ETV Bharat / state

ಆರ್​​ಸಿಬಿ ಗೆಲುವಿಗಾಗಿ ಅಭಿಮಾನಿಯಿಂದ ಮಲೆ ಮಾದಪ್ಪನಿಗೆ ಪೂಜೆ, ಈಡುಗಾಯಿ ; ವಿಡಿಯೋ ವೈರಲ್​​

author img

By

Published : Oct 3, 2021, 9:07 PM IST

Updated : Oct 3, 2021, 9:46 PM IST

ಕಾಕತಾಳೀಯವೆಂಬಂತೆ ರೋಚಕ ಹಣಾಹಣಿಯಲ್ಲಿ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದ್ದರಿಂದ ಈ ಅಭಿಮಾನಿ ಪೂಜೆ ಮಾಡಿದ ವಿಡಿಯೋ ವೈರಲ್​​ ಆಗುತ್ತಿದೆ. ಈ ಹಿಂದೆ ಚಿನ್ನದ ರಥಕ್ಕೆ ಹಣ್ಣು, ಜವನ‌ ಎಸೆಯುವ ಮುನ್ನ 'ಈ ಸಲ ಕಪ್ ನಮ್ದೆ' ಎಂದು ಬರೆದು ಎಸೆದಿದ್ದ ವಿಡಿಯೋ ಭಾರಿ ವೈರಲ್​​ ಆಗಿತ್ತು..

Chamarajanagar
ಆರ್​​ಸಿಬಿ ಗೆಲುವಿಗಾಗಿ ಅಭಿಮಾನಿಯಿಂದ ಮಲೆ ಮಾದಪ್ಪನಿಗೆ ಪೂಜೆ, ಈಡುಗಾಯಿ

ಚಾಮರಾಜನಗರ : ಇಂದು ಐಪಿಎಲ್​​ನಲ್ಲಿ ಪಂಜಾಬ್​ ವಿರುದ್ಧ ಆರ್​​ಸಿಬಿ ರೋಚಕ ಜಯ ಸಾಧಿಸುತ್ತಿದ್ದಂತೆ ಅಭಿಯಾನಿಯೊಬ್ಬ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​​ ಆಗಿದೆ.

ಆರ್​​ಸಿಬಿ ಗೆಲುವಿಗಾಗಿ ಅಭಿಮಾನಿಯಿಂದ ಮಲೆ ಮಾದಪ್ಪನಿಗೆ ಪೂಜೆ, ಈಡುಗಾಯಿ..

ಹನೂರಿನ ಎರಡನೇ ವಾರ್ಡ್ ನಿವಾಸಿ ಮಂಟೇಸ್ವಾಮಿ ಎಂಬ ಆರ್​​ಸಿಬಿ ಅಭಿಮಾನಿ ಇಂದು ಮಧ್ಯಾಹ್ನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ಪೂರದಲ್ಲಿ ಆರ್​​ಸಿಬಿ ಎಂದು ಬರೆದು, ತೆಂಗಿನಕಾಯಿ ಮೇಲೆ 'ಈ ಸಲ ಕಪ್ ನಮ್ದೆ' ಎಂದು ಬರೆದು ಈಡುಗಾಯಿ ಒಡೆದು ಗೆಲುವಿಗಾಗಿ ಪ್ರಾರ್ಥಿಸಿದ್ದರು.

ಕಾಕತಾಳೀಯವೆಂಬಂತೆ ರೋಚಕ ಹಣಾಹಣಿಯಲ್ಲಿ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದ್ದರಿಂದ ಈ ಅಭಿಮಾನಿ ಪೂಜೆ ಮಾಡಿದ ವಿಡಿಯೋ ವೈರಲ್​​ ಆಗುತ್ತಿದೆ. ಈ ಹಿಂದೆ ಚಿನ್ನದ ರಥಕ್ಕೆ ಹಣ್ಣು, ಜವನ‌ ಎಸೆಯುವ ಮುನ್ನ 'ಈ ಸಲ ಕಪ್ ನಮ್ದೆ' ಎಂದು ಬರೆದು ಎಸೆದಿದ್ದ ವಿಡಿಯೋ ಭಾರಿ ವೈರಲ್​​ ಆಗಿತ್ತು.

ಚಾಮರಾಜನಗರ : ಇಂದು ಐಪಿಎಲ್​​ನಲ್ಲಿ ಪಂಜಾಬ್​ ವಿರುದ್ಧ ಆರ್​​ಸಿಬಿ ರೋಚಕ ಜಯ ಸಾಧಿಸುತ್ತಿದ್ದಂತೆ ಅಭಿಯಾನಿಯೊಬ್ಬ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​​ ಆಗಿದೆ.

ಆರ್​​ಸಿಬಿ ಗೆಲುವಿಗಾಗಿ ಅಭಿಮಾನಿಯಿಂದ ಮಲೆ ಮಾದಪ್ಪನಿಗೆ ಪೂಜೆ, ಈಡುಗಾಯಿ..

ಹನೂರಿನ ಎರಡನೇ ವಾರ್ಡ್ ನಿವಾಸಿ ಮಂಟೇಸ್ವಾಮಿ ಎಂಬ ಆರ್​​ಸಿಬಿ ಅಭಿಮಾನಿ ಇಂದು ಮಧ್ಯಾಹ್ನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕರ್ಪೂರದಲ್ಲಿ ಆರ್​​ಸಿಬಿ ಎಂದು ಬರೆದು, ತೆಂಗಿನಕಾಯಿ ಮೇಲೆ 'ಈ ಸಲ ಕಪ್ ನಮ್ದೆ' ಎಂದು ಬರೆದು ಈಡುಗಾಯಿ ಒಡೆದು ಗೆಲುವಿಗಾಗಿ ಪ್ರಾರ್ಥಿಸಿದ್ದರು.

ಕಾಕತಾಳೀಯವೆಂಬಂತೆ ರೋಚಕ ಹಣಾಹಣಿಯಲ್ಲಿ ಬೆಂಗಳೂರು ತಂಡ ಗೆಲುವಿನ ನಗೆ ಬೀರಿದ್ದರಿಂದ ಈ ಅಭಿಮಾನಿ ಪೂಜೆ ಮಾಡಿದ ವಿಡಿಯೋ ವೈರಲ್​​ ಆಗುತ್ತಿದೆ. ಈ ಹಿಂದೆ ಚಿನ್ನದ ರಥಕ್ಕೆ ಹಣ್ಣು, ಜವನ‌ ಎಸೆಯುವ ಮುನ್ನ 'ಈ ಸಲ ಕಪ್ ನಮ್ದೆ' ಎಂದು ಬರೆದು ಎಸೆದಿದ್ದ ವಿಡಿಯೋ ಭಾರಿ ವೈರಲ್​​ ಆಗಿತ್ತು.

Last Updated : Oct 3, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.