ETV Bharat / state

ಐಎಂ‌‌ಎ ವಂಚನೆ ಪ್ರಕರಣ... ಉಪ ವಿಭಾಗಾಧಿಕಾರಿ ನಿವಾಸದಲ್ಲಿ ಎಸ್ಐಟಿ ಶೋಧ - undefined

ಐಎಂ‌‌ಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಧಿಕಾರಿ ಎಲ್​ಸಿ ನಾಗರಾಜ್ ಬಂಧಿಸಿರುವ ಎಸ್ಐಟಿ ಅಧಿಕಾರಿಗಳು, ಅವರ ನೆಲಮಂಗಲ ನಿವಾಸದಲ್ಲಿ ಶೋಧನೆ ನಡೆಸಿದ್ದಾರೆ.

ಎಲ್​ಸಿ ನಾಗರಾಜ್ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳ ಶೋಧ
author img

By

Published : Jul 6, 2019, 10:16 AM IST

ಬೆಂಗಳೂರು: ಐಎಂ‌‌ಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಧಿಕಾರಿ ಎಲ್​ಸಿ ನಾಗರಾಜ್ ಬಂಧಿಸಿರುವ ಎಸ್ಐಟಿ ಅಧಿಕಾರಿಗಳು, ಅವರ ನೆಲಮಂಗಲ ನಿವಾಸದಲ್ಲಿ ಶೋಧನೆ ನಡೆಸಿದ್ದಾರೆ.

ರಾಜ್ಯದಲ್ಲಿ ಸಂಚಲನ ಮೂಡಿಸಿದ ಐಎಂ‌‌ಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, 4.5 ಕೋಟಿ ರೂ. ಲಂಚ ಪಡೆದು ಐಎಂಎ ಕಂಪನಿ ಪರವಾಗಿ ವರದಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಾಗರಾಜ್‌ನನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಎಲ್​ಸಿ ನಾಗರಾಜ್ ಅವರ ನೆಲಮಂಗಲ ಪರಮಣ್ಣ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿರುವ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಎಸ್‌ಐ‌ಟಿ ತನಿಖಾಧಿಕಾರಿ ಗಿರೀಶ್ ಹಾಗೂ ಐದು ಜನರ ತಂಡದಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ತಡರಾತ್ರಿಯವರೆಗೂ ಎಸ್ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು.

ಎಲ್​ಸಿ ನಾಗರಾಜ್ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳ ಶೋಧ

ಘಟನೆ ಹಿನ್ನೆಲೆ...

ಐಎಂಎ ಕಂಪನಿಯ ಬಗ್ಗೆ ತನಿಖೆ ನಡೆಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) 7 ತಿಂಗಳ ಹಿಂದೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆರ್‌ಬಿಐ ಸೂಚನೆಯಂತೆ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರಿಯನ್ನಾಗಿ ನಾಗರಾಜ್ ಅವರನ್ನು ನೇಮಿಸಿತ್ತು. ಆದರೆ ನಾಗರಾಜ್, 4.5 ಕೋಟಿ ರೂ. ಹಣ ಲಂಚ ಪಡೆದು ಸರಿಯಾಗಿ ತನಿಖೆ ಮಾಡದೆ ಮನ್ಸೂರ್ ಅಲಿಖಾನ್‌ಗೆ ಲಾಭವಾಗುವ ರೀತಿಯಲ್ಲಿ ತನಿಖೆ ನಡೆಸಿ, ಯಾವುದೇ ಲೋಪ ಆಗಿಲ್ಲ ಎಂದು ಐಎಂಎ ಕಂಪನಿ ಪರವಾಗಿ ಸರ್ಕಾರಕ್ಕೆ ವರದಿ ನೀಡಿ ಪ್ರಕರಣ ಮುಚ್ಚಿ ಹಾಕಿದರು ಎನ್ನಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತ ಹುದ್ದೆಗೆ ನಿಯೋಜನೆಯಾಗಿದ್ದರೂ ಸಹ ಅಲ್ಲಿ ನಾಗರಾಜ್ ಅಧಿಕಾರ ವಹಿಸಿಕೊಳ್ಳಲಿಲ್ಲ ಎನ್ನಲಾಗಿದೆ. ಸುಗ್ರೀವಾಜ್ಞೆ ಮೂಲಕ ಲಾಭಿ ಮಾಡಿ ಕಂದಾಯ ಇಲಾಖೆಯಲ್ಲೇ ಉಳಿಯಲು ನಾಗರಾಜ್ ನಿರ್ಧರಿಸಿದ್ದರು. ನಾಗರಾಜ್ಆ್ಯಂಬಿಡೆಂಟ್ ಹಗರಣ ಸೇರಿದಂತೆ ಇನ್ನೂ ಹಲವು ಕಂಪನಿಗಳ ಅಕ್ರಮದ ತನಿಖೆ ಮಾಡಲು ನೇಮಕವಾಗಿದ್ದರು.

