ETV Bharat / state

ಡಿಕೆಶಿ,ಆಪ್ತರು ತೆರಿಗೆ ವಂಚಿಸಿರುವುದು ನಿಜ: ಐಟಿ ವಕೀಲರ ವಾದ

author img

By

Published : Jun 4, 2019, 4:45 PM IST

ಡಿ.ಕೆ ಶಿವಕುಮಾರ್​ ಅವರಿಗೆ ಸಂಬಂಧಪಟ್ಟ ದೆಹಲಿಯ ವಸತಿ ಸಂಕೀರ್ಣ (ಫ್ಲ್ಯಾಟ್) ಮೇಲೆ ಐಟಿ ದಾಳಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಇತರೆ ಆರೋಪಿಗಳು ಹಾಜರಾಗಿದ್ದರು. ಆದಾಯ ತೆರಿಗೆ ಇಲಾಖೆ ಪರ ನ್ಯಾಯವಾದಿ ಎಎಸ್​ಜಿ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದರು. ಇದಕ್ಕೆ ಪ್ರತಿವಾದ ನಡೆಸಲು ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಡಿಕೆ ಶಿವಕುಮಾರ್

ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.

ಸಚಿವ ಡಿ.ಕೆ ಶಿವಕುಮಾರ್ ಹಾಗೂ ಆಪ್ತರು ತೆರಿಗೆ ವಂಚನೆ‌ ಪ್ರಕರಣದ ವಿಚಾರಣೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಸಮುಚ್ಚಯದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಈ ವೇಳೆ ಆದಾಯ ತೆರಿಗೆ ಇಲಾಖೆ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ, ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ ವಸತಿ ಸಂಕೀರ್ಣ(ಫ್ಲಾಟ್)​ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕ ಹಣಕ್ಕೆ ಸಂಬಂಧಿಸಿದಂತೆ, ಐಟಿ ಅಧಿಕಾರಿಗಳು ದಾಖಲಿಸಿರೋ ದೂರು ಕ್ರಮ‌ಬದ್ಧವಾಗಿದೆ. ‌ದಾಳಿ ವೇಳೆ ಸಿಕ್ಕಿರೋ ಹಣ ಮತ್ತು ಒಡವೆಗಳಿಗೆ ಸಮರ್ಪಕ ದಾಖಲೆಗಳಿಲ್ಲ. ಹಾಗಾಗಿ ಡಿಕೆ ಶಿವಕುಮಾರ್ ವಿರುದ್ಧ ಐಟಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆರ್ಥಿಕ ವರ್ಷ ಮುಗಿಯುವ ಮುಂಚೆಯೇ ದಾಳಿ ಮಾಡೋ ಅಧಿಕಾರ ಐಟಿ ಇಲಾಖೆಗಿದೆ. ಐಟಿ ವಶಪಡಿಸಿಕೊಂಡ ಹಣ ಅಥವಾ ಇತರೆ ವಸ್ತುಗಳಿಗೆ 120 ದಿನಗಳ ಒಳಗೆ ದಾಖಲೆ ಸಲ್ಲಿಸಬೇಕು. ಆದರೆ, ಡಿಕೆ ಶಿವಕುಮಾರ್ ಮತ್ತು ಆಪ್ತರು ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ ತೆರಿಗೆ ವಂಚನೆ ಮಾಡಿರುವುದನ್ನು ಮೇಲ್ನೋಟಕ್ಕೆ ಮುಚ್ಚಿಟ್ಟಿರೋ ಶಂಕೆ ವ್ಯಕ್ತವಾಗುತ್ತದೆ ಎಂದು ವಾದ ಮಂಡಿಸಿದರು.

ಆದರೆ, ಸಮಯಾವಕಾಶದ ಕೊರತೆಯಿಂದ ಪ್ರತಿವಾದ ಮಂಡನೆಗೆ ಸಚಿವ ಡಿ.ಕೆ.ಶಿ ಪರ ವಕೀಲರಿಗೆ ಅವಕಾಶ ಸಿಗಲಿಲ್ಲ. ಸಚಿವ ಡಿ.ಕೆ ಶಿವಕುಮಾರ್ ಹಾಗೂ ಇತರೆ ಆರೋಪಿಗಳಾದ ರಾಜೇಂದ್ರ, ಆಂಜನೇಯ, ಸುನೀಲ್ ಶರ್ಮಾ ಅವರ ಖುದ್ದು ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಲಯ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.

