ETV Bharat / state

ಟಿಡಿಆರ್​​ ಪ್ರಕರಣ: ಆರೋಪಿಗಳ ವಿರುದ್ಧ ಮತ್ತೊಂದು ದೂರು, FIR ದಾಖಲು

author img

By

Published : May 24, 2019, 4:30 PM IST

ಟಿಡಿಆರ್ ಪ್ರಕರಣದ ಆರೋಪಿಗಳ ವಿರುದ್ಧ ಈಗ ಮತ್ತೊಂದು ದೂರು ನೀಡಲಾಗಿದ್ದು, ನಿವೇಶನ ಗುಳುಂ ಮಾಡಿರುವ ಆರೋಪದ ಮೇಲೆ FIR ದಾಖಲಾಗಿದೆ.

ಟಿಡಿಆರ್ ಪ್ರಕರಣ

ಬೆಂಗಳೂರು: ಟಿಡಿಆರ್ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು ಹಲವೆಡೆ ದಾಳಿ, ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ.

ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್​) ವಂಚನೆ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು, ಇಲ್ಲಿಯವರೆಗೆ ದೇವರಾಜ್, ಕೃಷ್ಣಲಾಲ್, ಸುರೇಂದ್ರನಾಥ್, ರಥನ್ ಲಾತ್, ಅಮಿತ್ ಬೊಲಾರ, ಗೌತಮ್ ಎಂಬ ಆರೋಪಿಗಳನ್ನು ಪತ್ತೆ ಮಾಡಿ,‌ ಇವರ ಮನೆ ಮತ್ತು ಕಚೇರಿ ಮೇಲೆ ದಾಳಿ‌ ನಡೆಸಿ ಹಲವಾರು ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಆರೋಪಿಗಳ ಮೇಲೆ ರಾಜೇಶ್ ಎಂಬುವವರು ಎಸಿಬಿಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಆರೋಪಿಗಳು ರಾಮಮೂರ್ತಿ ನಗರದ ಬಳಿ ಇರುವ 30 ಸಾವಿರ ಮೀ. ಜಾಗವನ್ನು ಗುಳುಂ ಮಾಡಿದ್ದಾರೆ ಎಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಎಸಿಬಿ ತನಿಖೆಯಲ್ಲಿ ಈ ಆರೋಪಿಗಳು ಸಿಲಿಕಾನ್ ಸಿಟಿಯ ಹಲವೆಡೆ ಈ ರೀತಿ ಸೈಟ್ ಗುಳುಂ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಇದಕ್ಕೆ ಬೇಕಾದ ದಾಖಲೆಗಳನ್ನು ರೆಡಿ ಮಾಡಿಕೊಂಡು‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ಎಸಿಬಿ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಬೆಂಗಳೂರು: ಟಿಡಿಆರ್ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು ಹಲವೆಡೆ ದಾಳಿ, ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು, ಆರೋಪಿಗಳ ವಿರುದ್ಧ FIR ದಾಖಲಿಸಿದ್ದಾರೆ.

ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್​) ವಂಚನೆ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು, ಇಲ್ಲಿಯವರೆಗೆ ದೇವರಾಜ್, ಕೃಷ್ಣಲಾಲ್, ಸುರೇಂದ್ರನಾಥ್, ರಥನ್ ಲಾತ್, ಅಮಿತ್ ಬೊಲಾರ, ಗೌತಮ್ ಎಂಬ ಆರೋಪಿಗಳನ್ನು ಪತ್ತೆ ಮಾಡಿ,‌ ಇವರ ಮನೆ ಮತ್ತು ಕಚೇರಿ ಮೇಲೆ ದಾಳಿ‌ ನಡೆಸಿ ಹಲವಾರು ಅಕ್ರಮಗಳನ್ನು ಪತ್ತೆ ಹಚ್ಚಿದ್ದಾರೆ.

