ETV Bharat / state

ಕಾನ್ವೆಂಟ್​​ ವ್ಯಾಮೋಹಕ್ಕೆ ಬಾಗಿಲು ಮುಚ್ಚಿತು ಶತಮಾನದಂಚಿನಲ್ಲಿರುವ ಶಾಲೆ!

ಇಂಗ್ಲಿಷ್ ವ್ಯಾಮೋಹದಿಂದ ಸುಮಾರು 84 ವರ್ಷದ ಅನುದಾನಿತ ಶಾಲೆಯೊಂದು ವಿದ್ಯಾರ್ಥಿಗಳಿಲ್ಲದೇ ಬಾಗಿಲೆಳೆದುಕೊಂಡಿದೆ.

author img

By

Published : Jul 9, 2019, 4:23 PM IST

ಇಂಗ್ಲಿಷ್​ ಕಾನ್ವೆಂಟ್ ಮೋಹದಿಂದ ಅನುದಾನಿತ ಶಾಲೆಗೆ ಬೀಗ

ಚಾಮರಾಜನಗರ: ಮಕ್ಕಳ ಪೋಷಕರು ಇಂಗ್ಲಿಷ್​ ಕಾನ್ವೆಂಟ್​ಗಳ ಮೊರೆ ಹೋಗಿದ್ದರಿಂದ ಚಾಮರಾಜನಗರ ಜಿಲ್ಲೆಯ ಸುಮಾರು 84 ವರ್ಷದಷ್ಟು ಹಳೆಯದಾದ ಶಾಲೆಯೊಂದು ಮುಚ್ಚಿದೆ.

ಕೊಳ್ಳೇಗಾಲದ ಅಣತಿ ದೂರದಲ್ಲೇ ಇರುವ ಸಿದ್ದಯ್ಯನಪುರ ಸರ್ಕಾರಿ ಅನುದಾನಿತ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಈ ಶೈಕ್ಷಣಿಕ ವರ್ಷದಿಂದ ಮುಚ್ಚಿದೆ. ಪೋಷಕರು ತಮ್ಮ ಮಕ್ಕಳನ್ನು ಕಾನ್ಬೆಂಟ್​​ಗಳಿಗೆ ದಾಖಲಿಸಿದ್ದರಿಂದ 84 ವರ್ಷದ ಶಾಲೆ ಮುಚ್ಚಿದ್ದು, ಗ್ರಾಮಸ್ಥರು ಮರುಕ ಪಡುತ್ತಿದ್ದಾರೆ. ಬ್ರದರನ್ ಕ್ರೈಸ್ತ ಮಿಷನರಿ ಸಂಸ್ಥೆ ಈ ಶಾಲೆಯನ್ನು ಪ್ರಾರಂಭಿಸಿತ್ತು. ಬಳಿಕ, ಸರ್ಕಾರಿ ಅನುದಾನಿತ ಶಾಲೆಯಾಗಿ ಮಾರ್ಪಟ್ಟಿತ್ತು.

ಇಂಗ್ಲಿಷ್​ ಕಾನ್ವೆಂಟ್ ಮೋಹದಿಂದ ಅನುದಾನಿತ ಶಾಲೆಗೆ ಬೀಗ

ಹಿಂದೆಲ್ಲಾ ಸುಮಾರು 300-400 ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದರು. ನಂತರ ಈ ಸಂಖ್ಯೆ 2016-17ರಲ್ಲಿ 70ಕ್ಕೆ ಇಳಿಯಿತು. 2017-18ರಲ್ಲಿ ಸಂಖ್ಯೆ ಹತ್ತಾಗಿತ್ತು. ಈ ವರ್ಷವೂ ಅದೇ ಮುಂದುವರೆದಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯನ್ನು ಮುಚ್ಚಬಾರದು ಎಂದು ಈಗ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಆದರೆ, ಕಾನ್ವೆಂಟ್​​​ನಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರಿಸಲು ಪಾಲಕರು ಮುಂದಾಗುವುದು ಕನಸಿನ ಮಾತೇ ಸರಿ.

