ಚಾಮರಾಜನಗರ: ಗಾಯಾಳು ಚಿರತೆಯೊಂದು ತಾಲೂಕಿನ ಎಲಚಿಕೆರೆ ಖಾಸಗಿ ಜಮೀನಿನೊಂದರಲ್ಲಿ ಓಡಾಡುತ್ತಿದ್ದು, ಜನರು ಭಯಭೀತರಾಗಿದ್ದಾರೆ.
ಚಿರತೆಗೆ ತಲೆಯ ಭಾಗಕ್ಕೆ ತೀವ್ರ ಗಾಯವಾಗಿದೆ ಎನ್ನಲಾಗಿದ್ದು, ನೋವು ತಾಳಲಾರದೇ ಅತ್ತಿಂದಿತ್ತ-ಇತ್ತಿಂದತ್ತ ಸಂಚರಿಸುತ್ತಿದೆ. ಮಾಹಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಬಹುಪಾಲು ಅರವಳಿಕೆ ನೀಡಿ ಚಿರತೆಯನ್ನು ರಕ್ಷಿಸಲು ಯೋಜಿಸಲಾಗಿದ್ದು, ಚಿರತೆಯ ಮಾನಸಿಕ ಸ್ಥಿತಿ ಅರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.