ETV Bharat / state

ಕನಸು ದೊಡ್ಡದಾಗಿರಬೇಕು, ಅದನ್ನ ನನಗಾಸಿಕೊಳ್ಳಬೇಕು..- ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪಿ ಎಸ್ ಸಂಧು​ - undefined

ಬಡಮಕ್ಕಳಿಗೆ ಅನುಕೂಲವಾಗಲೆಂದು ಕೆಆರ್‌ಪುರದ ಕಿತ್ತಗನೂರು ಸರ್ಕಾರಿ ಶಾಲೆಯಲ್ಲಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ ಎಸ್ ಸಂಧು ಅವರಿಂದ ಉಚಿತ ನೋಟ್​​ ಪುಸ್ತಕಗಳನ್ನು ವಿತರಿಸಲಾಯಿತು.

ಕೆ.ಆರ್.ಪುರದ ಕಿತ್ತಗನೂರು
author img

By

Published : Jun 24, 2019, 9:15 AM IST

ಬೆಂಗಳೂರು : ವಕೀಲರಾದ ಜೆ.ಪೂಜಪ್ಪ ಕೆಆರ್‌ಪುರ ಸುತ್ತ-ಮುತ್ತ ಕಳೆದ 10ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್​​ ಪುಸ್ತಕಗಳನ್ನು ವಿತರಿಸುತ್ತಿದ್ದು, ಈ ಬಾರಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ ಎಸ್ ಸಂಧು ಅವರನ್ನು ಆಹ್ವಾನಿಸಿ ಉಚಿತ ಪುಸ್ತಕ ವಿತರಣೆ ಮಾಡಿದರು.

ಉಚಿತ ಪುಸ್ತಕ ವಿತರಣೆ ಬಳಿಕ ಮಾತನಾಡಿದ ಸಂಧು ಅವರು, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು, ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಅಭ್ಯಾಸದಲ್ಲಿ ನಿರತರಾದರೆ ಅಭ್ಯಾಸ ಕಠಿಣ ಎನಿಸುವುದಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿಯಲ್ಲಿನ ಸವಲತ್ತುಗಳನ್ನು ಪಡೆದು ನಾಡಿಗೆ ಗೌರವ ತರಬೇಕು. ಸರ್ಕಾ‌ರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲೀಷ್ ಕಠಿಣ ಅನಿಸಬಹುದು. ಆದರೆ, ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಪಡೆದರೆ ಭಾರತದಲ್ಲಿ ಅಷ್ಟೇ ಅಲ್ಲ ಹೊರದೇಶಗಳಲ್ಲೂ ಕೆಲಸ ಮಾಡಲು ಅನುಕೂಲವಾಗಬಹುದು ಎಂದರು.

ಪಿ ಎಸ್ ಸಂಧು ಅವರಿಂದ ಉಚಿತ ನೋಟ್​​ ಪುಸ್ತಕಗಳ ವಿತರಣೆ

ಕಿತ್ತಗನೂರಿನ ಮುಖಂಡ ಹಾಗೂ ವಕೀಲರಾದ ಜೆ.ಪೂಜಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬಡವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದೇವೆ. ಕಿತ್ತಗನೂರಿನ ಸುತ್ತಮುತ್ತಲಿನ ಸರ್ಕಾರಿ ಸ್ವಾಮ್ಯದ, ಅನುದಾನಿತ ಶಾಲೆಗಳ ಬಡಮಕ್ಕಳನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ನೋಟ್ ಪುಸ್ತಕ, ಪೆನ್ನು,‌ ಪೆನ್ಸಿಲ್ ವಿತರಿಸಿದ್ದೇವೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಬಡತನದ ಕಾರಣದಿಂದ ನೋಟ್ ಪುಸ್ತಕ ಕೊಳ್ಳದೆ ಇರಬಹುದು, ಇಂತವರಿಗೆ ನಾವು ಸೌಲಭ್ಯ ಕಲ್ಪಿಸಿರುವುದು ಅನುಕೂಲವಾಗುತ್ತದೆ ಎಂದರು.

ಬೆಂಗಳೂರು : ವಕೀಲರಾದ ಜೆ.ಪೂಜಪ್ಪ ಕೆಆರ್‌ಪುರ ಸುತ್ತ-ಮುತ್ತ ಕಳೆದ 10ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್​​ ಪುಸ್ತಕಗಳನ್ನು ವಿತರಿಸುತ್ತಿದ್ದು, ಈ ಬಾರಿ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ ಎಸ್ ಸಂಧು ಅವರನ್ನು ಆಹ್ವಾನಿಸಿ ಉಚಿತ ಪುಸ್ತಕ ವಿತರಣೆ ಮಾಡಿದರು.

ಉಚಿತ ಪುಸ್ತಕ ವಿತರಣೆ ಬಳಿಕ ಮಾತನಾಡಿದ ಸಂಧು ಅವರು, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು, ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಅಭ್ಯಾಸದಲ್ಲಿ ನಿರತರಾದರೆ ಅಭ್ಯಾಸ ಕಠಿಣ ಎನಿಸುವುದಿಲ್ಲ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿಯಲ್ಲಿನ ಸವಲತ್ತುಗಳನ್ನು ಪಡೆದು ನಾಡಿಗೆ ಗೌರವ ತರಬೇಕು. ಸರ್ಕಾ‌ರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲೀಷ್ ಕಠಿಣ ಅನಿಸಬಹುದು. ಆದರೆ, ಇಂಗ್ಲಿಷ್ ಭಾಷೆಯಲ್ಲಿ ಪರಿಣಿತಿ ಪಡೆದರೆ ಭಾರತದಲ್ಲಿ ಅಷ್ಟೇ ಅಲ್ಲ ಹೊರದೇಶಗಳಲ್ಲೂ ಕೆಲಸ ಮಾಡಲು ಅನುಕೂಲವಾಗಬಹುದು ಎಂದರು.