ಚಾಮರಾಜನಗರ: ಮಕ್ಕಳ ಪೋಷಕರು ಇಂಗ್ಲಿಷ್​ ಕಾನ್ವೆಂಟ್​ಗಳ ಮೊರೆ ಹೋಗಿದ್ದರಿಂದ ಚಾಮರಾಜನಗರ ಜಿಲ್ಲೆಯ ಸುಮಾರು 84 ವರ್ಷದಷ್ಟು ಹಳೆಯದಾದ ಶಾಲೆಯೊಂದು ಮುಚ್ಚಿದೆ.

ಕೊಳ್ಳೇಗಾಲದ ಅಣತಿ ದೂರದಲ್ಲೇ ಇರುವ ಸಿದ್ದಯ್ಯನಪುರ ಸರ್ಕಾರಿ ಅನುದಾನಿತ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಈ ಶೈಕ್ಷಣಿಕ ವರ್ಷದಿಂದ ಮುಚ್ಚಿದೆ. ಪೋಷಕರು ತಮ್ಮ ಮಕ್ಕಳನ್ನು ಕಾನ್ಬೆಂಟ್​​ಗಳಿಗೆ ದಾಖಲಿಸಿದ್ದರಿಂದ 84 ವರ್ಷದ ಶಾಲೆ ಮುಚ್ಚಿದ್ದು, ಗ್ರಾಮಸ್ಥರು ಮರುಕ ಪಡುತ್ತಿದ್ದಾರೆ. ಬ್ರದರನ್ ಕ್ರೈಸ್ತ ಮಿಷನರಿ ಸಂಸ್ಥೆ ಈ ಶಾಲೆಯನ್ನು ಪ್ರಾರಂಭಿಸಿತ್ತು. ಬಳಿಕ, ಸರ್ಕಾರಿ ಅನುದಾನಿತ ಶಾಲೆಯಾಗಿ ಮಾರ್ಪಟ್ಟಿತ್ತು.

ಇಂಗ್ಲಿಷ್​ ಕಾನ್ವೆಂಟ್ ಮೋಹದಿಂದ ಅನುದಾನಿತ ಶಾಲೆಗೆ ಬೀಗ

ಹಿಂದೆಲ್ಲಾ ಸುಮಾರು 300-400 ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದರು. ನಂತರ ಈ ಸಂಖ್ಯೆ 2016-17ರಲ್ಲಿ 70ಕ್ಕೆ ಇಳಿಯಿತು. 2017-18ರಲ್ಲಿ ಸಂಖ್ಯೆ ಹತ್ತಾಗಿತ್ತು. ಈ ವರ್ಷವೂ ಅದೇ ಮುಂದುವರೆದಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ. ಶಾಲೆಯನ್ನು ಮುಚ್ಚಬಾರದು ಎಂದು ಈಗ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಆದರೆ, ಕಾನ್ವೆಂಟ್​​​ನಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರಿಸಲು ಪಾಲಕರು ಮುಂದಾಗುವುದು ಕನಸಿನ ಮಾತೇ ಸರಿ.

Intro:ಶತಮಾನದಂಚಿನ ಶಾಲೆಗೂ ಕಾಡಿತು ಕಾನ್ವೆಂಟ್ ಗುಮ್ಮ: ವಿದ್ಯಾರ್ಥಿಗಳಿಲ್ಲದೇ ಶಾಲೆ ಬಂದ್!


ಚಾಮರಾಜನಗರ:ಅಕ್ಕರೆಯಿಂದ ಅಕ್ಷರ ಕಲಿಸಿದ ಶಾಲೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ, ಪಾಲಕರಿಗಿರುವ ಇಂಗ್ಲಿಷ್ ವ್ಯಾಮೋಹದಿಂದ ೮೪ ವರ್ಷದ ಅನುದಾನಿತ ಶಾಲೆಯೊಂದು ವಿದ್ಯಾರ್ಥಿಗಳಿಲ್ಲದೇ ಬಾಗಿಲೆಳೆದುಕೊಂಡಿದೆ.

