ETV Bharat / state

ಟಿಪ್ಪರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ: ಮೈಸೂರು ಪ್ರವಾಸಕ್ಕೆ ಬಂದ ಓರ್ವ ಸಾವು, ನಾಲ್ವರು ಗಂಭೀರ

author img

By

Published : Oct 21, 2021, 2:06 PM IST

ಟಿಪ್ಪರ್​​ಗೆ ಹಿಂಬದಿಯಿಂದ ಪ್ರವಾಸಿಗರ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನಲ್ಲಿ ಸಂಭವಿಸಿದೆ.

one-killed-and-four-injured-in-gundlupete-road-accident
ಟಿಪ್ಪರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ: ಪ್ರವಾಸಕ್ಕೆ ಬಂದವರಲ್ಲಿ ಓರ್ವ ಸಾವು, ನಾಲ್ವರು ಗಂಭೀರ

ಚಾಮರಾಜನಗರ: ಮರಳು ತುಂಬಿದ್ದ ಟಿಪ್ಪರ್​​ಗೆ ಹಿಂಬದಿಯಿಂದ ಪ್ರವಾಸಿಗರ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಸಂಭವಿಸಿದೆ.

ಕೇರಳ ಮೂಲದ ಸುಜಿತ್ ಕೃಷ್ಣನ್ (30) ಮೃತಪಟ್ಟ ವ್ಯಕ್ತಿ. ವಿಜೇಶ್, ಜೀತು, ಸುಲೇಮಾನ್ ಹಾಗೂ ಜೋವನ್ ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಇವರೆಲ್ಲರೂ ಕೇರಳದಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

one-killed-and-four-injured-in-gundlupete-road-accident
ಅಪಘಾತಕ್ಕೀಡಾದ ಕಾರು

ಟೀ ಕುಡಿದು ಬಂದ ಟಿಪ್ಪರ್ ಚಾಲಕ ಏಕಾಏಕಿ ಬಲಗಡೆಗೆ ವಾಹನವನ್ನು ತಿರುಗಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಟಿಪ್ಪರ್ ಜೊತೆ ಚಾಲಕ ಪರಾರಿಯಾಗಿದ್ದಾನೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Gauri Lankesh Murder Case; ಆರೋಪಿ ವಿರುದ್ಧದ ಆರೋಪ ಕೈಬಿಡುವ ಹೈಕೋರ್ಟ್‌ ಆದೇಶ ಸುಪ್ರೀಂನಿಂದ ರದ್ದು ​

ಚಾಮರಾಜನಗರ: ಮರಳು ತುಂಬಿದ್ದ ಟಿಪ್ಪರ್​​ಗೆ ಹಿಂಬದಿಯಿಂದ ಪ್ರವಾಸಿಗರ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಸಂಭವಿಸಿದೆ.

ಕೇರಳ ಮೂಲದ ಸುಜಿತ್ ಕೃಷ್ಣನ್ (30) ಮೃತಪಟ್ಟ ವ್ಯಕ್ತಿ. ವಿಜೇಶ್, ಜೀತು, ಸುಲೇಮಾನ್ ಹಾಗೂ ಜೋವನ್ ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿದೆ. ಇವರೆಲ್ಲರೂ ಕೇರಳದಿಂದ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

one-killed-and-four-injured-in-gundlupete-road-accident
ಅಪಘಾತಕ್ಕೀಡಾದ ಕಾರು

ಟೀ ಕುಡಿದು ಬಂದ ಟಿಪ್ಪರ್ ಚಾಲಕ ಏಕಾಏಕಿ ಬಲಗಡೆಗೆ ವಾಹನವನ್ನು ತಿರುಗಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಟಿಪ್ಪರ್ ಜೊತೆ ಚಾಲಕ ಪರಾರಿಯಾಗಿದ್ದಾನೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Gauri Lankesh Murder Case; ಆರೋಪಿ ವಿರುದ್ಧದ ಆರೋಪ ಕೈಬಿಡುವ ಹೈಕೋರ್ಟ್‌ ಆದೇಶ ಸುಪ್ರೀಂನಿಂದ ರದ್ದು ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.