ETV Bharat / state

ದಾಖಲೆ ಇಲ್ಲದೇ ಹಣ ಸಾಗಣೆ: ಕೇರಳ‌ದ ವ್ಯಾಪಾರಿ ಬಂಧನ - ₹ 27 ಲಕ್ಷ , ಕಾರು ವಶ - ಚಾಮರಾಜನಗರದಲ್ಲಿ ಕೇರಳದ ವ್ಯಕ್ತಿ ಬಂಧನ

ದಾಖಲೆ ಇಲ್ಲದೇ 27 ಲಕ್ಷ ರೂ. ಹಣ ಸಾಗಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಚಾಮರಾಜನಗರದಲ್ಲಿ ಬಂಧಿಸಲಾಗಿದೆ.

one-arrested-with-27-lakh-money-without-record
ದಾಖಲೆ ಇಲ್ಲದೇ ಹಣ ಸಾಗಾಟ: ಕೇರಳ‌ದ ವ್ಯಾಪಾರಿ ಬಂಧನ - ₹ 27 ಲಕ್ಷ , ಕಾರು ವಶ
author img

By

Published : Sep 30, 2021, 12:15 PM IST

ಚಾಮರಾಜನಗರ: ಯಾವುದೇ ದಾಖಲೆಗಳಿಲ್ಲದೇ ಲಕ್ಷಾಂತರ ರೂ. ಹಣ ಸಾಗಿಸುತ್ತಿದ್ದ ಕೇರಳ‌ ಮೂಲದ ವ್ಯಾಪಾರಿಯನ್ನು ಚಾಮರಾಜನಗರ ತಾಲೂಕಿನ‌ ಕೂಡಲೂರು ಗ್ರಾಮದಲ್ಲಿ ಬಂಧಿಸಲಾಗಿದೆ.

ಕೇರಳದ ಸುಲ್ತಾನ್ ಬತ್ತೇರಿಯ ಸತೀಶ್ ಬಂಧಿತ ವ್ಯಾಪಾರಿ.‌‌ ಕೂಡ್ಲೂರು ಗ್ರಾಮದ ಬಳಿ ಕಾರಿನಲ್ಲಿ ಬರುತ್ತಿದ್ದ ಈತನನ್ನು ಪರಿಶೀಲಿಸಿದ ವೇಳೆ 27.73 ಲಕ್ಷ ರೂ.‌ ಪತ್ತೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕ್ಕೆ ಯಾವುದೇ ದಾಖಲೆ, ಪುರಾವೆ ಒದಗಿಸದಿದ್ದರಿಂದ ಸತೀಶ್​ನನ್ನು ಬಂಧಿಸಲಾಗಿದೆ.

ತಾನೋರ್ವ ಅಡಕೆ ವ್ಯಾಪಾರಿಯಾಗಿದ್ದು ವಹಿವಾಟು ನಡೆಸಲು ಬಂದಿರುವುದಾಗಿ ಬಂಧಿತನು ಹೇಳುತ್ತಿದ್ದು, ಸದ್ಯ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತನಿಂದ ಹಣದೊಟ್ಟಿಗೆ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬದುಕಿತು ಬಡ ಜೀವ.. ಚಿರತೆ ದಾಳಿಯಿಂದ ಪಾರಾದ ಮಹಿಳೆ: ವಿಡಿಯೋ

ಚಾಮರಾಜನಗರ: ಯಾವುದೇ ದಾಖಲೆಗಳಿಲ್ಲದೇ ಲಕ್ಷಾಂತರ ರೂ. ಹಣ ಸಾಗಿಸುತ್ತಿದ್ದ ಕೇರಳ‌ ಮೂಲದ ವ್ಯಾಪಾರಿಯನ್ನು ಚಾಮರಾಜನಗರ ತಾಲೂಕಿನ‌ ಕೂಡಲೂರು ಗ್ರಾಮದಲ್ಲಿ ಬಂಧಿಸಲಾಗಿದೆ.

ಕೇರಳದ ಸುಲ್ತಾನ್ ಬತ್ತೇರಿಯ ಸತೀಶ್ ಬಂಧಿತ ವ್ಯಾಪಾರಿ.‌‌ ಕೂಡ್ಲೂರು ಗ್ರಾಮದ ಬಳಿ ಕಾರಿನಲ್ಲಿ ಬರುತ್ತಿದ್ದ ಈತನನ್ನು ಪರಿಶೀಲಿಸಿದ ವೇಳೆ 27.73 ಲಕ್ಷ ರೂ.‌ ಪತ್ತೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ಹಣಕ್ಕೆ ಯಾವುದೇ ದಾಖಲೆ, ಪುರಾವೆ ಒದಗಿಸದಿದ್ದರಿಂದ ಸತೀಶ್​ನನ್ನು ಬಂಧಿಸಲಾಗಿದೆ.

ತಾನೋರ್ವ ಅಡಕೆ ವ್ಯಾಪಾರಿಯಾಗಿದ್ದು ವಹಿವಾಟು ನಡೆಸಲು ಬಂದಿರುವುದಾಗಿ ಬಂಧಿತನು ಹೇಳುತ್ತಿದ್ದು, ಸದ್ಯ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತನಿಂದ ಹಣದೊಟ್ಟಿಗೆ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬದುಕಿತು ಬಡ ಜೀವ.. ಚಿರತೆ ದಾಳಿಯಿಂದ ಪಾರಾದ ಮಹಿಳೆ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.