ETV Bharat / state

ಸಂಕಷ್ಟಕ್ಕೆ ಸಿಲುಕಿದ್ದ 80ರ ವೃದ್ಧೆಗೆ ದಾನಿಗಳ ನೆರವು: ಈಟಿವಿ ಭಾರತ ಫಲಶ್ರುತಿ

ವಿಧವಾ ವೇತನ ಪಡೆಯುತ್ತಿರುವ ವೆಂಕಟಮ್ಮಗೆ ವೃದ್ಧಾಪ್ಯ ವೇತನ ಬರುವಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು‌ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. 80ರ ಹರೆಯದಲ್ಲೂ ಟೈಲರಿಂಗ್ ಮಾಡುತ್ತಿದ್ದ ವೆಂಕಟಮ್ಮ ಲಾಕ್ ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಕುರಿತು 'ಈಟಿವಿ ಭಾರತ' ಬಿತ್ತರಿಸಿದ್ದ ಮಾನವೀಯ ವರದಿ ಫಲಶ್ರುತಿಯಾಗಿದೆ.

author img

By

Published : Aug 20, 2020, 1:57 PM IST

Updated : Aug 20, 2020, 3:08 PM IST

ETV bharat  Impact, which helps donors to an elderly woman
ಸಂಕಷ್ಟಕ್ಕೆ ಸಿಲುಕಿದ್ದ 80ರ ವೃದ್ಧೆಗೆ ದಾನಿಗಳ ನೆರವು: ಈಟಿವಿ ಭಾರತ ಫಲಶ್ರುತಿ

ಚಾಮರಾಜನಗರ: ‌ವಯಸ್ಸು 80 ಆದರೂ ಜೀವನಕ್ಕಾಗಿ ಟೈಲರಿಂಗ್ ಆಶ್ರಯಿಸಿದ್ದ ನಗರದ ರಾಮಸಮುದ್ರದ ವೆಂಕಟಮ್ಮ ಅವರ ಕಷ್ಟಕ್ಕೆ ಸ್ಪಂದಿಸಿ ಹಲವರು ನೆರವು ನೀಡುತ್ತಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ 80ರ ವೃದ್ಧೆಗೆ ದಾನಿಗಳ ನೆರವು: ಈಟಿವಿ ಭಾರತ ಫಲಶ್ರುತಿ

ಹೆಬ್ಬಸೂರಿನ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ, ಭಗತ್ ಯುವಸೇನೆಯ ಕಾಂತರಾಜು ಹಾಗೂ ಕವಿ, ಗ್ರಾಮಲೆಕ್ಕಿಗರಾದ ಶ್ರೀಧರ್ ಇಂದು ವೆಂಕಟಮ್ಮ ಮನೆಗೆ ತೆರಳಿ ಔಷಧಿ, ತಿಂಗಳಿಗಾಗುವಷ್ಟು ಆಹಾರ ಕಿಟ್ ವಿತರಿಸಿದ್ದಲ್ಲದೆ, ಶಾಶ್ವತವಾಗಿ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.

ವಿಧವಾ ವೇತನ ಪಡೆಯುತ್ತಿರುವ ವೆಂಕಟಮ್ಮಗೆ ವೃದ್ಧಾಪ್ಯ ವೇತನ ಬರುವಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು‌ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. 80ರ ಹರೆಯದಲ್ಲೂ ಟೈಲರಿಂಗ್ ಮಾಡುತ್ತಿದ್ದ ವೆಂಕಟಮ್ಮ ಲಾಕ್ ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಕುರಿತು '80ರ ವೃದ್ಧೆಯ ಸ್ವಾಭಿಮಾನದ ಬದುಕು ಕಸಿದ ಕೊರೊನಾ' ಎಂಬ ಶೀರ್ಷಿಕೆಯಡಿ ಮಾನವೀಯ ವರದಿ ಬಿತ್ತರಿಸುವ ಮೂಲಕ 'ಈಟಿವಿ ಭಾರತ'ದಿಂದ ಗಮನ ಸೆಳೆಯಲಾಗಿತ್ತು.

ಇದನ್ನು ಓದಿ: 80ರ ವೃದ್ಧೆಯ ಸ್ವಾಭಿಮಾನದ ಬದುಕು ಕಸಿದ ಕೊರೊನಾ

ಚಾಮರಾಜನಗರ: ‌ವಯಸ್ಸು 80 ಆದರೂ ಜೀವನಕ್ಕಾಗಿ ಟೈಲರಿಂಗ್ ಆಶ್ರಯಿಸಿದ್ದ ನಗರದ ರಾಮಸಮುದ್ರದ ವೆಂಕಟಮ್ಮ ಅವರ ಕಷ್ಟಕ್ಕೆ ಸ್ಪಂದಿಸಿ ಹಲವರು ನೆರವು ನೀಡುತ್ತಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದ 80ರ ವೃದ್ಧೆಗೆ ದಾನಿಗಳ ನೆರವು: ಈಟಿವಿ ಭಾರತ ಫಲಶ್ರುತಿ

ಹೆಬ್ಬಸೂರಿನ ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ, ಭಗತ್ ಯುವಸೇನೆಯ ಕಾಂತರಾಜು ಹಾಗೂ ಕವಿ, ಗ್ರಾಮಲೆಕ್ಕಿಗರಾದ ಶ್ರೀಧರ್ ಇಂದು ವೆಂಕಟಮ್ಮ ಮನೆಗೆ ತೆರಳಿ ಔಷಧಿ, ತಿಂಗಳಿಗಾಗುವಷ್ಟು ಆಹಾರ ಕಿಟ್ ವಿತರಿಸಿದ್ದಲ್ಲದೆ, ಶಾಶ್ವತವಾಗಿ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.

ವಿಧವಾ ವೇತನ ಪಡೆಯುತ್ತಿರುವ ವೆಂಕಟಮ್ಮಗೆ ವೃದ್ಧಾಪ್ಯ ವೇತನ ಬರುವಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು‌ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. 80ರ ಹರೆಯದಲ್ಲೂ ಟೈಲರಿಂಗ್ ಮಾಡುತ್ತಿದ್ದ ವೆಂಕಟಮ್ಮ ಲಾಕ್ ಡೌನ್ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಕುರಿತು '80ರ ವೃದ್ಧೆಯ ಸ್ವಾಭಿಮಾನದ ಬದುಕು ಕಸಿದ ಕೊರೊನಾ' ಎಂಬ ಶೀರ್ಷಿಕೆಯಡಿ ಮಾನವೀಯ ವರದಿ ಬಿತ್ತರಿಸುವ ಮೂಲಕ 'ಈಟಿವಿ ಭಾರತ'ದಿಂದ ಗಮನ ಸೆಳೆಯಲಾಗಿತ್ತು.

ಇದನ್ನು ಓದಿ: 80ರ ವೃದ್ಧೆಯ ಸ್ವಾಭಿಮಾನದ ಬದುಕು ಕಸಿದ ಕೊರೊನಾ

Last Updated : Aug 20, 2020, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.