ETV Bharat / state

ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಸ್ಥಳೀಯರ ಆಕ್ರೋಶ - undefined

ನಗರದಿಂದ ಗ್ರಾಮಾಂತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದರಲ್ಲಿ ಜಲಮಂಡಲಿ ಅಧಿಕಾರಿಗಳು ಕಾವೇರಿ ಪೈಪ್ ಲೈನ್ ಅಳವಡಿಸಲು ರಸ್ತೆ ಅಗೆದು ವರ್ಷ ಕಳೆದರೂ ಇನ್ನೂ ಕೂಡ ರಸ್ತೆಗೆ ಡಾಂಬರೀಕರಣ ಮಾಡಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಸ್ಥಳೀಯರು, ಸವಾರರಿಗೆ ಸಂಕಟ
author img

By

Published : Jun 25, 2019, 3:48 PM IST

ಬೆಂಗಳೂರು: ಬಿಬಿಎಂಪಿ ಹಾಗೂ ಜಲ ಮಂಡಲಿಯವರು ದುರಸ್ತಿ ಕಾರ್ಯ ನಡೆಸಿ ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿ ಕೆ.ಆರ್.​​ ಪುರದ ಕಲ್ಕೆರೆ ಗ್ರಾಮಸ್ಥರು ರಸ್ತೆಗಳಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರಮಾವು, ಕಲ್ಕೆರೆ, ಚೆನ್ನಸಂದ್ರ ಗ್ರಾಮಗಳ ಮೇಲೆ ಹಾದು ಹೋಗುವ ರಸ್ತೆಯಲ್ಲಿ ಜಲ ಮಂಡಳಿ ಅಧಿಕಾರಿಗಳು ವರ್ಷದ ಹಿಂದೆ ಕಾವೇರಿ ಪೈಪ್​​ಲೈನ್​ಗಾಗಿ ರಸ್ತೆಯನ್ನು ಅಗೆದವರು ಮತ್ತೆ ಅದಕ್ಕೆ ಡಾಂಬರಿನ ಭಾಗ್ಯ ಕಲ್ಪಿಸದೆ ಹಾಗೆಯೇ ಬಿಟ್ಟಿದ್ಧಾರೆ. ಇನ್ನು ನಗರಕ್ಕೆ ಬರುವವರು ಇದೇ ರಸ್ತೆಯನ್ನು ಅವಲಂಬಿಸಿದ್ದು, ದುರಸ್ತಿ ಕಾರ್ಯ ನಡೆಯದೆ ರಸ್ತೆ ಹದಗೆಟ್ಟು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಡಾಂಬರೀಕರಣ ನಡೆಸಿಲ್ಲವೆಂದು ಗ್ರಾಮಸ್ಥರ ಪ್ರತಿಭಟನೆ

