ETV Bharat / state

ಸಂಬಳ ತಡೆಹಿಡಿದಿದ್ದಕ್ಕೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವಾಟರ್​ಮನ್ - ಸಂಬಳ ತಡೆ

ಕಳೆದ ಒಂದು ವರ್ಷದಿಂದ ವೇತನ ನೀಡದೇ ಪಿಡಿಒ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮ ಪಂಚಾಯತ್​ನ ವಾಟರ್ ಮ್ಯಾನ್​ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Waterman
ವಾಟರ್ ಮ್ಯಾನ್
author img

By

Published : Mar 19, 2020, 6:47 PM IST

ಚಾಮರಾಜನಗರ: ಸಂಬಳ ತಡೆಹಿಡಿದ್ದಕ್ಕೆ ವಾಟರ್​ಮನ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಪಾಳ್ಯ ಗ್ರಾಮ ಪಂಚಾಯತ್​ ವಾಟರ್​ಮನ್​ ಆತ್ಮಹತ್ಯೆ ಯತ್ನ

ಗ್ರಾಮ ಪಂಚಾಯತ್​ನ ನೀರುಗಂಟಿ ಶಿವಮಲ್ಲನಾಯ್ಕ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಒಂದು ವರ್ಷದಿಂದ ವೇತನ ನೀಡದೇ ಪಿಡಿಒ ಜುನೇದ್ ಅಹಮ್ಮದ್ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರವಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಇಂದು ಪಂಚಾಯತ್​ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವೇತನ ನೀಡದಿದ್ದರ ಕುರಿತು ಜಿ.ಪಂ. ಸಿಇಒ ಅವರಿಗೆ ಇಬ್ಬರ ವಿರುದ್ಧ ಶಿವಮಲ್ಲನಾಯ್ಕ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಸದ್ಯ, ಮೈಸೂರಿನ ಆಸ್ಪತ್ರೆಗೆ ಶಿವಮಲ್ಲನಾಯ್ಕರನ್ನು ರವಾನಿಸಲಾಗಿದೆ.

ಚಾಮರಾಜನಗರ: ಸಂಬಳ ತಡೆಹಿಡಿದ್ದಕ್ಕೆ ವಾಟರ್​ಮನ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಪಾಳ್ಯ ಗ್ರಾಮ ಪಂಚಾಯತ್​ ವಾಟರ್​ಮನ್​ ಆತ್ಮಹತ್ಯೆ ಯತ್ನ

ಗ್ರಾಮ ಪಂಚಾಯತ್​ನ ನೀರುಗಂಟಿ ಶಿವಮಲ್ಲನಾಯ್ಕ ಆತ್ಮಹತ್ಯೆಗೆ ಯತ್ನಿಸಿದವರು. ಕಳೆದ ಒಂದು ವರ್ಷದಿಂದ ವೇತನ ನೀಡದೇ ಪಿಡಿಒ ಜುನೇದ್ ಅಹಮ್ಮದ್ ಹಾಗೂ ಗ್ರಾ.ಪಂ. ಉಪಾಧ್ಯಕ್ಷ ರವಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಇಂದು ಪಂಚಾಯತ್​ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವೇತನ ನೀಡದಿದ್ದರ ಕುರಿತು ಜಿ.ಪಂ. ಸಿಇಒ ಅವರಿಗೆ ಇಬ್ಬರ ವಿರುದ್ಧ ಶಿವಮಲ್ಲನಾಯ್ಕ ದೂರು ನೀಡಿದ್ದರು ಎಂದು ತಿಳಿದುಬಂದಿದೆ. ಸದ್ಯ, ಮೈಸೂರಿನ ಆಸ್ಪತ್ರೆಗೆ ಶಿವಮಲ್ಲನಾಯ್ಕರನ್ನು ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.