ETV Bharat / state

ಅಪೆರಲ್​​ ಪಾರ್ಕ್​ನಲ್ಲಿ ಗಾರ್ಮೆಂಟ್ಸ್​ಗಳು ಕ್ಲೋಸ್​​​: ಬೀದಿಗೆ ಬಿದ್ದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು - undefined

ಪಿಣ್ಯದ ನಂತರದ ಸ್ಥಾನದಲ್ಲಿದ್ದದ್ದು ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ. ಬಾಗಿಲು ಮುಚ್ಚುತ್ತಿವೆ ಅಲ್ಲಿನ ಅಪೆರಲ್ ಪಾರ್ಕ್​ನಲ್ಲಿರುವ ಗಾರ್ಮೆಂಟ್ಸ್​ಗಳು. ಬೀದಿಗೆ ಬಿದ್ದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು.

ಅಪೆರಲ್ ಪಾರ್ಕ್​
author img

By

Published : May 2, 2019, 9:57 AM IST

ದೊಡ್ಡಬಳ್ಳಾಪುರ: ಹತ್ತು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಪೆರಲ್ ಪಾರ್ಕ್ ಶುರುವಾಗುವ ಮೂಲಕ ಸ್ಥಳೀಯ ಸಾವಿರಾರು ಮಂದಿಗೆ ಉದ್ಯೋಗ ದೊರಕಿತ್ತು. ಆದರೆ ಈಗ ನಾನಾ ಕಾರಣದಿಂದ ಅಪೆರಲ್ ಪಾರ್ಕ್​ನಲ್ಲಿರುವ ಗಾರ್ಮೆಂಟ್ಸ್​ಗಳು ಬಾಗಿಲು ಮುಚ್ಚಿದ್ದು, 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಪಿಣ್ಯದ ನಂತರ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶವು ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ 250ಕ್ಕೂ ವಿವಿಧ ರೀತಿಯ ಕಾರ್ಖಾನೆಗಳಿದ್ದು, ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಸಿದ್ಧ ಉಡುಪು ಉದ್ಯಮ ಬೆಳವಣಿಗೆಗಾಗಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೇ ಅಪೆರಲ್ ಪಾರ್ಕ್ ಸ್ಥಾಪನೆ ಮಾಡಲಾಗಿತ್ತು. ಇಲ್ಲಿ ಸುಮಾರು 140ಕ್ಕೂ ಹೆಚ್ಚು ಗಾರ್ಮೆಂಟ್ಸ್ ಇದ್ದು, 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾರ್ಮಿಕರಿಗೆ ವೇತನ ಕೊಡಲಾರದೆ ಗಾರ್ಮೆಂಟ್ಸ್ ಒಂದೊಂದೇ ಬಾಗಿಲು ಮುಚ್ಚುತ್ತಿವೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ಅಪೆರಲ್ ಪಾರ್ಕ್​

ಸ್ಕಾಟ್ಸ್, ಜಸ್ಟ್ ಲವ್, ಬ್ಲೂಮ್ ಕ್ರಾಪ್ಟ್ ಗಾರ್ಮೆಂಟ್ಸ್​ಗಳು ಕಾರ್ಮಿಕರಿಗೆ ವೇತನ ಕೊಡಲಾರದೆ ಬಾಗಿಲು ಮುಚ್ಚುತ್ತಿವೆ. ಸ್ಕಾಟ್ಸ್ ತನ್ನ ಕಾರ್ಮಿಕರಿಗೆ ಎರಡು ತಿಂಗಳ ವೇತನ ಹಾಗೂ ಒಂದೂವರೆ ವರ್ಷದ ಪಿಎಫ್ ಹಣ ಕೊಟ್ಟಿಲ್ಲ. ವೇತನ ಕೊಡಲಾರದೆ ಸ್ಕಾಟ್ಸ್ ಬಾಗಿಲು ಮುಚ್ಚಿದ್ದು, 2000 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಗಾರ್ಮೆಂಟ್ಸ್​ಗಳು ಬಾಗಿಲು ಮುಚ್ಚಲು ಪ್ರಮುಖ ಕಾರಣವಾಗಿರೋದು ಆಡಳಿತ ಮಂಡಳಿಯ ವೈಫಲ್ಯ, ಮೂಲಭೂತ ಸೌಲಭ್ಯದ ಕೊರತೆ ಮತ್ತು ಕೆಲವು ಸಂಘಟನೆಗಳ ಮಧ್ಯ ಪ್ರವೇಶ ಕಾರಣ ಎನ್ನಲಾಗುತ್ತಿದೆ.

ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರೋದು ಗೌರಿಬಿದನೂರು, ಹಿಂದೂಪುರ, ಕೊರಟಗೆರೆ ಮತ್ತು ಚಿಕ್ಕಬಳ್ಳಾಪುರದ ಮಹಿಳೆಯರು. ಇವರನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರಲು ಮತ್ತು ಬಿಡಲು ಬಸ್ ವ್ಯವಸ್ಥೆಯನ್ನು ಗಾರ್ಮೆಂಟ್ಸ್​ಗಳೇ ಮಾಡಿವೆ. ಇದರಿಂದ ಕಂಪನಿಯ ಲಾಭದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚೆತ್ತಿರುವ ಮಾಲೀಕರು, ಹಿಂದೂಪುರ, ಗೌರಿಬಿದನೂರಲ್ಲೇ ಗಾರ್ಮೆಂಟ್ಸ್ ತೆರೆಯುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಇಲ್ಲಿಗೆ ಬರುವ ಕಾರ್ಮಿಕರಿಗೆ 12 ಸಾವಿರಕ್ಕು ಹೆಚ್ಚು ವೇತನ ಕೊಡಬೇಕು. ಗೌರಿಬಿದನೂರು ಮತ್ತು ಹಿಂದೂಪುರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ ಅನ್ನೋ ದುರಾಸೆ ಕೂಡ ಕಾರ್ಖಾನೆ ಮಾಲೀಕರದ್ದು ಎನ್ನಲಾಗಿದೆ.