ಬೆಂಗಳೂರು: ಐಎಂ‌‌ಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಧಿಕಾರಿ ಎಲ್​ಸಿ ನಾಗರಾಜ್ ಬಂಧಿಸಿರುವ ಎಸ್ಐಟಿ ಅಧಿಕಾರಿಗಳು, ಅವರ ನೆಲಮಂಗಲ ನಿವಾಸದಲ್ಲಿ ಶೋಧನೆ ನಡೆಸಿದ್ದಾರೆ.

ರಾಜ್ಯದಲ್ಲಿ ಸಂಚಲನ ಮೂಡಿಸಿದ ಐಎಂ‌‌ಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, 4.5 ಕೋಟಿ ರೂ. ಲಂಚ ಪಡೆದು ಐಎಂಎ ಕಂಪನಿ ಪರವಾಗಿ ವರದಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಾಗರಾಜ್‌ನನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಎಲ್​ಸಿ ನಾಗರಾಜ್ ಅವರ ನೆಲಮಂಗಲ ಪರಮಣ್ಣ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿರುವ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಎಸ್‌ಐ‌ಟಿ ತನಿಖಾಧಿಕಾರಿ ಗಿರೀಶ್ ಹಾಗೂ ಐದು ಜನರ ತಂಡದಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ತಡರಾತ್ರಿಯವರೆಗೂ ಎಸ್ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು.

ಎಲ್​ಸಿ ನಾಗರಾಜ್ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳ ಶೋಧ

ಘಟನೆ ಹಿನ್ನೆಲೆ...

ಐಎಂಎ ಕಂಪನಿಯ ಬಗ್ಗೆ ತನಿಖೆ ನಡೆಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) 7 ತಿಂಗಳ ಹಿಂದೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆರ್‌ಬಿಐ ಸೂಚನೆಯಂತೆ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರಿಯನ್ನಾಗಿ ನಾಗರಾಜ್ ಅವರನ್ನು ನೇಮಿಸಿತ್ತು. ಆದರೆ ನಾಗರಾಜ್, 4.5 ಕೋಟಿ ರೂ. ಹಣ ಲಂಚ ಪಡೆದು ಸರಿಯಾಗಿ ತನಿಖೆ ಮಾಡದೆ ಮನ್ಸೂರ್ ಅಲಿಖಾನ್‌ಗೆ ಲಾಭವಾಗುವ ರೀತಿಯಲ್ಲಿ ತನಿಖೆ ನಡೆಸಿ, ಯಾವುದೇ ಲೋಪ ಆಗಿಲ್ಲ ಎಂದು ಐಎಂಎ ಕಂಪನಿ ಪರವಾಗಿ ಸರ್ಕಾರಕ್ಕೆ ವರದಿ ನೀಡಿ ಪ್ರಕರಣ ಮುಚ್ಚಿ ಹಾಕಿದರು ಎನ್ನಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತ ಹುದ್ದೆಗೆ ನಿಯೋಜನೆಯಾಗಿದ್ದರೂ ಸಹ ಅಲ್ಲಿ ನಾಗರಾಜ್ ಅಧಿಕಾರ ವಹಿಸಿಕೊಳ್ಳಲಿಲ್ಲ ಎನ್ನಲಾಗಿದೆ. ಸುಗ್ರೀವಾಜ್ಞೆ ಮೂಲಕ ಲಾಭಿ ಮಾಡಿ ಕಂದಾಯ ಇಲಾಖೆಯಲ್ಲೇ ಉಳಿಯಲು ನಾಗರಾಜ್ ನಿರ್ಧರಿಸಿದ್ದರು. ನಾಗರಾಜ್ಆ್ಯಂಬಿಡೆಂಟ್ ಹಗರಣ ಸೇರಿದಂತೆ ಇನ್ನೂ ಹಲವು ಕಂಪನಿಗಳ ಅಕ್ರಮದ ತನಿಖೆ ಮಾಡಲು ನೇಮಕವಾಗಿದ್ದರು.

