ETV Bharat / state

ಐಎಂಎ ಹಗರಣದ ಕುರಿತು ದಿನೇಶ್​​ ಗುಂಡೂರಾವ್​ಗೆ ಮಾಹಿತಿ ನೀಡಿದ ಜಮೀರ್​​

author img

By

Published : Jun 15, 2019, 4:57 PM IST

ಐಎಂಎ ಹಗರಣದ ಕುರಿತು ನಡೆದಿರುವ ತನಿಖೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ ಸಚಿವ ಜಮೀರ್ ಅಹಮ್ಮದ್ ಮಾಹಿತಿ ನೀಡಿದರು.

ದಿನೇಶ್ ಗುಂಡೂರಾವ್

ಬೆಂಗಳೂರು: ಐಎಂಎ ಹಗರಣದ ಸಂಬಂಧ ಮಾಹಿತಿ ಪಡೆಯಲು ಸಚಿವ ಜಮೀರ್ ಅಹಮ್ಮದ್​ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ಕೊಟ್ಟಿದ್ದರು. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದರು.

ಸಚಿವ ಜಮೀರ್​ಗೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ಕೊಟ್ಟರು. ಇಡೀ ಪ್ರಕರಣದ ಮಾಹಿತಿ ಜೊತೆಗೆ ರೋಶನ್ ಬೇಗ್ ಪಾತ್ರದ ಬಗ್ಗೆಯೂ ದಿನೇಶ್ ಗುಂಡೂರಾವ್ ಮಾಹಿತಿ ಪಡೆದರು.

ಭೇಟಿ ಬಳಿಕ ಸಚಿವ ಜಮೀರ್ ಅಹಮ್ಮದ್​ ಖಾನ್ ಮಾತನಾಡಿ, ದಿನೇಶ್ ಜತೆ ಐಎಂಎ ಬಗ್ಗೆ ಇದುವರೆಗೆ ಆಗಿರುವ ತನಿಖೆ ಕುರಿತು ಮಾಹಿತಿ ನೀಡಿದ್ದೇನೆ. ರೋಷನ್​ ಬೇಗ್ ಪಾತ್ರ ಇದೆ ಅನ್ನೋದಕ್ಕೆ ದಾಖಲೆ ಬೇಕು. ಆಡಿಯೋದಲ್ಲಿ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನ ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದು ಮನ್ಸೂರ್ ಧ್ವನಿ ಅನ್ನೋದು ಸಾಬೀತಾದ್ರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದರು.

ದಿನೇಶ್ ಗುಂಡೂರಾವ್​ಗೆ ಎಲ್ಲಾ ಮಾಹಿತಿ ನೀಡಿದ್ದೇವೆ. ನಾನು ಈ ವಿಚಾರದಲ್ಲಿ ಮೃದು ಧೋರಣೆ ತಾಳಿಲ್ಲ. ಸಿಎಂ ಭೇಟಿ ಮಾಡಿ ನಾವೇ ತನಿಖೆಗೆ ಒತ್ತಾಯಿಸಿದ್ದು, ಜನರಿಗೆ ಅನ್ಯಾಯ ಆಗಿದೆ ಅಂತ ಮೊದಲು ಹೋದವನು ನಾನು ಎಂದು ಬಿಎಸ್​ವೈ ವಿರುದ್ಧ ಜಮೀರ್ ವಾಗ್ದಾಳಿ ನಡೆಸಿದರು.

ಬೆಂಗಳೂರು: ಐಎಂಎ ಹಗರಣದ ಸಂಬಂಧ ಮಾಹಿತಿ ಪಡೆಯಲು ಸಚಿವ ಜಮೀರ್ ಅಹಮ್ಮದ್​ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ಕೊಟ್ಟಿದ್ದರು. ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದರು.

ಸಚಿವ ಜಮೀರ್​ಗೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ಕೊಟ್ಟರು. ಇಡೀ ಪ್ರಕರಣದ ಮಾಹಿತಿ ಜೊತೆಗೆ ರೋಶನ್ ಬೇಗ್ ಪಾತ್ರದ ಬಗ್ಗೆಯೂ ದಿನೇಶ್ ಗುಂಡೂರಾವ್ ಮಾಹಿತಿ ಪಡೆದರು.

ಭೇಟಿ ಬಳಿಕ ಸಚಿವ ಜಮೀರ್ ಅಹಮ್ಮದ್​ ಖಾನ್ ಮಾತನಾಡಿ, ದಿನೇಶ್ ಜತೆ ಐಎಂಎ ಬಗ್ಗೆ ಇದುವರೆಗೆ ಆಗಿರುವ ತನಿಖೆ ಕುರಿತು ಮಾಹಿತಿ ನೀಡಿದ್ದೇನೆ. ರೋಷನ್​ ಬೇಗ್ ಪಾತ್ರ ಇದೆ ಅನ್ನೋದಕ್ಕೆ ದಾಖಲೆ ಬೇಕು. ಆಡಿಯೋದಲ್ಲಿ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನ ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದು ಮನ್ಸೂರ್ ಧ್ವನಿ ಅನ್ನೋದು ಸಾಬೀತಾದ್ರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದರು.

