ETV Bharat / state

ವೈಟ್ನರ್, ಸಲ್ಯೂಷನ್‌ನಿಂದ ಕಿಕ್ಕೇರಿಸಿಕೊಳ್ಳುತ್ತಿದ್ದಾರೆ ಮಕ್ಕಳು: ಜಾಣ ಕುರುಡರಾದರೇ ಕೊಳ್ಳೇಗಾಲ ಪೊಲೀಸರು..?!

ಶಿಕ್ಷಣ ಇಲ್ಲದೆ ಭಿಕ್ಷೆ ಬೇಡುತ್ತ ಬೀದಿ ಬೀದಿ ಅಲೆಯುವ ಈ ಮಕ್ಕಳಿಗೆ ಪ್ರಪಂಚದ ಅರಿವೇ ಇಲ್ಲ. ಭಿಕ್ಷೆ ಬೇಡಿ ಬಂದ ಹಣದಿಂದ ಸಲ್ಯೂಷನ್‌ ಹಾಗೂ ವೈಟ್ನರ್​​ ಕೊಂಡು ನಶೆಯಲ್ಲಿ ಮುಳುಗುತ್ತಿದ್ದಾರೆ.‌ ಕದ್ದು‌ಮುಚ್ಚಿ ಗಾಂಜಾ ಹೊಗೆ ಎಳೆಯುತ್ತಿದ್ದುದನ್ನು ಕಾಣುತ್ತಿದ್ದ ಜನರಿಗೆ ಈಗ ಹಗಲಿನಲ್ಲೇ ದುಶ್ಚಟಗಳ ದರ್ಶನವಾಗುತ್ತಿದೆ.

author img

By

Published : Apr 19, 2021, 10:36 PM IST

Updated : Apr 19, 2021, 10:49 PM IST

solution-and-whitener-drug-addiction-rise-in-kollegal
ವೈಟ್ನರ್ ಸಲ್ಯೂಷನ್ ಡ್ರಗ್​​

ಕೊಳ್ಳೇಗಾಲ: ಅಗ್ಗದ ಬೆಲೆಗೆ ಸಿಗುವ ವೈಟ್ನರ್, ಸಲ್ಯೂಷನ್‌‌ ಮೂಲಕ ಅಲೆಮಾರಿ ಜನಾಂಗದ ಮಕ್ಕಳು ಕಿಕ್ಕೇರಿಸಿಕೊಂಡು ನಶೆಯಲ್ಲಿ ನಡೆದಾಡುವ ದೃಶ್ಯ ಪಟ್ಟಣದಲ್ಲಿ ಸಾಮಾನ್ಯವಾಗಿದ್ದು, ಜನರ ಕಣ್ಣಿಗೆ ಕಾಣುವ ಈ ದೃಶ್ಯ ಪೊಲೀಸರ ಕಣ್ಣಿಗೆ ಬಿದ್ದಿಲ್ಲ ಎಂಬುದು ಆಶ್ಚರ್ಯ.

ಶಿಕ್ಷಣವಿಲ್ಲದೇ ಭಿಕ್ಷೆ ಬೇಡುತ್ತ ಬೀದಿ ಬೀದಿ ಅಲೆಯುವ ಈ ಮಕ್ಕಳಿಗೆ ಪ್ರಪಂಚದ ಅರಿವೆ ಇಲ್ಲ. ಭಿಕ್ಷೆ ಬೇಡಿ ಬಂದ ಹಣದಿಂದ ಸೆಲ್ಯೂಷನ್‌ ಹಾಗೂ ವೈಟ್ನರ್​​ ಕೊಂಡು ನಶೆಯಲ್ಲಿ ಮುಳುಗುತ್ತಿದ್ದಾರೆ.‌ ಕದ್ದು‌ಮುಚ್ಚಿ ಗಾಂಜಾ ಹೊಗೆ ಎಳೆಯುತ್ತಿದ್ದನ್ನು ಕಾಣುತ್ತಿದ್ದ ಜನರಿಗೆ ಈಗ ಹಗಲಿನಲ್ಲೇ ದುಶ್ಚಟಗಳ ದರ್ಶನವಾಗುತ್ತಿದೆ.

ಅಲೆಮಾರಿ ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಾಫ್ ಸಿರಪ್, ವೈಟ್ನರ್, ಸಲ್ಯೂಷನ್, ಥಿನ್ನರ್​ಗಳು ಕೊಡಬಾರದೆಂಬ ಮೌಖಿಕ ಆದೇಶ ಇದ್ದರೂ ಇವರ ಕೈಗೆ ಅವ್ಯಾಹತವಾಗಿ ಸಿಗುತ್ತಿವೆ. ಇಷ್ಟು ನಿರ್ಭಯವಾಗಿ ನಡೆಯುತ್ತಿರುವ ಇಂತಹ ದುಷ್ಕೃತ್ಯ ಪೊಲೀಸರ ಕಣ್ಣಿಗೆ ಬಿದ್ದಿಲ್ಲದಿರುವುದು ವಿಪರ್ಯಾಸವೇ ಸರಿ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಶಿವರಾಜ್ ಆರ್.ಮುಧೋಳ್, ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಸಾರ್ವಜನಿಕರು ಇಂತಹ ಘಟನೆ ನೋಡಿದರೆ ನಮಗೆ ತಿಳಿಸಬಹುದು ಎಂದಿದ್ದಾರೆ.

