ETV Bharat / state

ಜಿಂಕೆ ಬೇಟೆ ಆರೋಪ: ಇಬ್ಬರ ಬಂಧನ, 8 ಮಂದಿ ಪರಾರಿ - Chamarajanagar Forest Officers

ಎರಡು ಜಿಂಕೆಗಳನ್ನು ಬೇಟೆಯಾಡಿದ್ದ 10 ಮಂದಿಯ ಪೈಕಿ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

Detention of deer hunters
ಬಂದೂಕಿನಿಂದ ಜೋಡಿ ಜಿಂಕೆ ಬೇಟೆ
author img

By

Published : Feb 19, 2021, 7:25 PM IST

ಚಾಮರಾಜನಗರ: ಬಂದೂಕು ಬಳಸಿ ಎರಡು ಜಿಂಕೆಗಳನ್ನು ಬೇಟೆಯಾಡಿದ್ದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜಿಲ್ಲೆಯ ಬಿಆರ್​ಟಿ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಸೂರಪುರ ಗಸ್ತಿನ ಸೂರಾಪುರ-ಹಿತ್ತಲದೊಡ್ಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಿಕ್ಕಬಸವ, ನವೀನ್ ಬಂಧಿತ ಆರೋಪಿಗಳು‌‌. ಇವರು ನಾಡಬಂದೂಕಿನಿಂದ ಗುಂಡು ಹಾರಿಸಿ ಎರಡು ಜಿಂಕೆಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದರು.

ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ದಾಳಿ ನಡೆಸಿ ಎರಡು ಜಿಂಕೆಗಳ ಮೃತದೇಹ, ಮದ್ದಿನ ಪುಡಿ, ಮಚ್ಚು ಹಾಗೂ ಮೂರು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಪರಾರಿಯಾಗಿರುವ 8 ಮಂದಿ ಬೇಟೆಗಾರರ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.‌

ಚಾಮರಾಜನಗರ: ಬಂದೂಕು ಬಳಸಿ ಎರಡು ಜಿಂಕೆಗಳನ್ನು ಬೇಟೆಯಾಡಿದ್ದ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಜಿಲ್ಲೆಯ ಬಿಆರ್​ಟಿ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಸೂರಪುರ ಗಸ್ತಿನ ಸೂರಾಪುರ-ಹಿತ್ತಲದೊಡ್ಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಚಿಕ್ಕಬಸವ, ನವೀನ್ ಬಂಧಿತ ಆರೋಪಿಗಳು‌‌. ಇವರು ನಾಡಬಂದೂಕಿನಿಂದ ಗುಂಡು ಹಾರಿಸಿ ಎರಡು ಜಿಂಕೆಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದರು.

ಖಚಿತ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ದಾಳಿ ನಡೆಸಿ ಎರಡು ಜಿಂಕೆಗಳ ಮೃತದೇಹ, ಮದ್ದಿನ ಪುಡಿ, ಮಚ್ಚು ಹಾಗೂ ಮೂರು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಪರಾರಿಯಾಗಿರುವ 8 ಮಂದಿ ಬೇಟೆಗಾರರ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.