ಮಳೆಗಾಲದಲ್ಲಿ ಪೈಪ್ ಲೈನ್‌ ಮಾಡಿರುವ ಜಾಗದಲ್ಲಿ ಮಣ್ಣು ಕುಸಿದು ದೊಡ್ಡ ಗಾತ್ರದ ವಾಹನಗಳ ‌ಚಕ್ರಗಳು ಹಳ್ಳಗಳಿಗೆ ಸಿಲುಕಿ, ಟ್ರಾಫಿಕ್​ ಜಾಮ್​ ಕೂಡ ಆಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು ರಸ್ತೆ ಬದಿಯಲ್ಲಿರುವ ವ್ಯಾಪಾರಸ್ಥರಿಗೆ ಈ ರಸ್ತೆಯಿಂದ ಬರುವ ಧೂಳಿನಿಂದ ಜನರು ಅಂಗಡಿಗಳಿಗೆ ಬರದೆ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಜಲ ಮಂಡಳಿ ಒಂದು ಮಾಡಲು ಹೋಗಿ ಇನ್ನೊಂದು ಸಮಸ್ಯೆ ತಂದೊಡ್ಡಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬೆಂಗಳೂರು: ಬಿಬಿಎಂಪಿ ಹಾಗೂ ಜಲ ಮಂಡಲಿಯವರು ದುರಸ್ತಿ ಕಾರ್ಯ ನಡೆಸಿ ರಸ್ತೆ ಸರಿಪಡಿಸಬೇಕು ಎಂದು ಆಗ್ರಹಿಸಿ ಕೆ.ಆರ್.​​ ಪುರದ ಕಲ್ಕೆರೆ ಗ್ರಾಮಸ್ಥರು ರಸ್ತೆಗಳಿಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರಮಾವು, ಕಲ್ಕೆರೆ, ಚೆನ್ನಸಂದ್ರ ಗ್ರಾಮಗಳ ಮೇಲೆ ಹಾದು ಹೋಗುವ ರಸ್ತೆಯಲ್ಲಿ ಜಲ ಮಂಡಳಿ ಅಧಿಕಾರಿಗಳು ವರ್ಷದ ಹಿಂದೆ ಕಾವೇರಿ ಪೈಪ್​​ಲೈನ್​ಗಾಗಿ ರಸ್ತೆಯನ್ನು ಅಗೆದವರು ಮತ್ತೆ ಅದಕ್ಕೆ ಡಾಂಬರಿನ ಭಾಗ್ಯ ಕಲ್ಪಿಸದೆ ಹಾಗೆಯೇ ಬಿಟ್ಟಿದ್ಧಾರೆ. ಇನ್ನು ನಗರಕ್ಕೆ ಬರುವವರು ಇದೇ ರಸ್ತೆಯನ್ನು ಅವಲಂಬಿಸಿದ್ದು, ದುರಸ್ತಿ ಕಾರ್ಯ ನಡೆಯದೆ ರಸ್ತೆ ಹದಗೆಟ್ಟು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಡಾಂಬರೀಕರಣ ನಡೆಸಿಲ್ಲವೆಂದು ಗ್ರಾಮಸ್ಥರ ಪ್ರತಿಭಟನೆ

ಮಳೆಗಾಲದಲ್ಲಿ ಪೈಪ್ ಲೈನ್‌ ಮಾಡಿರುವ ಜಾಗದಲ್ಲಿ ಮಣ್ಣು ಕುಸಿದು ದೊಡ್ಡ ಗಾತ್ರದ ವಾಹನಗಳ ‌ಚಕ್ರಗಳು ಹಳ್ಳಗಳಿಗೆ ಸಿಲುಕಿ, ಟ್ರಾಫಿಕ್​ ಜಾಮ್​ ಕೂಡ ಆಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು ರಸ್ತೆ ಬದಿಯಲ್ಲಿರುವ ವ್ಯಾಪಾರಸ್ಥರಿಗೆ ಈ ರಸ್ತೆಯಿಂದ ಬರುವ ಧೂಳಿನಿಂದ ಜನರು ಅಂಗಡಿಗಳಿಗೆ ಬರದೆ ನಷ್ಟ ಅನುಭವಿಸುತ್ತಿದ್ದಾರೆ. ಇನ್ನು ಜಲ ಮಂಡಳಿ ಒಂದು ಮಾಡಲು ಹೋಗಿ ಇನ್ನೊಂದು ಸಮಸ್ಯೆ ತಂದೊಡ್ಡಿದೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Intro:ಧೂಳು ಹಾಗೂ ಕೆಸರು ರಸ್ತೆಯಿಂದ ಮುಕ್ತಿ ಪಡೆಯಲು ರಸ್ತೆಗಿಳಿದ ಗ್ರಾಮಸ್ಥರು.