ಪಿ ಎಸ್ ಸಂಧು ಅವರಿಂದ ಉಚಿತ ನೋಟ್​​ ಪುಸ್ತಕಗಳ ವಿತರಣೆ

ಕಿತ್ತಗನೂರಿನ ಮುಖಂಡ ಹಾಗೂ ವಕೀಲರಾದ ಜೆ.ಪೂಜಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬಡವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದೇವೆ. ಕಿತ್ತಗನೂರಿನ ಸುತ್ತಮುತ್ತಲಿನ ಸರ್ಕಾರಿ ಸ್ವಾಮ್ಯದ, ಅನುದಾನಿತ ಶಾಲೆಗಳ ಬಡಮಕ್ಕಳನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ನೋಟ್ ಪುಸ್ತಕ, ಪೆನ್ನು,‌ ಪೆನ್ಸಿಲ್ ವಿತರಿಸಿದ್ದೇವೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಬಡತನದ ಕಾರಣದಿಂದ ನೋಟ್ ಪುಸ್ತಕ ಕೊಳ್ಳದೆ ಇರಬಹುದು, ಇಂತವರಿಗೆ ನಾವು ಸೌಲಭ್ಯ ಕಲ್ಪಿಸಿರುವುದು ಅನುಕೂಲವಾಗುತ್ತದೆ ಎಂದರು.

Intro:ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಉತ್ತಮವಾಗಿ ಅಭ್ಯಾಸ ಮಾಡಿ ಯಶಸ್ಸು ಸಾಧಿಸಬೇಕು ರಾಜ್ಯ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಪಿ.ಎಸ್.ಸಂಧು.



ಕೆ.ಆರ್.ಪುರ ಸಮೀಪದ ಕಿತ್ತಗನೂರು ಸರ್ಕಾರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಬಡ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ
ವಿತರಣೆ ಮಾಡಿದರು.


ನಂತರ ಮಕ್ಕಳನ್ನು ಕುರಿತು ಮಾತಾನಾಡಿದ ರಾಜ್ಯ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ ಪಿ.ಎಸ್.ಸಂಧು
ಚಿಕ್ಕಂದಿನಿಂದಲೇ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು ಉತ್ತಮವಾಗಿ ಅಭ್ಯಾಸದಲ್ಲಿ ನಿರತರಾದರೆ ಅಭ್ಯಾಸ ಕಠಿಣ ಎನಿಸುವುದಿಲ್ಲ. ಕಠಿಣ ಅಭ್ಯಾಸ ಬಲವೆ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳು ನಿರಂತರವಾದ ಕಲಿಕೆಯ ಮೂಲಕ ಅಗಾಧವಾದುದನ್ನು ಸಾಧಿಸಿ ತಂದೆ ತಾಯಿ, ಪೋಷಕರಿಗೆ ಗೌರವ ತರುವಂತಾಗಬೇಕು ಎಂದರು.

Body:ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿಯಲ್ಲಿನ ಸವಲತ್ತುಗಳನ್ನು ಪಡೆದು ನಾಡಿಗೆ ಗೌರವ ತರಬೇಕು. ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಇಂಗ್ಲಿಷ್ ಕಠಿಣ ಅನಿಸಬಹುದು ಆದರೆ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಪಡೆದರೆ ಭಾರತದಲ್ಲಿ ಅಷ್ಟೇ ಅಲ್ಲ ಹೊರದೇಶಗಳಲ್ಲೂ ಕೆಲಸ ಮಾಡಲು ಅನುಕೂಲವಾಗಬಹುದು. ಕನ್ನಡ ಭಾಷೆಯನ್ನು ಪ್ರಥಮ ಭಾಷೆಯಯಾಗಿ ಕಲಿತು ಕನ್ನಡದ ಕಂಪನ್ನು ನಾಡಿನೆಲ್ಲೆಡೆ ಪಸರಿಸುವಂತೆ ವಿದ್ಯಾರ್ಥಿಗಳು ಕಿವಿಮಾತು ಹೇಳಿದರು.

Conclusion:ಕಿತ್ತಗನೂರಿನ ಮುಖಂಡ ಹಾಗೂ ವಕೀಲರಾದ ಜೆ.ಪೂಜಪ್ಪ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸತತವಾಗಿ ಬಡವಿದ್ಯಾರ್ಥಿಗಳಿಗಾಗಿ ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿದ್ದೇವೆ. ಕಿತ್ತಗನೂರಿನ ಸುತ್ತಮುತ್ತಲಿನ ಸರ್ಕಾರಿ ಸ್ವಾಮ್ಯದ, ಅನುದಾನಿತ ಶಾಲೆಗಳ ಬಡಮಕ್ಕಳನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಉಚಿತವಾಗಿ ನೋಟ್ ಪುಸ್ತಕ, ಪೆನ್ನು,‌ಪೆನ್ಸಿಲ್ ವಿತರಿಸಿದ್ದೇವೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಬಡತನದ ಕಾರಣದಿಂದ ನೋಟ್ ಪುಸ್ತಕ ಕೊಳ್ಳದೆ ಇರಬಹುದು ಇಂತವರಿಗೆ ನಾವು ಸೌಲಭ್ಯ ಕಲ್ಪಿಸಿರುವುದು ಅನುಕೂಲವಾಗುತ್ತದೆ ಎಂದು ಹೇಳಿದರು.


ಬೈಟ್:ಜೆ.ಪೂಜಪ್ಪ,ವಕೀಲರು

ಬೈಟ್ :ಪಾಟೀಲ್ ‌ನಾಗೇಶ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.