ETV Bharat / state

ಕೇರಳದಲ್ಲಿ ಕೊರೊನಾ ಸೋಂಕಿಲ್ಲ, ಗಡಿಯಲ್ಲಿ ತಪಾಸಣೆ ನಡೆಯುತ್ತಿಲ್ಲ: ಡಿಎಸ್ಒ

author img

By

Published : Mar 3, 2020, 4:51 PM IST

Updated : Mar 3, 2020, 6:56 PM IST

ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಡಿಎಸ್ಒ ಡಾ.ನಾಗರಾಜ್ ಜಿಲ್ಲೆಯ ಜನರಿಗೆ ಆತಂಕ ಬೇಡ ಎಂದಿದ್ದಾರೆ.

Chamarajanagar DSO, Chamarajanagar DSO talk about coronavirus, Chamarajanagar coronavirus news, ಚಾಮರಾಜನಗರ ಡಿಎಸ್​ಒ, ಕೊರೊನಾ ವೈರಸ್​ ಬಗ್ಗೆ ಮಾತನಾಡಿದ ಚಾಮರಾಜನಗರ ಡಿಎಸ್​ಒ, ಚಾಮರಾಜನಗರ ಕೊರೊನಾ ವೈರಸ್​ ಸುದ್ದಿ,
ಚಾಮರಾಜನಗರ ಜಿಲ್ಲೆಯ ಡಿಎಸ್ಒ ಡಾ.ನಾಗರಾಜ್

ಚಾಮರಾಜನಗರ: ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಡಿಎಸ್ಒ ಡಾ.ನಾಗರಾಜ್ ಜಿಲ್ಲೆಯ ಜನರಿಗೆ ಆತಂಕ ಬೇಡ ಎಂದಿದ್ದಾರೆ.

ಗಡಿಯಲ್ಲಿ ತಪಾಸಣೆ ನಡೆಯುತ್ತಿಲ್ಲ ಎಂದು ಡಿಎಸ್ಒ ನಾಗರಾಜ್​ ಹೇಳಿದರು..

ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ಬಳಿಕ ಯಾವುದೇ ಪ್ರಕರಣ ವರದಿಯಾಗಲ್ಲ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಬಂಡೀಪುರ ಗಡಿಯಲ್ಲಿ ತಪಾಸಣೆ ಮಾಡುವುದನ್ನು ನಿಲ್ಲಿಸಲಾಗಿದೆ. ಕೇರಳದಲ್ಲಿ ಬಾಧಿತರಾಗಿದ್ದ ಮೂವರಿಂದ ಇನ್ನಿತರರಿಗೆ ವೈರಸ್ ಹರಡಿಲ್ಲ ಎಂದರು.

ಒಂದು ವೇಳೆ ಕೇರಳದಲ್ಲಿ ಕೊರೊನಾ ಸಂಶಯಾಸ್ಪದ ಪ್ರಕರಣ ವರದಿಯಾದರೆ ಜಿಲ್ಲೆಯಲ್ಲಿ ಹೆಲ್ತ್ ಅಲರ್ಟ್ ಘೋಷಿಸಲಾಗುತ್ತದೆ. ಜಿಲ್ಲಾಸ್ಪತ್ರೆ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ತೆರೆದಿದ್ದೇವೆ ಎಂದು ಮಾಹಿತಿ ನೀಡಿದರು.

ಆದಷ್ಟು ಕೆಮ್ಮುವುದು, ಸೀನುವಾಗ ಕರವಸ್ತ್ರ ಬಳಸುವುದು, ಆಗಾಗ್ಗೆ ಕೈ ಸ್ವಚ್ಛಗೊಳಿಸಿಕೊಳ್ಳುವುದು ಸೇರಿದಂತೆ ಪ್ರಾಥಮಿಕ ಎಚ್ಚರಿಕೆಯಲ್ಲಿ ಜನರಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಚಾಮರಾಜನಗರ: ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಡಿಎಸ್ಒ ಡಾ.ನಾಗರಾಜ್ ಜಿಲ್ಲೆಯ ಜನರಿಗೆ ಆತಂಕ ಬೇಡ ಎಂದಿದ್ದಾರೆ.

ಗಡಿಯಲ್ಲಿ ತಪಾಸಣೆ ನಡೆಯುತ್ತಿಲ್ಲ ಎಂದು ಡಿಎಸ್ಒ ನಾಗರಾಜ್​ ಹೇಳಿದರು..

ಕೇರಳದಲ್ಲಿ ಮೂರು ಪ್ರಕರಣಗಳು ಪತ್ತೆಯಾದ ಬಳಿಕ ಯಾವುದೇ ಪ್ರಕರಣ ವರದಿಯಾಗಲ್ಲ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಬಂಡೀಪುರ ಗಡಿಯಲ್ಲಿ ತಪಾಸಣೆ ಮಾಡುವುದನ್ನು ನಿಲ್ಲಿಸಲಾಗಿದೆ. ಕೇರಳದಲ್ಲಿ ಬಾಧಿತರಾಗಿದ್ದ ಮೂವರಿಂದ ಇನ್ನಿತರರಿಗೆ ವೈರಸ್ ಹರಡಿಲ್ಲ ಎಂದರು.

ಒಂದು ವೇಳೆ ಕೇರಳದಲ್ಲಿ ಕೊರೊನಾ ಸಂಶಯಾಸ್ಪದ ಪ್ರಕರಣ ವರದಿಯಾದರೆ ಜಿಲ್ಲೆಯಲ್ಲಿ ಹೆಲ್ತ್ ಅಲರ್ಟ್ ಘೋಷಿಸಲಾಗುತ್ತದೆ. ಜಿಲ್ಲಾಸ್ಪತ್ರೆ, ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ತೆರೆದಿದ್ದೇವೆ ಎಂದು ಮಾಹಿತಿ ನೀಡಿದರು.

ಆದಷ್ಟು ಕೆಮ್ಮುವುದು, ಸೀನುವಾಗ ಕರವಸ್ತ್ರ ಬಳಸುವುದು, ಆಗಾಗ್ಗೆ ಕೈ ಸ್ವಚ್ಛಗೊಳಿಸಿಕೊಳ್ಳುವುದು ಸೇರಿದಂತೆ ಪ್ರಾಥಮಿಕ ಎಚ್ಚರಿಕೆಯಲ್ಲಿ ಜನರಿರಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Last Updated : Mar 3, 2020, 6:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.