ಸಚಿವ ಡಿ.ಕೆ ಶಿವಕುಮಾರ್ ಹಾಗೂ ಆಪ್ತರು ತೆರಿಗೆ ವಂಚನೆ‌ ಪ್ರಕರಣದ ವಿಚಾರಣೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಸಮುಚ್ಚಯದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಈ ವೇಳೆ ಆದಾಯ ತೆರಿಗೆ ಇಲಾಖೆ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ, ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ ವಸತಿ ಸಂಕೀರ್ಣ(ಫ್ಲಾಟ್)​ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕ ಹಣಕ್ಕೆ ಸಂಬಂಧಿಸಿದಂತೆ, ಐಟಿ ಅಧಿಕಾರಿಗಳು ದಾಖಲಿಸಿರೋ ದೂರು ಕ್ರಮ‌ಬದ್ಧವಾಗಿದೆ. ‌ದಾಳಿ ವೇಳೆ ಸಿಕ್ಕಿರೋ ಹಣ ಮತ್ತು ಒಡವೆಗಳಿಗೆ ಸಮರ್ಪಕ ದಾಖಲೆಗಳಿಲ್ಲ. ಹಾಗಾಗಿ ಡಿಕೆ ಶಿವಕುಮಾರ್ ವಿರುದ್ಧ ಐಟಿ ದೂರು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆರ್ಥಿಕ ವರ್ಷ ಮುಗಿಯುವ ಮುಂಚೆಯೇ ದಾಳಿ ಮಾಡೋ ಅಧಿಕಾರ ಐಟಿ ಇಲಾಖೆಗಿದೆ. ಐಟಿ ವಶಪಡಿಸಿಕೊಂಡ ಹಣ ಅಥವಾ ಇತರೆ ವಸ್ತುಗಳಿಗೆ 120 ದಿನಗಳ ಒಳಗೆ ದಾಖಲೆ ಸಲ್ಲಿಸಬೇಕು. ಆದರೆ, ಡಿಕೆ ಶಿವಕುಮಾರ್ ಮತ್ತು ಆಪ್ತರು ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ ತೆರಿಗೆ ವಂಚನೆ ಮಾಡಿರುವುದನ್ನು ಮೇಲ್ನೋಟಕ್ಕೆ ಮುಚ್ಚಿಟ್ಟಿರೋ ಶಂಕೆ ವ್ಯಕ್ತವಾಗುತ್ತದೆ ಎಂದು ವಾದ ಮಂಡಿಸಿದರು.

ಆದರೆ, ಸಮಯಾವಕಾಶದ ಕೊರತೆಯಿಂದ ಪ್ರತಿವಾದ ಮಂಡನೆಗೆ ಸಚಿವ ಡಿ.ಕೆ.ಶಿ ಪರ ವಕೀಲರಿಗೆ ಅವಕಾಶ ಸಿಗಲಿಲ್ಲ. ಸಚಿವ ಡಿ.ಕೆ ಶಿವಕುಮಾರ್ ಹಾಗೂ ಇತರೆ ಆರೋಪಿಗಳಾದ ರಾಜೇಂದ್ರ, ಆಂಜನೇಯ, ಸುನೀಲ್ ಶರ್ಮಾ ಅವರ ಖುದ್ದು ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಲಯ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

Intro:ಡಿಕೆ ಹಾಗೂ ಡಿಕೆ ಆಪ್ತರು ತೆರಿಗೆ ವಂಚನೆ ಮಾಡಿರೋದು ಸ್ಪಷ್ಟ ಐಟಿ ವಕೀಲರ ವಾದ

ಭವ್ಯ

ಬೆಂಗಳೂರು:

ಸಚಿವ ಡಿ.ಕೆ ಶಿವಕುಮಾರ್ ಮತ್ತು ಆಪ್ತರ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ದಾಳಿ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿಕೆ ಮಾಡಿತು.

