ಚಾಮರಾಜನಗರ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ಅದ್ಭುತ, ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ಶಾಸಕ ಎನ್.ಮಹೇಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮುಖ್ಯಮಂತ್ರಿ ಜನರ ಹತ್ತಿರ ಹೋದರೆ ಇಡೀ ಆಡಳಿತ ವ್ಯವಸ್ಥೆ ಅಲರ್ಟ್ ಆಗುತ್ತೆ. ಜನರ ಕುಂದುಕೊರತೆಗಳು ನೀಗುತ್ತದೆ. ನಮ್ಮ ಜಿಲ್ಲೆಗೂ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಸಂಪುಟಕ್ಕೆ ಸೇರುವುದು ಕೇವಲ ವದಂತಿ. ನಾನೀಗ ಸ್ವತಂತ್ರನಾಗಿದ್ದು, ಹೈಕಮಾಂಡ್ ಹೇಳಿದವರಿಗಷ್ಟೇ ನನ್ನ ಬೆಂಬಲ ಎಂದು ಸ್ಪಷ್ಟಪಡಿಸಿದರು.