ETV Bharat / state

ಏ.14 ರ ಬಳಿಕ SSLC ಹೊಸ ಟೈಂ ಟೇಬಲ್: ವಿದ್ಯಾರ್ಥಿಗಳು ಹತಾಶರಾಗಬೇಡಿ ಎಂದ ಶಿಕ್ಷಣ ಸಚಿವರು

author img

By

Published : Apr 1, 2020, 4:36 PM IST

ಏಪ್ರಿಲ್ 14ರ ನಂತರ ಪರಿಸ್ಥಿತಿ ನೋಡಿಕೊಂಡು ಎಸ್ಎಸ್ಎಲ್​​ಸಿ ಪರೀಕ್ಷಾ ದಿನಾಂಕ ನಿಗದಿ ಪಡಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

sslc exams new time table to announce
ಶಿಕ್ಷಣ ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಏಪ್ರಿಲ್ 14 ರ ನಂತರ ಪರಿಸ್ಥಿತಿ ಅವಲೋಕಿಸಿ ಎಸ್​​​​ಎಸ್​​ಎಲ್​​​ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎಸ್ಎಸ್ಎಲ್​​ಸಿ ಮಕ್ಕಳು ಬಹಳಷ್ಟು ತಯಾರಿ ನಡೆಸಿದ್ದರು. ಆದರೆ, ಪರೀಕ್ಷೆ ಮುಂದೂಡಿಕೆಯಿಂದ ಮಕ್ಕಳು ನಿರಾಶರಾಗಬಾರದು, ಹತಾಶರಾಗಲೂ ಬಾರದು, ಕೇವಲ ಎಸ್ಎಸ್ಎಲ್​​ಸಿ ಅಷ್ಟೇ ಪರೀಕ್ಷೆಯಲ್ಲ, ಕೊರೊನಾ ವಿರುದ್ಧದ ಹೋರಾಟವೂ ಒಂದು ಪರೀಕ್ಷೆಯಾಗಿದೆ ಎಂದ್ರು. ಕೊರೊನಾ ವಿರುದ್ಧ ಪರೀಕ್ಷೆಯನ್ನ ಮನೆಯಿಂದ ಹೊರ ಬಾರದೆ ಗೆಲ್ಲಬೇಕು. ಈ ಒಂದು ಅವಕಾಶ ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚು ಪುನಾರಾವರ್ತಿಸಬೇಕಿದೆ. ಓದುವ ಪ್ರಕ್ರಿಯೆ ನಿಲ್ಲಿಸಬಾರದು, ಮಕ್ಕಳ ಆತಂಕ ನಮಗೆ ತಿಳಿದಿದೆ, ಸರ್ಕಾರ ವಿದ್ಯಾರ್ಥಿಗಳ ಜೊತೆಗಿದೆ ಎಂದು ಮಕ್ಕಳಿಗೆ ಧೈರ್ಯ ಹೇಳಿದ್ರು.

ಚಾಮರಾಜನಗರ: ಏಪ್ರಿಲ್ 14 ರ ನಂತರ ಪರಿಸ್ಥಿತಿ ಅವಲೋಕಿಸಿ ಎಸ್​​​​ಎಸ್​​ಎಲ್​​​ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್

ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಎಸ್ಎಸ್ಎಲ್​​ಸಿ ಮಕ್ಕಳು ಬಹಳಷ್ಟು ತಯಾರಿ ನಡೆಸಿದ್ದರು. ಆದರೆ, ಪರೀಕ್ಷೆ ಮುಂದೂಡಿಕೆಯಿಂದ ಮಕ್ಕಳು ನಿರಾಶರಾಗಬಾರದು, ಹತಾಶರಾಗಲೂ ಬಾರದು, ಕೇವಲ ಎಸ್ಎಸ್ಎಲ್​​ಸಿ ಅಷ್ಟೇ ಪರೀಕ್ಷೆಯಲ್ಲ, ಕೊರೊನಾ ವಿರುದ್ಧದ ಹೋರಾಟವೂ ಒಂದು ಪರೀಕ್ಷೆಯಾಗಿದೆ ಎಂದ್ರು. ಕೊರೊನಾ ವಿರುದ್ಧ ಪರೀಕ್ಷೆಯನ್ನ ಮನೆಯಿಂದ ಹೊರ ಬಾರದೆ ಗೆಲ್ಲಬೇಕು. ಈ ಒಂದು ಅವಕಾಶ ಬಳಸಿಕೊಂಡು ವಿದ್ಯಾರ್ಥಿಗಳು ಹೆಚ್ಚು ಪುನಾರಾವರ್ತಿಸಬೇಕಿದೆ. ಓದುವ ಪ್ರಕ್ರಿಯೆ ನಿಲ್ಲಿಸಬಾರದು, ಮಕ್ಕಳ ಆತಂಕ ನಮಗೆ ತಿಳಿದಿದೆ, ಸರ್ಕಾರ ವಿದ್ಯಾರ್ಥಿಗಳ ಜೊತೆಗಿದೆ ಎಂದು ಮಕ್ಕಳಿಗೆ ಧೈರ್ಯ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.