ದಿನೇಶ್ ಗುಂಡೂರಾವ್​ಗೆ ಎಲ್ಲಾ ಮಾಹಿತಿ ನೀಡಿದ್ದೇವೆ. ನಾನು ಈ ವಿಚಾರದಲ್ಲಿ ಮೃದು ಧೋರಣೆ ತಾಳಿಲ್ಲ. ಸಿಎಂ ಭೇಟಿ ಮಾಡಿ ನಾವೇ ತನಿಖೆಗೆ ಒತ್ತಾಯಿಸಿದ್ದು, ಜನರಿಗೆ ಅನ್ಯಾಯ ಆಗಿದೆ ಅಂತ ಮೊದಲು ಹೋದವನು ನಾನು ಎಂದು ಬಿಎಸ್​ವೈ ವಿರುದ್ಧ ಜಮೀರ್ ವಾಗ್ದಾಳಿ ನಡೆಸಿದರು.

Intro:newsBody:ಐಎಂಎ ಮಾಹಿತಿ ಪಡೆಯಲು ಜಮೀರ್ ಗೆ ಬುಲಾವ್ ಕೊಟ್ಟ ದಿನೇಶ್ ಗುಂಡೂರಾವ್

ಬೆಂಗಳೂರು: ಐಎಮ್ ಎ ಹಗರಣದ ಸಂಬಂಧ ಮಾಹಿತಿ ಪಡೆಯಲು ಸಚಿವ ಜಮೀರ್ ಅಹಮದ್ ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಲಾವ್ ಕೊಟ್ಟಿದ್ದರು.
ಪ್ರಕರಣದ ಸಂಪೂರ್ಣ ಮಾಹಿತಿ ನೀಡಲು ಕೆಪಿಸಿಸಿ ಕಚೇರಿಗೆ ಆಗಮಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್ ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚಿಸಿದರು. ಸಚಿವ ಜಮೀರ್ ಗೆ ವಿಧಾನ ಪರಿಷತ್ ಸದಸ್ಯರುಗಳಾದ ನಜೀರ್ ಅಹಮ್ಮದ್ ಹಾಗೂ ರಿಜ್ವಾನ್ ಅರ್ಷದ್ ಸಾಥ್ ಕೊಟ್ಟರು.
ಇಡಿ ಪ್ರಕರಣ ಮಾಹಿತಿ ಜೊತೆಗೆ ರೋಶನ್ ಬೇಗ್ ಪಾತ್ರದ ಬಗ್ಗೆಯೂ ದಿನೇಶ್ ಗುಂಡೂರಾವ್ ಮಾಹಿತಿ ಪಡೆದರು.
ಭೇಟಿ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ದಿನೇಶ್ ಜತೆ ಐಎಂಎ ಬಗ್ಗೆ ಮಾತುಕತೆ.ಇದುವರೆಗೂ ಆಗಿರೋ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇನೆ. ರೋಷನ ಬೇಗ್ ಪಾತ್ರ ಇದೆ ಅನ್ನೋದಕ್ಕೆ ದಾಖಲೆ ಬೇಕು. ಆಡಿಯೋದಲ್ಲಿ ಅವರ ಹೆಸರು ಪ್ರಸ್ತಾಪಿಸಲಾಗಿದೆ. ಆದರೆ ಆಡಿಯೋವನ್ನ ಧ್ವನಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದು ಮನ್ಸೂರ್ ಧ್ವನಿ ಅನ್ನೋದು ಸಾಬೀತಾದ್ರೆ ರೋಷನ್ ಬೇಗ್ ಪಾತ್ರದ ಬಗ್ಗೆ ಮಾತನಾಡಬಹುದು ಎಂದರು.
ದಿನೇಶ್ ಗುಂಡೂರಾವ್ ಗೆ ಎಲ್ಲ ಮಾಹಿತಿ ನೀಡಿದ್ದೇವೆ. ಐಎಂಎ ವಿಚಾರವಾಗಿ ಇದುವರೆಗಿನ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇನೆ. ನಾನು ಈ ವಿಚಾರದಲ್ಲಿ ಎಲ್ಲೂ ಮೃದುಧೋರಣೆ ತಾಳಿಲ್ಲ. ಸಿಎಂ ಭೇಟಿ ಮಾಡಿ ನಾವೇ ತನಿಖೆಗೆ ಒತ್ತಾಯಿಸಿದ್ದು, ಎಸ್ ಐಟಿ ತನಿಖೆ ಒಳಗೆ ಕುಳಿತುಕೊಳ್ಳೋಕೆ ಆಗುತ್ತಾ? ಎಲ್ಲೋ ಕುಳಿತು ಯಡಿಯೂರಪ್ಪ ಮಾತನಾಡೋದು ಬೇಡ. ಯಡಿಯೂರಪ್ಪನವರು ಅವರಿಗೆ ನ್ಯಾಯ ಕೊಡಿಸ್ತಾರಂತೆ. ಜನರಿಗೆ ಅನ್ಯಾಯ ಆಗಿದೆ ಅಂತ ಮೊದಲು ಹೋದವನು ನಾನು ಎಂದು ಬಿಎಸ್ ವೈ ವಿರುದ್ಧ ಜಮೀರ್ ಅಹ್ಮದ್ ವಾಗ್ದಾಳಿ ನಡೆಸಿದರು.

Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.