ಅದು ಬೆಂಗಳೂರು ನಗರದಿಂದ ಗ್ರಾಮಾಂತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ. ಆ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಚೆನ್ನಾಗಿದ್ದ ರಸ್ತೆಯಲ್ಲಿ ಕಾವೇರಿ ಪೈಪ್ ಲೈನ್ ಅಳವಡಿಕೆಗಾಗಿ ಒಂದುವರೆ ವರ್ಷಗಳ ಹಿಂದೆ ರಸ್ತೆಯನ್ನು ಹಗೆದ ಜಲಮಂಡಲಿ ಅಧಿಕಾರಿಗಳು ಮತ್ತೆ ಅದಕ್ಕೆ ಡಾಂಬರಿನ ಭಾಗ್ಯ ಕಲ್ಪಿಸದೆ ಇರುವುದರಿಂದ ಈ ರಸ್ತೆಯಲ್ಲಿ ಬರುವ ಗ್ರಾಮಗಳ ಜನರಿಗೆ ಮಳೆ ಬಂದರೆ ಕೆಸರು ಹಾಗೂ ಬಿಸಿಲು ಬಂದರೆ ಧೂಳಿನ ಸಮಸ್ಯೆಯಿಂದ ಬಳಲುವಂತಾಗಿದ್ದು, ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಬೇಕೆಂದು ರಸ್ತೆತಡೆ ನಡೆಸಿ ಪ್ರತಿಭಟಿಸಿದ್ದಾರೆ.




ಹೀಗೆ ಕೆಸರು, ಧೂಳುಮಣ್ಣು, ಕಲ್ಲಿನಿಂದ ಕೂಡಿರುವ ಈ ರಸ್ತೆ ಕಾಣ ಸಿಗುವುದು ಬೆಂಗಳೂರಿನ ಕೆ.ಆರ್.ಪುರ ಸಮೀಪದ ಹೊರಮಾವು, ಕಲ್ಕೆರೆ, ಚೆನ್ನಸಂದ್ರ ಗ್ರಾಮಗಳ ರಸ್ತೆಯಲ್ಲಿ. ಚೆನ್ನಾಗಿದ್ದ ರಸ್ತೆಯಲ್ಲಿ ಕಾವೇರಿ ಪೈಪ್ ಲೈನ್ ಅಳವಡಿಸುವ ಸಲುವಾಗಿ ಜಲಮಂಡಲಿ ಕಳೆದ ಒಂದುವರೆ ವರ್ಷಗಳ ಹಿಂದೆ ರಸ್ತೆಯನ್ನು ಕೊರೆದು ಪೈಪ್ ಅಳವಡಿಸಿದ್ದರು, ಇನ್ನು ಡಾಂಬರು ಹಾಕದೆ ಬಿಟ್ಟಿರುವುದರಿಂದ ವಾಹನಗಳು ಸಂಚರಿಸಲು ಕಷ್ಟವಾಗಿದ್ದು, ಬಿಸಿಲು ಬಂದದೆ ಧೂಳು, ಮಳೆ ಬಂದರೆ ಕೆಸರು ಮಯವಾಗಿ ವಾಹನ ಸವಾರರು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಇನ್ನೂ ಮಳೆಗಾಲದಲ್ಲಿ ಪೈಪ್ ಲೈನ್‌ ಮಾಡಿರುವ ಕೆಲವೊಂದು ಜಾಗದಲ್ಲಿ ಮಣ್ಣು ಕುಸಿದು ದೊಡ್ಡ ಗಾತ್ರದ ವಾಹನಗಳ ‌ಚಕ್ರಗಳು ಸಿಲುಕಿಹಾಕಿ ಕೊಂಡು ಪರಾದಾಡುವಂತಾಗಿದೆ.

ಈ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ‌ ಸಂಚರಿಸುವಾಗ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೋಂಡೆ ಗಾಡಿ ಓಡಿಸಬೇಕು ಇಲ್ಲವದರೆ ಕಾಯಿಲೆಗಳು ಉಚಿತವಾಗಿ ಪಡೆಯುವಂತಾಗಿದೆ.