ವೈಟ್ನರ್, ಪೇಂಟ್ ಥಿನ್ನರ್, ಸೆಲ್ಯೂಷನ್‍ನಲ್ಲಿ ಕೆಮಿಕಲ್‍ಗಳನ್ನು ಬಳಸುತ್ತಾರೆ. ಕೆಲವರು ಅಂತಹ ವಸ್ತುಗಳನ್ನು ಪಡೆದು ಮತ್ತೇರಿಸಿಕೊಳ್ಳುವುದುರಿಂದ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ತಿಳಿಸಿದ್ದಾರೆ.

ಕೊಳ್ಳೇಗಾಲ: ಅಗ್ಗದ ಬೆಲೆಗೆ ಸಿಗುವ ವೈಟ್ನರ್, ಸಲ್ಯೂಷನ್‌‌ ಮೂಲಕ ಅಲೆಮಾರಿ ಜನಾಂಗದ ಮಕ್ಕಳು ಕಿಕ್ಕೇರಿಸಿಕೊಂಡು ನಶೆಯಲ್ಲಿ ನಡೆದಾಡುವ ದೃಶ್ಯ ಪಟ್ಟಣದಲ್ಲಿ ಸಾಮಾನ್ಯವಾಗಿದ್ದು, ಜನರ ಕಣ್ಣಿಗೆ ಕಾಣುವ ಈ ದೃಶ್ಯ ಪೊಲೀಸರ ಕಣ್ಣಿಗೆ ಬಿದ್ದಿಲ್ಲ ಎಂಬುದು ಆಶ್ಚರ್ಯ.

ಶಿಕ್ಷಣವಿಲ್ಲದೇ ಭಿಕ್ಷೆ ಬೇಡುತ್ತ ಬೀದಿ ಬೀದಿ ಅಲೆಯುವ ಈ ಮಕ್ಕಳಿಗೆ ಪ್ರಪಂಚದ ಅರಿವೆ ಇಲ್ಲ. ಭಿಕ್ಷೆ ಬೇಡಿ ಬಂದ ಹಣದಿಂದ ಸೆಲ್ಯೂಷನ್‌ ಹಾಗೂ ವೈಟ್ನರ್​​ ಕೊಂಡು ನಶೆಯಲ್ಲಿ ಮುಳುಗುತ್ತಿದ್ದಾರೆ.‌ ಕದ್ದು‌ಮುಚ್ಚಿ ಗಾಂಜಾ ಹೊಗೆ ಎಳೆಯುತ್ತಿದ್ದನ್ನು ಕಾಣುತ್ತಿದ್ದ ಜನರಿಗೆ ಈಗ ಹಗಲಿನಲ್ಲೇ ದುಶ್ಚಟಗಳ ದರ್ಶನವಾಗುತ್ತಿದೆ.

ಅಲೆಮಾರಿ ಮಕ್ಕಳಿಗೆ, ಶಾಲಾ ವಿದ್ಯಾರ್ಥಿಗಳಿಗೆ ಕಾಫ್ ಸಿರಪ್, ವೈಟ್ನರ್, ಸಲ್ಯೂಷನ್, ಥಿನ್ನರ್​ಗಳು ಕೊಡಬಾರದೆಂಬ ಮೌಖಿಕ ಆದೇಶ ಇದ್ದರೂ ಇವರ ಕೈಗೆ ಅವ್ಯಾಹತವಾಗಿ ಸಿಗುತ್ತಿವೆ. ಇಷ್ಟು ನಿರ್ಭಯವಾಗಿ ನಡೆಯುತ್ತಿರುವ ಇಂತಹ ದುಷ್ಕೃತ್ಯ ಪೊಲೀಸರ ಕಣ್ಣಿಗೆ ಬಿದ್ದಿಲ್ಲದಿರುವುದು ವಿಪರ್ಯಾಸವೇ ಸರಿ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಪಿಐ ಶಿವರಾಜ್ ಆರ್.ಮುಧೋಳ್, ಈ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಸಾರ್ವಜನಿಕರು ಇಂತಹ ಘಟನೆ ನೋಡಿದರೆ ನಮಗೆ ತಿಳಿಸಬಹುದು ಎಂದಿದ್ದಾರೆ.

ವೈಟ್ನರ್, ಪೇಂಟ್ ಥಿನ್ನರ್, ಸೆಲ್ಯೂಷನ್‍ನಲ್ಲಿ ಕೆಮಿಕಲ್‍ಗಳನ್ನು ಬಳಸುತ್ತಾರೆ. ಕೆಲವರು ಅಂತಹ ವಸ್ತುಗಳನ್ನು ಪಡೆದು ಮತ್ತೇರಿಸಿಕೊಳ್ಳುವುದುರಿಂದ ಆರೋಗ್ಯಕ್ಕೆ ಬಹಳ ಅಪಾಯಕಾರಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ತಿಳಿಸಿದ್ದಾರೆ.

Last Updated : Apr 19, 2021, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.