ETV Bharat / state

ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ನಾಚಿಕೆಯಾಗಬೇಕು: ಎ.ಆರ್.ಕೃಷ್ಣ ಮೂರ್ತಿ - ಚಾಮರಾಜನಗರ ಆಕ್ಸಿಜನ್ ದುರಂತ

ಮೇ. 2ರಂದು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟರ ಕುಟುಂಬಗಳಿಗೆ 2 ಲಕ್ಷ ನೀಡುತ್ತಿರುವುದಕ್ಕೆ ಸರ್ಕಾರಕ್ಕೆ‌ ನಾಚಿಕೆ ಆಗಬೇಕು. ಬೇರೆ-ಬೇರೆ ರಾಜ್ಯಗಳಲ್ಲಿ‌ ಕನಿಷ್ಠ ‌10 ಲಕ್ಷ ರೂ ಪರಿಹಾರ‌ ನೀಡಲಾಗುತ್ತಿದೆ. ಸರ್ಕಾರ ಪರಿಹಾರ‌ ಹಣವನ್ನು‌‌ ಹೆಚ್ಚಿಸಬೇಕೆಂದು ಮಾಜಿ ಶಾಸಕ ಎ.ಆರ್‌.ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ.

kollegala
ಮಾಜಿ ಶಾಸಕ ಎ.ಆರ್‌.ಕೃಷ್ಣ ಮೂರ್ತಿ
author img

By

Published : May 25, 2021, 8:27 AM IST

ಕೊಳ್ಳೇಗಾಲ: ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ನೀಡೋಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಹಣ ಯಾವುದಕ್ಕೂ ಸಾಲುವುದಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಕೊಡಬೇಕು ಆಗ್ರಹಿಸಿದ್ದರು. ಅಂದರಂತೆ ಪರಿಹಾರದ ಹಣವನ್ನು ಹೆಚ್ಚಿಸಬೇಕು ಎಂದು ಮಾಜಿ ಶಾಸಕ ಎ.ಆರ್‌.ಕೃಷ್ಣ ಮೂರ್ತಿ ಒತ್ತಾಯಿಸಿದ್ದಾರೆ.

ಮೃತರ ಕುಟುಂಬಕ್ಕೆ 2 ಲಕ್ಷ ನೀಡೋಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು: ಎ.ಆರ್.ಕೃಷ್ಣ ಮೂರ್ತಿ

ಜಿಲ್ಲಾ ಹಾಗೂ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಸಿಬ್ಬಂದಿ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಆಹಾರ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಮೇ. 2ರಂದು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಿಂದ ಸಾಲು-ಸಾಲು ಸಾವಾಗಿದ್ದು, ಮೃತರ ಕುಟುಂಬಗಳು‌ ಬೀದಿಗೆ ಬಿದ್ದಿವೆ. ಈ ಘೋರ ಅವಘಡಕ್ಕೆ ಬಲಿಯಾದ ಕುಟುಂಬಕ್ಕೆ ಕೇವಲ‌ 2 ಲಕ್ಷ ನೀಡುತ್ತಿರುವುದು ಸರ್ಕಾರಕ್ಕೆ‌ ನಾಚಿಕೆ ಆಗಬೇಕು. ಈ ಹಿಂದೆ 25 ಲಕ್ಷ ರೂ. ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಅದರಂತೆ ಪರಿಹಾರ ಹಣವನ್ನು‌ ಹೆಚ್ವಿಸಬೇಕು. ಬೇರೆ-ಬೇರೆ ರಾಜ್ಯಗಳಲ್ಲಿ‌ ಕನಿಷ್ಠ ‌10 ಲಕ್ಷ ಪರಿಹಾರ‌ ನೀಡಲಾಗುತ್ತಿದೆ. ಈ‌ ನಿಟ್ಟಿನಲ್ಲಿ ಸರ್ಕಾರ ಪರಿಹಾರ‌ ಹಣವನ್ನು‌‌ ಹೆಚ್ಚಿಸಬೇಕೆಂದು ರಾಜ್ಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಪರವಾಗಿ ಒತ್ತಾಯಿಸುತ್ತೇನೆ ಎಂದರು.

ರಾಜೀವ್ ಗಾಂಧಿ ಪುಣ್ಯ ಸ್ಮರಣಾರ್ಥ ಆಹಾರ ವಿತರಣೆ

ರಾಜ್ಯ ಕಾಂಗ್ರೆಸ್ ಪಕ್ಷದ‌‌ ನಾಯಕರ ಸೂಚನೆಯಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿನ ಪಕ್ಷದ ನಾಯಕರು ರಾಜೀವ್ ಗಾಂಧಿ ಪುಣ್ಯ ಸ್ಮರಣಾರ್ಥ ಕೋವಿಡ್ ಆಸ್ಪತ್ರೆಗಳ ಸಿಬ್ಬಂದಿಗೆ ಹಾಗು ರೋಗಿಗಳಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಅದರಂತೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ‌ ಹಾಗು ಕೋವಿಡ್ ಸೋಂಕಿತರಿಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್, ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷ ವರುಣ್ ಆಹಾರ ವಿತರಿಸುತ್ತಿದ್ದಾರೆ.

ಮೊದಲನೇ ಅಲೆಯ ಲಾಕ್​ಡೌನ್​ನಲ್ಲಿ ಕಾಂಗ್ರೆಸ್ ಪಕ್ಷ ರೈತರು ಬೆಳೆದ ಬೆಳೆ ಖರೀದಿಸಿ, ಬಡವರಿಗೆ‌ ಉಚಿತವಾಗಿ ನೀಡುವುದರ ಜೊತೆಗೆ ಅನೇಕ ಜನಪರ ಕಾರ್ಯಕ್ರಮ ಮಾಡಿತ್ತು. ಪ್ರಸ್ತುತದಲ್ಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು.

