ETV Bharat / state

ಬಸ್‌ಗಳ ನಡುವೆ ಸಿಲುಕಿ ಕಾರ್ಮಿಕ ಸಾವು: ನಿರ್ಲಕ್ಷ್ಯದ ಕೆಲಸಕ್ಕೆ ಮೆಕ್ಯಾನಿಕ್ ಅರೆಸ್ಟ್ - ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋ

ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋದಲ್ಲಿ ನಡೆದಿದೆ.

Worker caught inbetween buses: Mechanic Arrest due to negligent work
ಬಸ್ ಗಳ ನಡುವೆ ಸಿಲುಕಿ ಕಾರ್ಮಿಕ ಸಾವು: ನಿರ್ಲಕ್ಷ್ಯದ ಕೆಲಸಕ್ಕೆ ಮೆಕ್ಯಾನಿಕ್ ಅರೆಸ್ಟ್
author img

By

Published : Jan 18, 2020, 10:07 PM IST

ಚಾಮರಾಜನಗರ: ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋದಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಚಿಕ್ಕಮಾರಯ್ಯರವರ ಮಗ ಶಿವಣ್ಣ (35) ಮೃತ ದುರ್ದೈವಿ. ಈತ ಬಸ್‍ನ ಸ್ವಚ್ಚತೆಯಲ್ಲಿ ತೊಡಗಿದ್ದಾಗ ಮೆಕ್ಯಾನಿಕ್ ರಾಜಶೇಖರ ಮೂರ್ತಿ ಎಂಬಾತ ಬ್ರೇಕ್‌ಫೇಲ್ ಆಗಿದ್ದ ಬಸ್ ಚಲಾಯಿಸಿ ಶಿವಣ್ಣ ಸ್ವಚ್ಛ ಮಾಡುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಎರಡು ಬಸ್ ಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಶಿವಣ್ಣನ್ನು ಆಸ್ಪತ್ರೆಗೆ ಸೇರಿಸಿದರಾದರು ಚಿಕಿತ್ಸೆಗೂ ಮುನ್ನವೇ ಆತ ಅಸುನೀಗಿದ್ದಾನೆ. ಇನ್ನು, ಬಸ್ ಚಲಾಯಿಸಿದ ರಾಜಶೇಖರ ಮೂರ್ತಿಯನ್ನು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ಹನೂರು ಶಾಸಕ ಆರ್. ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಖಾಯಂ ನೌಕರರಿಗೆ ಸಿಗಬೇಕಾದ ಸವಲತ್ತನ್ನು ಮೃತ ಶಿವಣ್ಣನಿಗೂ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಚಾಮರಾಜನಗರ: ಸಾರಿಗೆ ಸಂಸ್ಥೆ ಬಸ್ ಸ್ವಚ್ಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಕೆಎಸ್ಆರ್​ಸಿ ಡಿಪೋದಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಚಿಕ್ಕಮಾರಯ್ಯರವರ ಮಗ ಶಿವಣ್ಣ (35) ಮೃತ ದುರ್ದೈವಿ. ಈತ ಬಸ್‍ನ ಸ್ವಚ್ಚತೆಯಲ್ಲಿ ತೊಡಗಿದ್ದಾಗ ಮೆಕ್ಯಾನಿಕ್ ರಾಜಶೇಖರ ಮೂರ್ತಿ ಎಂಬಾತ ಬ್ರೇಕ್‌ಫೇಲ್ ಆಗಿದ್ದ ಬಸ್ ಚಲಾಯಿಸಿ ಶಿವಣ್ಣ ಸ್ವಚ್ಛ ಮಾಡುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಎರಡು ಬಸ್ ಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಶಿವಣ್ಣನ್ನು ಆಸ್ಪತ್ರೆಗೆ ಸೇರಿಸಿದರಾದರು ಚಿಕಿತ್ಸೆಗೂ ಮುನ್ನವೇ ಆತ ಅಸುನೀಗಿದ್ದಾನೆ. ಇನ್ನು, ಬಸ್ ಚಲಾಯಿಸಿದ ರಾಜಶೇಖರ ಮೂರ್ತಿಯನ್ನು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ಹನೂರು ಶಾಸಕ ಆರ್. ನರೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಖಾಯಂ ನೌಕರರಿಗೆ ಸಿಗಬೇಕಾದ ಸವಲತ್ತನ್ನು ಮೃತ ಶಿವಣ್ಣನಿಗೂ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

Intro:ಬಸ್ ಗಳ ನಡುವೆ ಸಿಲುಕಿ ಕಾರ್ಮಿಕ ಸಾವು: ನಿರ್ಲಕ್ಷ್ಯದ ಕೆಲಸದಿಂದಾಗಿ ಮೆಕ್ಯಾನಿಕ್ ಅರೆಸ್ಟ್

ಚಾಮರಾಜನಗರ: ಸಾರಿಗೆ ಸಂಸ್ಥೆ ಬಸ್ ಸ್ವಚಗೊಳಿಸುತ್ತಿದ್ದ ವೇಳೆ ಮತ್ತೊಂದು ಬಸ್ ಡಿಕ್ಕಿಯಾಗಿ ದಿನಗೂಲಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ
ಕೊಳ್ಳೇಗಾಲದ ಕೆಎಸ್ಆರ್ಟಿಸಿ ಡಿಪೋದಲ್ಲಿ ನಡೆದಿದೆ.

Body:ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಚಿಕ್ಕಮಾರಯ್ಯರವರ ಮಗ ಶಿವಣ್ಣ (35) ಮೃತ ದುದೈರ್ವಿ.
ಬಸ್‍ನ ಸ್ವಚ್ಚತೆಯಲ್ಲಿ ತೊಡಗಿದ್ದಾಗ ಮೆಕ್ಯಾನಿಕ್ ರಾಜಶೇಖರ ಮೂರ್ತಿ ಎಂಬಾತ ಬ್ರೇಕ್ ಫೇಲ್ ಬಸ್ ವೊಂದನ್ನು ಚಲಾಯಿಸಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗ್ತಿದೆ.

ಎರಡು ಬಸ್ ಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಶಿವಣ್ಣನ್ನು ಆಸ್ಪತ್ರೆಗೆ ಸೇರಿಸಿತರಾದರು ಚಿಕಿತ್ಸೆಗೂ ಮುನ್ನವೇ ಅಸುನೀಗಿದ್ದಾನೆ. ಇನ್ನು, ಬಸ್ ಚಲಾಯಿಸಿದ ರಾಜಶೇಖರ ಮೂರ್ತಿಯನ್ನು ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Conclusion:ಆಸ್ಪತ್ರೆಗೆ ಹನೂರು ಶಾಸಕ ಆರ್.ನರೇಂದ್ರ ಭೇಟಿಯಿತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಖಾಯಂ ನೌಕರರಿಗೆ ಸಿಗಬೇಕಾದ ಸವಲತ್ತನ್ನು ಮೃತ ಶಿವಣ್ಣನಿಗೂ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.