ಚಾಮರಾಜನಗರ: ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಸ್ಗಳಿಲ್ಲದೆ, ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. ನಗರದ ಖಾಲಿ ಖಾಲಿ ನಿಲ್ದಾಣಗಳು, ರಸ್ತೆಗಳು ಕೊರೊನಾ ಲಾಕ್ ಡೌನ್ ಸಂದರ್ಭವನ್ನು ನೆನಪಿಸಿದವು.

ಗುಂಡ್ಲುಪೇಟೆ ನಿಲ್ದಾಣ, ಕೊಳ್ಳೇಗಾಲ, ಚಾಮರಾಜನಗರದ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಇತ್ತ ಬಸ್ಗಳೂ ಇಲ್ಲದೇ ಖಾಲಿ-ಖಾಲಿ ಹೊಡೆಯತ್ತಿವೆ. ಇದಕ್ಕೆ ಹೊರತಾಗದೆ ಖಾಸಗಿ ಬಸ್ ನಿಲ್ದಾಣವೂ ಖಾಲಿ ಖಾಲಿ ಹೊಡೆಯುತ್ತಿದ್ದು, ಜನರು ತಮ್ಮೆಲ್ಲಾ ಪ್ರಯಾಣವನ್ನು ಮೊಟಕುಗೊಳಿಸಿದ್ದಾರೆ. ಮೈಸೂರಿಗೆ ತೆರಳುವವರು ಕಾರು, ಖಾಸಗಿ ವಾಹನಗಳನ್ನು ಅವಲಂಬಿಸಿದ್ದು, ಗ್ರಾಮೀಣ ಜನರ ಓಡಾಟ ತೀರಾ ಅತ್ಯಲ್ಪವಾಗಿದೆ.
ಕಾರ್ಯ ನಿರ್ವಹಿಸಲು ಯಾವೊಬ್ಬ ನೌಕರನೂ ಬಂದಿಲ್ಲ. ನಾವು ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಕೆಲವರಂತೂ ಮೂರು ದಿನಗಳಿಂದಲೂ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಇಲಾಖೆಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ಇದರ ಪರಿಣಾಮ ನಮಗೇ ಬಾಧಿಸಲಿದೆ ಎಂದು ಹೆಸರು ಹೇಳಲಿಚ್ಛಿಸದ ನಗರದ ಅಧಿಕಾರಿಯೊಬ್ಬರು ತಿಳಿಸಿದರು.