ಇದನ್ನೂ ಓದಿ: 110 ಹಳ್ಳಿಗಳಿಗೆ 5ನೇ ಹಂತದ ಕಾವೇರಿ ಕುಡಿಯುವ ನೀರು: ಯೋಜನೆ ಪೂರ್ಣ ಯಾವಾಗ?

ಕೊಳ್ಳೇಗಾಲ: ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ನೀಡೋಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಹಣ ಯಾವುದಕ್ಕೂ ಸಾಲುವುದಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ 25 ಲಕ್ಷ ರೂ. ಕೊಡಬೇಕು ಆಗ್ರಹಿಸಿದ್ದರು. ಅಂದರಂತೆ ಪರಿಹಾರದ ಹಣವನ್ನು ಹೆಚ್ಚಿಸಬೇಕು ಎಂದು ಮಾಜಿ ಶಾಸಕ ಎ.ಆರ್‌.ಕೃಷ್ಣ ಮೂರ್ತಿ ಒತ್ತಾಯಿಸಿದ್ದಾರೆ.

ಮೃತರ ಕುಟುಂಬಕ್ಕೆ 2 ಲಕ್ಷ ನೀಡೋಕೆ ಸರ್ಕಾರಕ್ಕೆ ನಾಚಿಕೆಯಾಗಬೇಕು: ಎ.ಆರ್.ಕೃಷ್ಣ ಮೂರ್ತಿ

ಜಿಲ್ಲಾ ಹಾಗೂ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಸಿಬ್ಬಂದಿ ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಆಹಾರ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಮೇ. 2ರಂದು ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಿಂದ ಸಾಲು-ಸಾಲು ಸಾವಾಗಿದ್ದು, ಮೃತರ ಕುಟುಂಬಗಳು‌ ಬೀದಿಗೆ ಬಿದ್ದಿವೆ. ಈ ಘೋರ ಅವಘಡಕ್ಕೆ ಬಲಿಯಾದ ಕುಟುಂಬಕ್ಕೆ ಕೇವಲ‌ 2 ಲಕ್ಷ ನೀಡುತ್ತಿರುವುದು ಸರ್ಕಾರಕ್ಕೆ‌ ನಾಚಿಕೆ ಆಗಬೇಕು. ಈ ಹಿಂದೆ 25 ಲಕ್ಷ ರೂ. ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದರು. ಅದರಂತೆ ಪರಿಹಾರ ಹಣವನ್ನು‌ ಹೆಚ್ವಿಸಬೇಕು. ಬೇರೆ-ಬೇರೆ ರಾಜ್ಯಗಳಲ್ಲಿ‌ ಕನಿಷ್ಠ ‌10 ಲಕ್ಷ ಪರಿಹಾರ‌ ನೀಡಲಾಗುತ್ತಿದೆ. ಈ‌ ನಿಟ್ಟಿನಲ್ಲಿ ಸರ್ಕಾರ ಪರಿಹಾರ‌ ಹಣವನ್ನು‌‌ ಹೆಚ್ಚಿಸಬೇಕೆಂದು ರಾಜ್ಯ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಪರವಾಗಿ ಒತ್ತಾಯಿಸುತ್ತೇನೆ ಎಂದರು.

ರಾಜೀವ್ ಗಾಂಧಿ ಪುಣ್ಯ ಸ್ಮರಣಾರ್ಥ ಆಹಾರ ವಿತರಣೆ

ರಾಜ್ಯ ಕಾಂಗ್ರೆಸ್ ಪಕ್ಷದ‌‌ ನಾಯಕರ ಸೂಚನೆಯಂತೆ ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿನ ಪಕ್ಷದ ನಾಯಕರು ರಾಜೀವ್ ಗಾಂಧಿ ಪುಣ್ಯ ಸ್ಮರಣಾರ್ಥ ಕೋವಿಡ್ ಆಸ್ಪತ್ರೆಗಳ ಸಿಬ್ಬಂದಿಗೆ ಹಾಗು ರೋಗಿಗಳಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ಅದರಂತೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ‌ ಹಾಗು ಕೋವಿಡ್ ಸೋಂಕಿತರಿಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್, ಕೊಳ್ಳೇಗಾಲ ಬ್ಲಾಕ್ ಅಧ್ಯಕ್ಷ ವರುಣ್ ಆಹಾರ ವಿತರಿಸುತ್ತಿದ್ದಾರೆ.

ಮೊದಲನೇ ಅಲೆಯ ಲಾಕ್​ಡೌನ್​ನಲ್ಲಿ ಕಾಂಗ್ರೆಸ್ ಪಕ್ಷ ರೈತರು ಬೆಳೆದ ಬೆಳೆ ಖರೀದಿಸಿ, ಬಡವರಿಗೆ‌ ಉಚಿತವಾಗಿ ನೀಡುವುದರ ಜೊತೆಗೆ ಅನೇಕ ಜನಪರ ಕಾರ್ಯಕ್ರಮ ಮಾಡಿತ್ತು. ಪ್ರಸ್ತುತದಲ್ಲೂ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು.

ಇದನ್ನೂ ಓದಿ: 110 ಹಳ್ಳಿಗಳಿಗೆ 5ನೇ ಹಂತದ ಕಾವೇರಿ ಕುಡಿಯುವ ನೀರು: ಯೋಜನೆ ಪೂರ್ಣ ಯಾವಾಗ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.