ಇನ್ನೂ ಈ ರಸ್ತೆ ಬದಿಯಲ್ಲಿರುವ
ವ್ಯಾಪಾರಸ್ಥರ ಹಾಗೂ ಅಂಗಡಿ ಮಾಲಿಕರು ಈ ರಸ್ತೆಯಿಂದ ಬರುವ ಧೂಳಿನಿಂದ ತುಂಬಾನೆ ನಷ್ಟ ಅನುಭಸುತ್ತಿದ್ದಾರೆ. ಬೇಕರಿಗಳು,ತರಕಾರಿ ಅಂಗಡಿಗಳು, ದಿನಸಿ ವ್ಯಾಪಾರಿಗಳು ಕಳೆದ ಒಂದುವರೆ ವರ್ಷಗಳ ಕಾಲ ಗ್ರಾಹಕರು ಯಾರು ಬರುತ್ತಿಲ್ಲ ಎಂದು ಅಂಗಡಿಗಳನ್ನ‌ ಮುಚ್ಚಿಕೋಂಡು ಹೊಗಿದ್ದಾರೆ.
ಅಂಗಡಿ ಮಾಲೀಕರಿಗೆ ಯಾರು ಬಾಡಿಗೆಗೆ ಬರುತ್ತಿಲ್ಲ ಎಂದು ನೋವನ್ನು ಹೇಳಿದರು.

Body:ಇಷ್ಟು ದಿನ ಸಹಿಸಿಕೊಂಡಿದ್ದರು ಬಿಬಿಎಂಪಿ ಹಾಗೂ ಜಲಮಂಡಲಿ ಯವರು ರಸ್ತೆ ಸರಿಪಡಿಸಲು ಮುಂದಾಗದೆ ಇರುವುದರಿಂದ ಇಂದು ಕಲ್ಕೆರೆ ಗ್ರಾಮದ ಗ್ರಾಮಸ್ಥರು ರಸ್ತೆಗಳಿಗೆ ಅಡ್ಡಲಾಗಿ ಟ್ರಾಕ್ಟರ್ ವಾಹನಗಳನ್ನು ನಿಲ್ಲಿಸಿ ಆದಷ್ಟು ಬೇಗನೆ ರಸ್ತೆಯನ್ನು ಸರಿಪಡಿಸಬೇಕೆಂದು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಬಂದ್ ಮಾಡಿದರಿಂದ
ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ ನಿಂದ ‌ವಾಹನ ಸವಾರರು ಪರದಾಡುವಂತಾಯಿತು.


Conclusion:ಒಟ್ಟಾರೆ ಒಂದನ್ನು ಕೊಡಲು ಮತ್ತೊಂದನ್ನು ಕಿತ್ತುಕೊಂಡರು ಎಂಬಂತೆ ಕಾವೇರಿ ನೀರು ಕೊಡಲು ರಸ್ತೆಯನ್ನು ಕಿತ್ತು ಸರಿಪಡಿಸದೆ ವಾಹನ ಸವಾರರು ಹಾಗೂ ಸಾರ್ವಜನಿಕರ ಅಕ್ರೋಶಕ್ಕೆ ತುತ್ತಾಗಿರುವ ಬಿಬಿಎಂಪಿ ಹಾಗೂ ಜಲಮಂಡಲಿ ಇನ್ನಾದರು ಏಚ್ಚೇತ್ತುಕೊಂಡು ರಸ್ತೆಯನ್ನು ಸರಿಪಡಿಸಲಿ.

ಧರ್ಮರಾಜು ಎಂ ಕೆಆರ್ ಪುರ.



ಬೈಟ್ 1: ಮನೋಹರ್, ಗ್ರಾಮಸ್ಥರು


ಬೈಟ್2: ವಿಜಯ್ ಕುಮಾರ್, ಗ್ರಾಮಸ್ಥರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.