ETV Bharat / state

ನಾಯಕತ್ವ ಬದಲಿಲ್ವಂತೆ, ಬದಲಾಗಬೇಕೆಂದು ಯಾರು ಹೇಳ್ತಿದ್ದಾರೆಂದು ಕೇಳ್ತಾರೆ ಕಟೀಲ್..

author img

By

Published : Jul 14, 2021, 7:10 PM IST

ಪಕ್ಷದ ಕಾರ್ಯಕರ್ತರು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಡೆಸಿರುವುದು ಇತರರಿಗೆ ಪ್ರೇರಣೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರೇ ಅತಿ ಹೆಚ್ಚು ಅಂತ್ಯಸಂಸ್ಕಾರ ನಡೆಸಿದ್ದು, ಈ ಜಿಲ್ಲೆಯನ್ನು ಕಂಡು ಬೇರೆ ಜಿಲ್ಲೆಯವರು ಪ್ರೇರಣೆ ಪಡೆದರು. ಕಾರ್ಯಕರ್ತರ ಈ ಸೇವೆ ಶ್ಲಾಘನೀಯ..

Naleen Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಚಾಮರಾಜನಗರ : ನಾಯಕತ್ವ ಬದಲಾವಣೆಯಿಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಯಾರು ಹೇಳುತ್ತಿದ್ದಾರೆ. ಎಲ್ಲೂ ನಾಯಕತ್ವ ಬದಲಾಣೆ ಕೂಗಿಲ್ಲ ಎಂದು ಉತ್ತರಿಸಿದರು.

ನಾಯಕತ್ವ ಬದಲಾವಣೆ ವಿಚಾರ- ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಮನೆಗಳಿಗೆ ಸಿಎಂ, ಸಚಿವರು, ಭೇಟಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್​​, ಆಕ್ಸಿಜನ್ ದುರಂತದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ. ಕೋವಿಡ್​​ನಿಂದ ಮೃತಪಟ್ಟವರ ಮನೆಗಳಿಗೆ ಸಚಿವರು, ಕಾರ್ಯಕರ್ತರು ತೆರಳಿ ಸಾಂತ್ವನ ಹೇಳಿದ್ದಾರೆ ಎಂದರು.

ಪಕ್ಷದ ಕಾರ್ಯಕರ್ತರು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಡೆಸಿರುವುದು ಇತರರಿಗೆ ಪ್ರೇರಣೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರೇ ಅತಿ ಹೆಚ್ಚು ಅಂತ್ಯಸಂಸ್ಕಾರ ನಡೆಸಿದ್ದು, ಈ ಜಿಲ್ಲೆಯನ್ನು ಕಂಡು ಬೇರೆ ಜಿಲ್ಲೆಯವರು ಪ್ರೇರಣೆ ಪಡೆದರು. ಕಾರ್ಯಕರ್ತರ ಈ ಸೇವೆ ಶ್ಲಾಘನೀಯ ಎಂದರು.

ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಜಟಾಪಟಿ: ಸಮಸ್ಯೆಯನ್ನು ವ್ಯಕ್ತಿಗತ ಮಾಡುವುದು ಸರಿಯಲ್ಲ- ನಳಿನ್​ ಕುಮಾರ್​ ಕಟೀಲ್​

ಚಾಮರಾಜನಗರ : ನಾಯಕತ್ವ ಬದಲಾವಣೆಯಿಲ್ಲ. ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಬಗ್ಗೆ ಯಾರು ಹೇಳುತ್ತಿದ್ದಾರೆ. ಎಲ್ಲೂ ನಾಯಕತ್ವ ಬದಲಾಣೆ ಕೂಗಿಲ್ಲ ಎಂದು ಉತ್ತರಿಸಿದರು.

ನಾಯಕತ್ವ ಬದಲಾವಣೆ ವಿಚಾರ- ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ

ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಮನೆಗಳಿಗೆ ಸಿಎಂ, ಸಚಿವರು, ಭೇಟಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್​​, ಆಕ್ಸಿಜನ್ ದುರಂತದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ. ಕೋವಿಡ್​​ನಿಂದ ಮೃತಪಟ್ಟವರ ಮನೆಗಳಿಗೆ ಸಚಿವರು, ಕಾರ್ಯಕರ್ತರು ತೆರಳಿ ಸಾಂತ್ವನ ಹೇಳಿದ್ದಾರೆ ಎಂದರು.

ಪಕ್ಷದ ಕಾರ್ಯಕರ್ತರು ಕೋವಿಡ್ ಮೃತರ ಅಂತ್ಯ ಸಂಸ್ಕಾರ ನಡೆಸಿರುವುದು ಇತರರಿಗೆ ಪ್ರೇರಣೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕಾರ್ಯಕರ್ತರೇ ಅತಿ ಹೆಚ್ಚು ಅಂತ್ಯಸಂಸ್ಕಾರ ನಡೆಸಿದ್ದು, ಈ ಜಿಲ್ಲೆಯನ್ನು ಕಂಡು ಬೇರೆ ಜಿಲ್ಲೆಯವರು ಪ್ರೇರಣೆ ಪಡೆದರು. ಕಾರ್ಯಕರ್ತರ ಈ ಸೇವೆ ಶ್ಲಾಘನೀಯ ಎಂದರು.

ಇದನ್ನೂ ಓದಿ: ಕೆಆರ್​ಎಸ್​ ಡ್ಯಾಂ ಜಟಾಪಟಿ: ಸಮಸ್ಯೆಯನ್ನು ವ್ಯಕ್ತಿಗತ ಮಾಡುವುದು ಸರಿಯಲ್ಲ- ನಳಿನ್​ ಕುಮಾರ್​ ಕಟೀಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.