Intro:ಐಎಂಎ ಕಂಪೆನಿಯಿಂದ ಬಹುಕೋಟಿ ವಂಚನೆ ಹಿನ್ನೆಲೆ

ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ(ಎಸಿ) ಎಲ್.ಸಿ ನಾಗರಾಜ್ ಮನೆಯಲ್ಲಿ ಎಸ್ಐಟಿ ಶೋಧ

ನೆಲಮಂಗಲದ ಪರಮಣ್ಣ ಲೇಔಟ್‌ನ ಎಲ್‌ಸಿ ನಾಗರಾಜು ನಿವಾಸ

Body:ನೆಲಮಂಗಲ: ಐಎಂ‌‌ಎ ಕಂಪನಿಯ ಬಹಕೋಟಿ ಪ್ರಕರಣಕ್ಕೆ ಸಂಬಂಧಿಸಿದಂತೆ
ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಧಿಕಾರಿ ಎಲ್ ಸಿ ನಾಗರಾಜ್ ಬಂಧನ ನಡೆಸಿರುವ ಎಸ್ಐಟಿ ಅಧಿಕಾರಿಗಳು ನೆಲಮಂಗಲದ ನಿವಾಸದಲ್ಲಿ ಶೋಧನೆ ನಡೆಸಿದ್ದಾರೆ.

ರಾಜ್ಯದಲ್ಲಿ ಸಂಚಲನ ಮೂಡಿಸಿದ ಐಎಂ‌‌ಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 4.5 ಕೋಟಿ ರೂ. ಲಂಚ ಪಡೆದು ಐಎಂಎ ಕಂಪೆನಿ ಪರವಾಗಿ ವರದಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ನಾಗರಾಜ್‌ನನ್ನು ಎಸ್‌ಐಟಿ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಎಲ್ ಸಿ ನಾಗರಾಜ್ ನೆಲಮಂಗಲ ಪರಮಣ್ಣ ಲೇಔಟ್ ನಿವಾಸದ ಮೇಲೆ ದಾಳಿ ನಡೆಸಿರುವ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಎಸ್‌ಐ‌ಟಿ ತನಿಖಾಧಿಕಾರಿ ಗಿರೀಶ್ ಹಾಗೂ ಐದು ಜನರ ತಂಡದಿಂದ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ತಡರಾತ್ರಿಯ ವರೆಗೂ ಎಸ್ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು.

ಘಟನೆ ಹಿನ್ನೆಲೆ


ಐಎಂಎ ಕಂಪನಿಯ ಬಗ್ಗೆ ತನಿಖೆ ನಡೆಸುವಂತೆ ರೀಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) 7 ತಿಂಗಳ ಹಿಂದೆ ಸರ್ಕಾರಕ್ಕೆ ಆದೇಶ ನೀಡಿತ್ತು. ಆರ್‌ಬಿಐ ಸೂಚನೆಯಂತೆ ರಾಜ್ಯ ಸರ್ಕಾರ ಸಕ್ಷಮ ಪ್ರಾಧಿಕಾರಿಯನ್ನಾಗಿ ನಾಗರಾಜ್ ಅವರನ್ನು ನೇಮಿಸಿತ್ತು. ಆದರೆ ನಾಗರಾಜ್ 4.5 ಕೋಟಿ ಹಣ ಲಂಚ ಪಡೆದು ಸರಿಯಾಗಿ ತನಿಖೆ ಮಾಡದೆ ಮನ್ಸೂರ್ ಅಲಿಖಾನ್‌ಗೆ ಲಾಭವಾಗುವ ರೀತಿಯಲ್ಲಿ ತನಿಖೆ ನಡೆಸಿ, ಯಾವುದೇ ಲೋಪ ಆಗಿಲ್ಲ ಎಂದು ನಾಗರಾಜ್ ಐಎಂಎ ಕಂಪನಿ ಪರವಾಗಿ ಸರಕಾರಕ್ಕೆ ವರದಿ ನೀಡಿ ಪ್ರಕರಣ ಮುಚ್ಚಿ ಹಾಕಿದರು ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಉನ್ನತ ಹುದ್ದೆಗೆ ನಿಯೋಜನೆ ಆಗಿದ್ದರು ಸಹ ಅಲ್ಲಿ ನಾಗರಾಜ್ ಅಧಿಕಾರ ವಹಿಸಿಕೊಳ್ಳಲಿಲ್ಲ ಎನ್ನಲಾಗಿದೆ. ಸುಗ್ರೀವಾಜ್ಞೆ ಮೂಲಕ ಲಾಭಿ ಮಾಡಿ ಕಂದಾಯ ಇಲಾಖೆಯಲ್ಲೇ ಉಳಿಯಲು ನಾಗರಾಜ್ ನಿರ್ಧರಿಸಿದ್ದರು. ನಾಗರಾಜ್ ಆಂಬಿಡೆಂಟ್ ಹಗರಣ ಸೇರಿದಂತೆ ಇನ್ನೂ ಹಲವು ಕಂಪನಿಗಳ ಅಕ್ರಮದ ತನಿಖೆ ಮಾಡಲು ನೇಮಕವಾಗಿದ್ದರು.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.