ಈ ಆರೋಪಿಗಳ ಮೇಲೆ ರಾಜೇಶ್ ಎಂಬುವವರು ಎಸಿಬಿಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಈ ಆರೋಪಿಗಳು ರಾಮಮೂರ್ತಿ ನಗರದ ಬಳಿ ಇರುವ 30 ಸಾವಿರ ಮೀ. ಜಾಗವನ್ನು ಗುಳುಂ ಮಾಡಿದ್ದಾರೆ ಎಂದು ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಎಸಿಬಿ ತನಿಖೆಯಲ್ಲಿ ಈ ಆರೋಪಿಗಳು ಸಿಲಿಕಾನ್ ಸಿಟಿಯ ಹಲವೆಡೆ ಈ ರೀತಿ ಸೈಟ್ ಗುಳುಂ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಇದಕ್ಕೆ ಬೇಕಾದ ದಾಖಲೆಗಳನ್ನು ರೆಡಿ ಮಾಡಿಕೊಂಡು‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ಎಸಿಬಿ ನಿರ್ಧಾರ ಮಾಡಿದೆ ಎನ್ನಲಾಗಿದೆ.

Intro:ಎಸಿಬಿ ಬಲೆಗೆ ತಗಲಾಕ್ಕೊಂತು ಮತ್ತೊಂದು ಟಿಡಿಆರ್ ಎಫ್ ಐ ಆರ್.
ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದೂರು ದಾಖಲು

ಭವ್ಯ

ರಸ್ತೆ ವಿಸ್ತರಣೆಗೆ ವಶಪಡಿಸಿಕೊಂಡ ಕಟ್ಟಡ ಮತ್ತು ನಿವೇಶನಕ್ಕೆ ಪರ್ಯಾಯವಾಗಿ ನೀಡುವ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿ ಡಿ ಆರ್ )ವಂಚನೆ ಕುರಿತು ತನಿಖೆ ನಡೆಸುತ್ತಿರುವ ಎಸಿಬಿ ಪೊಲೀಸರು ಇಲ್ಲಿಯವರೆಗೆ ದೇವರಾಜ್, ಕೃಷ್ಣ ಲಾಲ್, ಸುರೇಂದ್ರ ನಾಥ್, ರಥನ್ ಲಾತ್, ಸುರೇಂದ್ರನಾಥ್, ಅಮಿತ್ ಬೊಲಾರ, ಗೌತಮ್ ಇಷ್ಟು‌ಮಂದಿಯನ್ನ ಟಿಡಿ ಆರ್ ಪ್ರಕರಣದಲ್ಲಿ ಪತ್ತೆ ಮಾಡಿ ‌ ಇವ್ರ ಮನೆ ಮತ್ತು ಕಚೇರಿ ಮೇಲೆ ದಾಳಿ‌ ನಡೆಸಿ ಪರಿಶೀಲನೆ ನಡೆಸಿ ಹಲವಾರು ಗೋಲ್ಮಾಲ್ ಪತ್ತೆ ಮಾಡಿದ್ರು.. ಇದೀಗ ಇಷ್ಟು‌ ಮಂದಿಯ‌ ಮೇಲೆ‌ ಎಸಿಬಿಯಲ್ಲಿ‌ ಮತ್ತೊಂದು ಎಫ್ಐ ಆರ್ ದಾಖಲಾಗಿದೆ.

ಈ ಆರೋಪಿಗಳ‌ ಮೇಲೆ ರಾಜೇಶ್ ಎಂಬುವವರು ಎಸಿಬಿಯಲ್ಲಿ ದೂರು ದಾಖಲಿಸಿದ್ದು ಈ ಆರೋಪಿಗಳು ರಾಮಮೂರ್ತಿ ನಗರ ಬಳಿ ಇರುವ ಮೂವತ್ತು ಸಾವಿರ ಮೀಟರ್ ಜಾಗವನ್ನ ಗುಳುಂ ಮಾಡಿದ್ದಾರೆ ಎಂದು ಎಫ್ಐ ಆರ್ ನಲ್ಲಿ ತಿಳಿಸಿದ್ದಾರೆ.. ಇನ್ನು ಎಸಿಬಿ ತನಿಖೆಯಲ್ಲಿ ಈ ಆರೋಪಿಗಳು ಸಿಲಿಕಾನ್ ಸಿಟಿಯ ಹಲವೆಡೆ ಈರೀತಿ ಹಲವೆಡೆ ಸೈಟ್ ಗುಳುಂ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಇದಕ್ಕೆ ಬೇಕಾದ ದಾಖಲೆಗಳ ರೆಡಿ ಮಾಡಿಕೊಂಡು‌ ನ್ಯಾಯಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲು ಎಸಿಬಿ ನಿರ್ಧಾರ ಮಾಡಿದೆ.Body:KN_BNG_03_24_ACB_BHAVYA_7204498Conclusion:KN_BNG_03_24_ACB_BHAVYA_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.