ETV Bharat / state

ಸುಂದರ್​ ಲಾಲ್ ಬಹುಗುಣ, ಸುಧಾ ಮೂರ್ತಿಗೆ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿ - ಸುಂದರಲಾಲ್ ಬಹುಗುಣ

2018 -19 ನೇ ಸಾಲಿನ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಸುಂದರ್​ ಲಾಲ್ ಬಹುಗುಣ ಹಾಗು ಸುಧಾ ಮೂರ್ತಿ ಅವರು ಪಾತ್ರರಾಗಿದ್ದಾರೆ.

ಸುಧಾ ಮೂರ್ತಿ ಹಾಗು ಸುಂದರ್​ ಲಾಲ್ ಬಹುಗುಣ
author img

By

Published : Jun 27, 2019, 3:36 AM IST

ಬೆಂಗಳೂರು: ಚಿಪ್ಕೋ ಚಳವಳಿಯ ನೇತಾರ ಜಾರ್ಖಂಡ್ ಮೂಲದ ಸುಂದರ್​ ಲಾಲ್ ಬಹುಗುಣ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು 2018 -19 ನೇ ಸಾಲಿನ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಮೇಶ್, ಪ್ರಶಸ್ತಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸೇವೆ ಹಾಗೂ ಸಾಧನೆ ಆಧಾರದ ಮೇಲೆ ಪರಿಶೀಲಿಸಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಿ.ಪರಮೇಶ್ವರ್​ ಅವರು ಅರ್ಹರನ್ನೇ ಆಯ್ಕೆ ಮಾಡಿದ್ದಾರೆ. ಅದರಂತೆ ಪರಿಸರ ಸಂರಕ್ಷಣೆ ವಿಭಾಗದಲ್ಲಿ ಚಿಪ್ಕೋ ಚಳವಳಿಯ ನೇತಾರ ಸುಂದರ್​ ಲಾಲ್ ಬಹುಗುಣ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ಆಧ್ಯಾತ್ಮದಲ್ಲಿ ಶಿವಾಜಿ ಸದಾಶಿವ ಮೋರೆ, ಸಮಾಜ ಸೇವೆಯಲ್ಲಿ ರವೀಂದ್ರನ್, ಗೌತಮ್, ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಗಿರೀಶ್ ಹೆಚ್.ಎನ್, ಸಾಹಿತ್ಯ ಕ್ಷೇತ್ರದಲ್ಲಿ ಬೇಲೂರು ಕೃಷ್ಣಮೂರ್ತಿ, ಸಮಾಜ ಸೇವೆಯಲ್ಲಿ ಜಿ.ಬಿ.ನಾಗಭೂಷಣ್, ರಾಮಕೃಷ್ಣ ಸೇರಿದಂತೆ 15 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು ಸಾಲುಮರದ ತಿಮ್ಮಕ್ಕ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ 29 ರಂದು ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು: ಚಿಪ್ಕೋ ಚಳವಳಿಯ ನೇತಾರ ಜಾರ್ಖಂಡ್ ಮೂಲದ ಸುಂದರ್​ ಲಾಲ್ ಬಹುಗುಣ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು 2018 -19 ನೇ ಸಾಲಿನ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಮೇಶ್, ಪ್ರಶಸ್ತಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸೇವೆ ಹಾಗೂ ಸಾಧನೆ ಆಧಾರದ ಮೇಲೆ ಪರಿಶೀಲಿಸಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಜಿ.ಪರಮೇಶ್ವರ್​ ಅವರು ಅರ್ಹರನ್ನೇ ಆಯ್ಕೆ ಮಾಡಿದ್ದಾರೆ. ಅದರಂತೆ ಪರಿಸರ ಸಂರಕ್ಷಣೆ ವಿಭಾಗದಲ್ಲಿ ಚಿಪ್ಕೋ ಚಳವಳಿಯ ನೇತಾರ ಸುಂದರ್​ ಲಾಲ್ ಬಹುಗುಣ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ಆಧ್ಯಾತ್ಮದಲ್ಲಿ ಶಿವಾಜಿ ಸದಾಶಿವ ಮೋರೆ, ಸಮಾಜ ಸೇವೆಯಲ್ಲಿ ರವೀಂದ್ರನ್, ಗೌತಮ್, ಪ್ಯಾರಾ ಒಲಿಂಪಿಕ್ ಕ್ರೀಡಾಪಟು ಗಿರೀಶ್ ಹೆಚ್.ಎನ್, ಸಾಹಿತ್ಯ ಕ್ಷೇತ್ರದಲ್ಲಿ ಬೇಲೂರು ಕೃಷ್ಣಮೂರ್ತಿ, ಸಮಾಜ ಸೇವೆಯಲ್ಲಿ ಜಿ.ಬಿ.ನಾಗಭೂಷಣ್, ರಾಮಕೃಷ್ಣ ಸೇರಿದಂತೆ 15 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು ಸಾಲುಮರದ ತಿಮ್ಮಕ್ಕ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ 29 ರಂದು ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

Intro:ಚಿಪ್ಕೋ ಚಳುವಳಿಯ ನೇತಾರ ಜಾರ್ಖಂಡ್ ಮೂಲದ ಸುಂದರಲಾಲ್ ಬಹುಗುಣ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 2018 -19 ನೇ ಸಾಲಿನ ಸಾಲುಮರದತಿಮ್ಮಕ್ಕ ನ್ಯಾಷನಲ್ ಗ್ರೀನರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


Body:ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ಅವರು, ಶಿಸ್ತಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸೇವೆ ಹಾಗೂ ಸಾಧನೆ ಆಧಾರದ ಮೇಲೆ ಪರಿಶೀಲಿಸಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾಕ್ಟರ್ ಜಿ ಪರಮೇಶ್ವರ್ ಅರ್ಹರನ್ನು ಆಯ್ಕೆ ಮಾಡಿದ್ದಾರೆ.
ಅದರಂತೆ ಪರಿಸರ ಸಂರಕ್ಷಣೆ ವಿಭಾಗದಲ್ಲಿ ಚಿಪ್ಕೋ ಚಳುವಳಿಯ ನೇತಾರ ಸುಂದರಲಾಲ್ ಬಹುಗುಣ, ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ, ಆಧ್ಯಾತ್ಮದಲ್ಲಿ ಶಿವಾಜಿ ಸದಾಶಿವ ಮೋರೆ ಸಮಾಜ ಸೇವೆಯಲ್ಲಿ ರವೀಂದ್ರನ್, ಗೌತಮ್, ಪ್ಯಾರಾ ಒಲಂಪಿಕ್ ಕ್ರೀಡಾಪಟು ಗಿರೀಶ್ ಹೆಚ್. ಎನ್, ಸಾಹಿತ್ಯಕ್ಷೇತ್ರದಲ್ಲಿ ಬೇಲೂರು ಕೃಷ್ಣಮೂರ್ತಿ, ಸಮಾಜಸೇವೆಯಲ್ಲಿ ಜಿ.ಬಿ ನಾಗಭೂಷಣ್, ರಾಮಕೃಷ್ಣ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಲುಮರದ ತಿಮ್ಮಕ್ಕ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ 29ರಂದು ವಸಂತನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಉಮೇಶ್ ತಿಳಿಸಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.