Body:ಹೌದು, ಬೇತಾಳನಂತೆ ಕಾಡಿದ ಕಾನ್ವೆಂಟ್ ಗುಮ್ಮನಿಂದಾಗಿ ಸಾವಿರಾರು ಮಂದಿ ಶಿಕ್ಷಣ ಪಡೆದ, ನೂರಾರು ಶಿಕ್ಷಕರಿಗೆ ಅನ್ನ ನೀಡಿದ ಕೊಳ್ಳೇಗಾಲದ ಅಣತಿ ದೂರದಲ್ಲೇ ಇರುವ ಸಿದ್ದಯ್ಯನಪುರ ಸರ್ಕಾರಿ ಅನುದಾನಿತ ಶಾಲೆ ವಿದ್ಯಾರ್ಥಿಗಳ ಕೊರತೆಯಿಂದ ಈ ಶೈಕ್ಷಣಿಕ ವರ್ಷದಿಂದ ಮುಚ್ಚಿದೆ.

ಕೊಳ್ಳೇಗಾಲಕ್ಕೆ ೪-೫ ಕಿಮೀ ದೂರದಲ್ಲೇ ಈ ಗ್ರಾಮ ಇರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಕಾನ್ಬೆಂಟ್ ಗಳಗೆ ದಾಖಲಿಸಿದ್ದರಿಂದ ೮೪ ವರ್ಷದ ಶಾಲೆ ಬಾಗಿಲೆಳುದುಕೊಂಡಿದ್ದು ಗ್ರಾಮಸ್ಥರು ಈಗ ಮರುಕ ಪಡುತ್ತಿದ್ದಾರೆ.

ಮಿಷನರಿ ಶಾಲೆ: ೧೯೩೫ ರಲ್ಲಿ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದಾಗ
ಬ್ರದರನ್ ಕ್ರೈಸ್ತ ಮಿಷನರಿ ಸಂಸ್ಥೆ ಈ ಶಾಲೆಯನ್ನು ಪ್ರಾರಂಭಿಸಿತ್ತು. ಬಳಿಕ, ಸರ್ಕಾರಿ ಅನುದಾನಿತ ಶಾಲೆಯಾಗಿ ಮಾರ್ಪಟ್ಟಿತ್ತು. ಬರೋಬ್ಬರಿ ೩೦೦-೪೦೦ ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದ ಸಂಖ್ಯೆ ೨೦೧೬-೧೭ರಲ್ಲಿ ಎಪ್ಪತ್ತಕ್ಕಿಳಿದಿತ್ತು. ೨೦೧೭-೧೮ರಲ್ಲಿ ಸಂಖ್ಯೆ ಹತ್ತಾಗಿತ್ತು. ಈ ವರ್ಷವೂ ಅದೇ ಮುಂದುವರೆದಿದ್ದರಿಂದ ಶಾಲೆಯನ್ನು ಮುಚ್ಚಲಾಗಿದೆ ಎನ್ನುತ್ತಾರೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವರದರಾಜು.

( ಬೈಟ್- ವರದರಾಜು, ಶಾಲೆಯ ನಿವೃತ್ತ ಶಿಕ್ಷಕ)

Conclusion:ಆಟದ ಮೈದಾನ ಇಲ್ಲದೇ ಕೆರೆಯಂಗಲದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಚಂದದ ಕೊಠಡಿ, ಉತ್ತಮ ಶಿಕ್ಷಕರು ಶಾಲೆಯಲ್ಲಿದ್ದರಿಂದ ಮನೆಗೊಬ್ಬರು ಈ ಊರಿನಲ್ಲಿ ಸರ್ಕಾರಿ ನೌಕರಿ ಹಿಡಿದಿದ್ದರು. ಶಾಲೆಯನ್ನು ಮುಚ್ಚಬಾರದು ಎಂದು ಈಗ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಆದರೆ, ಕಾನ್ವೆಂಟ್ ನಿಂದ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರಿಸಲು ಪಾಲಕರು ಮುಂದಾಗುವುದು ಕನಸಿನ ಮಾತೇ ಸರಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.