಗರಸಭೆ‌ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪದ ದೂರುಗಳು ಸಾಕಷ್ಟು ದಾಖಲಾಗಿದ್ದವು. ಈ ಹಿನ್ನೆಲೆ ಇಂದು ಏಕಾಏಕಿ ಜಿಲ್ಲೆಯ ಗೌರಿಬಿದನೂರು ಸೇರಿದಂತೆ ಚಿಂತಾಮಣಿ ನಗರಸಭೆಯ ಮೇಲೆ ದಾಳಿ ನಡೆಸಲಾಗಿದೆ.

ಗೌರಿಬಿದನೂರು, ಚಿಂತಾಮಣಿ ನಗರಸಭೆಯ ಮೇಲೆ ಎಸಿಬಿ ದಾಳಿ

ಎಸಿಬಿ ಡಿವೈಎಸ್ಪಿ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ನಗರಸಭೆಯ ಕಂಪ್ಯೂಟರ್, ತಾಂತ್ರಿಕ ಶಾಖೆ, ಲೆಕ್ಕಶಾಖೆಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಯಿತು. ಗೌರಿಬಿದನೂರು ನಗರಸಭೆಗೆ ಎಸಿಬಿ ಇನ್ಸ್‌ಪೆಕ್ಟರ್ ರೇಣುಕಾ ಅವರ ನೇತೃತ್ವದಲ್ಲಿ ಒಟ್ಟು 12 ಜನ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ಗೌರಿಬಿದನೂರು ನಗರಸಭೆ ಆವರಣದಲ್ಲಿ ಸಾರ್ವಜನಿಕರ ಬಳಿ ಸಾಕಷ್ಟು ಮೊತ್ತದ ಹಣ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾರಿಗೆ ಕೊಡಲು ತಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಪಪ್ರಚಾರದ ಬಗ್ಗೆ ನನಗೆ ಅಪಾರ ದುಃಖ, ಬೇಸರವಿದೆ : ಪಠ್ಯಪುಸ್ತಕ ವಿವಾದ ಕುರಿತು ಚಕ್ರತೀರ್ಥ ವಿವರಣೆ

ಚಿಕ್ಕಬಳ್ಳಾಪುರ: ನಗರಸಭೆಗಳ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜಿಲ್ಲೆಯ ಎರಡು ಕಡೆ ದಿಢೀರ್​​ ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ನಗರಸಭೆಯ ಕಡತಗಳನ್ನು ಪರಿಶೀಲನೆ ನಡೆಸಿದರು. ಇತ್ತೀಚೆಗೆ ನಗರಸಭೆ‌ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪದ ದೂರುಗಳು ಸಾಕಷ್ಟು ದಾಖಲಾಗಿದ್ದವು. ಈ ಹಿನ್ನೆಲೆ ಇಂದು ಏಕಾಏಕಿ ಜಿಲ್ಲೆಯ ಗೌರಿಬಿದನೂರು ಸೇರಿದಂತೆ ಚಿಂತಾಮಣಿ ನಗರಸಭೆಯ ಮೇಲೆ ದಾಳಿ ನಡೆಸಲಾಗಿದೆ.

ಗೌರಿಬಿದನೂರು, ಚಿಂತಾಮಣಿ ನಗರಸಭೆಯ ಮೇಲೆ ಎಸಿಬಿ ದಾಳಿ

ಎಸಿಬಿ ಡಿವೈಎಸ್ಪಿ ಪ್ರವೀಣ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ನಗರಸಭೆಯ ಕಂಪ್ಯೂಟರ್, ತಾಂತ್ರಿಕ ಶಾಖೆ, ಲೆಕ್ಕಶಾಖೆಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಯಿತು. ಗೌರಿಬಿದನೂರು ನಗರಸಭೆಗೆ ಎಸಿಬಿ ಇನ್ಸ್‌ಪೆಕ್ಟರ್ ರೇಣುಕಾ ಅವರ ನೇತೃತ್ವದಲ್ಲಿ ಒಟ್ಟು 12 ಜನ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ಗೌರಿಬಿದನೂರು ನಗರಸಭೆ ಆವರಣದಲ್ಲಿ ಸಾರ್ವಜನಿಕರ ಬಳಿ ಸಾಕಷ್ಟು ಮೊತ್ತದ ಹಣ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಸಾರ್ವಜನಿಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾರಿಗೆ ಕೊಡಲು ತಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಅಪಪ್ರಚಾರದ ಬಗ್ಗೆ ನನಗೆ ಅಪಾರ ದುಃಖ, ಬೇಸರವಿದೆ : ಪಠ್ಯಪುಸ್ತಕ ವಿವಾದ ಕುರಿತು ಚಕ್ರತೀರ್ಥ ವಿವರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.