ಚಾಮರಾಜನಗರ: ಕೊರೊನಾ ಪ್ರಕರಣಗಳು ಇಳಿಕೆಗೊಂಡಿರುವುದರಿಂದ ಕಳೆದ ತಿಂಗಳಿನಿಂದ ಜಾರಿಯಲ್ಲಿರುವ ವಾರಾಂತ್ಯದ ನಿರ್ಬಂಧವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ. ಆರ್ ರವಿ ಆದೇಶ ಹೊರಡಿಸಿದ್ದಾರೆ.

ಅದರಂತೆ, ವೀಕೆಂಡ್ ಕರ್ಫೂನಿಂದ ಜಿಲ್ಲೆಗೆ ವಿನಾಯಿತಿ ಸಿಕ್ಕಿದೆ. ರಾತ್ರಿ 9 ರಿಂದ ಬೆಳಗ್ಗೆ 5 ರವರೆಗಿನ ನೈಟ್ ಕರ್ಫ್ಯೂ ಸೆ. 13ವರೆಗೆ ಮುಂದುವರೆಯಲಿದೆ. ಸಭೆ, ಸಮಾರಂಭಗಳಿಗೆ ಶೇ. 50 ರಷ್ಟು ಅವಕಾಶ, ರಾಜ್ಯಕ್ಕೆ ಪ್ರವೇಶಿಸಬೇಕಾದರೆ 72 ಗಂಟೆ ಒಳಗಿನ ಆರ್ಟಿಪಿಸಿಆರ್ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಹಾಗೂ ರೆಸಾರ್ಟ್, ಹೋಟೆಲ್ ಗಳಲ್ಲಿ ತಂಗಲು ನೆಗೆಟಿವ್ ರಿಪೋರ್ಟ್ ತೋರಿಸಬೇಕಾದದ್ದು ಮುಂದುವರೆಯಲಿದೆ.

ಜಿಲ್ಲಾ ಕೋವಿಡ್ ಉಸ್ತುವಾರಿ ಸಚಿವ ಸೋಮಶೇಖರ್ ಕಳೆದ ಎರಡು ಬಾರಿ ಪ್ರವಾಸ ಕೈಗೊಂಡಾಗಲೂ ವೀಕೆಂಡ್ ಕರ್ಫ್ಯೂ ಸದ್ಯಕ್ಕೆ ಅಗತ್ಯವಿಲ್ಲ, ಸಿಎಂ ಅವರೊಟ್ಟಿಗೆ ಮಾತನಾಡುವುದಾಗಿ ಹೇಳಿದ್ದರು. ವಾರಾಂತ್ಯ ಕರ್ಫ್ಯೂ ರದ್ದಾಗಿರುವುದರಿಂದ ವೀಕೆಂಡ್ ನಲ್ಲಿ ಪ್ರವಾಸಿಗರು ಜಿಲ್ಲೆಯ ಪ್ರಾಕೃತಿಕ ಸೊಬಗು ಕಣ್ತುಂಬಿಕೊಳ್ಳಬಹುದಾಗಿದೆ.
ಓದಿ: ಬೆಂಗಳೂರಿನಲ್ಲಿ ಹಾಡ ಹಗಲೇ ನಡೆಯಿತು ಬರ್ಬರ ಹತ್ಯೆ: ಕೊಲೆ ಕಾರಣ ನಿಗೂಢ!