ಸಚಿವ ಡಿಕೆ ಶಿವಕುಮಾರ್ ಹಾಗು ಆಪ್ತರು ತೆರಿಗೆ ವಂಚನೆ‌ ಮಾಡಿರುವ ಆರೋಪ ಪ್ರಕರಣದ ವಿಚಾರಣೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ಸಮುಚ್ಚಯದಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಆದಾಯ ತೆರಿಗೆ ಇಲಾಖೆ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್ ಗಳ ಮೇಲೆ ಐಟಿ ದಾಳಿ ನಡೆಸಿದಾಗ ಸಿಕ್ಕ ಹಣಕ್ಕೆ ಸಂಬಂಧಸಿದಂತೆ
ಐಟಿ ಅಧಿಕಾರಿಗಳು ದಾಖಲಿಸಿರೋ ದೂರು ಕ್ರಮ‌ ಬದ್ದವಾಗಿದೆ.‌ದಾಳಿ ವೇಳೆ ಸಿಕ್ಕಿರೋ ಹಣ ಮತ್ತು ಒಡವೆಗಳಿಗೆ ಸಮರ್ಪಕ ದಾಖಲೆಗಳಿಲ್ಲ ಹಾಗಾಗಿ ಡಿಕೆ ಶಿವಕುಮಾರ್ ವಿರುದ್ಧ ಐಟಿ ದೂರನ್ನು ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆರ್ಥಿಕ ವರ್ಷ ಮುಗಿಯದ ಮುಂಚೆಯೇ ದಾಳಿ ಮಾಡೋ ಅಧಿಕಾರ ಐಟಿಗೆ ಇದೆ.ಐಟಿ ವಶಪಡಿಸಿಕೊಂಡ ಹಣ ಅಥವಾ ಇತರೆ ವಸ್ತುಗಳಿಗೆ 120 ದಿನಗಳ ಒಳಗೆ ದಾಖಲೆ ಸಲ್ಲಿಸಬೇಕು. ಆದರೆ ಡಿಕೆ ಶಿವಕುಮಾರ್ ಮತ್ತು ಸಹಚರರು ಮಾಹಿತಿ ಸಲ್ಲಿಸಿಲ್ಲ. ಹೀಗಾಗಿ ತೆರಿಗೆ ವಂಚನೆ ಮಾಡಿರುವುದನ್ನು ಮೇಲ್ನೋಟ್ಟಕ್ಕೆ ಮುಚ್ಚಿಟ್ಟಿರೋ ಶಂಕೆ ವ್ಯಕ್ತವಾಗುತ್ತದೆ ಎಂದು ವಾದ ಮಂಡಿಸಿದರು.

ಆದರೆ ಸಮಯಾವಕಾಶದ ಕೊರತೆಯಿಂದ ಪ್ರತಿವಾದ ಮಂಡನೆಗೆ ಸಚಿವ ಡಿ.ಕೆ ಶಿವಕುಮಾರ್ ಪರ ವಕೀಲರಿಗೆ ಅವಕಾಶ ಸಿಗಲಿಲ್ಲ, ಸಚಿವ ಡಿ ಕೆ ಶಿವಕುಮಾರ್ ಹಾಗು ಇತರೆ ಆರೋಪಿಗಳಾದ ರಾಜೇಂದ್ರ , ಆಂಜನೇಯ , ಸುನೀಲ್ ಶರ್ಮಾ ಅವರ ಖುದ್ದು ಹಾಜರಿಯನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿಕೆ ಮಾಡಿತು.ಮುಂದಿನ ವಿಚಾರಣೆ ವೇಳೆ ಡಿ.ಕೆ.ಶಿವಕುಮಾರ್ ಪರ ವಕೀಲರು ವಾದ ಮಂಡನೆ ಮಾಡಲಿದ್ದಾರೆ.Body:KN_BNG_05_4_DK_7204498_BHAVYAConclusion:KN_BNG_05_4_DK_7204498_BHAVYA

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.