ದೊಡ್ಡಬಳ್ಳಾಪುರ: ಹತ್ತು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಪೆರಲ್ ಪಾರ್ಕ್ ಶುರುವಾಗುವ ಮೂಲಕ ಸ್ಥಳೀಯ ಸಾವಿರಾರು ಮಂದಿಗೆ ಉದ್ಯೋಗ ದೊರಕಿತ್ತು. ಆದರೆ ಈಗ ನಾನಾ ಕಾರಣದಿಂದ ಅಪೆರಲ್ ಪಾರ್ಕ್​ನಲ್ಲಿರುವ ಗಾರ್ಮೆಂಟ್ಸ್​ಗಳು ಬಾಗಿಲು ಮುಚ್ಚಿದ್ದು, 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಪಿಣ್ಯದ ನಂತರ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶವು ಅತಿ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ 250ಕ್ಕೂ ವಿವಿಧ ರೀತಿಯ ಕಾರ್ಖಾನೆಗಳಿದ್ದು, ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಸಿದ್ಧ ಉಡುಪು ಉದ್ಯಮ ಬೆಳವಣಿಗೆಗಾಗಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೇ ಅಪೆರಲ್ ಪಾರ್ಕ್ ಸ್ಥಾಪನೆ ಮಾಡಲಾಗಿತ್ತು. ಇಲ್ಲಿ ಸುಮಾರು 140ಕ್ಕೂ ಹೆಚ್ಚು ಗಾರ್ಮೆಂಟ್ಸ್ ಇದ್ದು, 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾರ್ಮಿಕರಿಗೆ ವೇತನ ಕೊಡಲಾರದೆ ಗಾರ್ಮೆಂಟ್ಸ್ ಒಂದೊಂದೇ ಬಾಗಿಲು ಮುಚ್ಚುತ್ತಿವೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ಅಪೆರಲ್ ಪಾರ್ಕ್​

ಸ್ಕಾಟ್ಸ್, ಜಸ್ಟ್ ಲವ್, ಬ್ಲೂಮ್ ಕ್ರಾಪ್ಟ್ ಗಾರ್ಮೆಂಟ್ಸ್​ಗಳು ಕಾರ್ಮಿಕರಿಗೆ ವೇತನ ಕೊಡಲಾರದೆ ಬಾಗಿಲು ಮುಚ್ಚುತ್ತಿವೆ. ಸ್ಕಾಟ್ಸ್ ತನ್ನ ಕಾರ್ಮಿಕರಿಗೆ ಎರಡು ತಿಂಗಳ ವೇತನ ಹಾಗೂ ಒಂದೂವರೆ ವರ್ಷದ ಪಿಎಫ್ ಹಣ ಕೊಟ್ಟಿಲ್ಲ. ವೇತನ ಕೊಡಲಾರದೆ ಸ್ಕಾಟ್ಸ್ ಬಾಗಿಲು ಮುಚ್ಚಿದ್ದು, 2000 ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಗಾರ್ಮೆಂಟ್ಸ್​ಗಳು ಬಾಗಿಲು ಮುಚ್ಚಲು ಪ್ರಮುಖ ಕಾರಣವಾಗಿರೋದು ಆಡಳಿತ ಮಂಡಳಿಯ ವೈಫಲ್ಯ, ಮೂಲಭೂತ ಸೌಲಭ್ಯದ ಕೊರತೆ ಮತ್ತು ಕೆಲವು ಸಂಘಟನೆಗಳ ಮಧ್ಯ ಪ್ರವೇಶ ಕಾರಣ ಎನ್ನಲಾಗುತ್ತಿದೆ.

ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರೋದು ಗೌರಿಬಿದನೂರು, ಹಿಂದೂಪುರ, ಕೊರಟಗೆರೆ ಮತ್ತು ಚಿಕ್ಕಬಳ್ಳಾಪುರದ ಮಹಿಳೆಯರು. ಇವರನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರಲು ಮತ್ತು ಬಿಡಲು ಬಸ್ ವ್ಯವಸ್ಥೆಯನ್ನು ಗಾರ್ಮೆಂಟ್ಸ್​ಗಳೇ ಮಾಡಿವೆ. ಇದರಿಂದ ಕಂಪನಿಯ ಲಾಭದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಚ್ಚೆತ್ತಿರುವ ಮಾಲೀಕರು, ಹಿಂದೂಪುರ, ಗೌರಿಬಿದನೂರಲ್ಲೇ ಗಾರ್ಮೆಂಟ್ಸ್ ತೆರೆಯುವ ಪ್ರಯತ್ನದಲ್ಲಿದ್ದಾರೆ. ಅಲ್ಲದೇ ಇಲ್ಲಿಗೆ ಬರುವ ಕಾರ್ಮಿಕರಿಗೆ 12 ಸಾವಿರಕ್ಕು ಹೆಚ್ಚು ವೇತನ ಕೊಡಬೇಕು. ಗೌರಿಬಿದನೂರು ಮತ್ತು ಹಿಂದೂಪುರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ ಅನ್ನೋ ದುರಾಸೆ ಕೂಡ ಕಾರ್ಖಾನೆ ಮಾಲೀಕರದ್ದು ಎನ್ನಲಾಗಿದೆ.

Intro:ದೊಡ್ಡಬಳ್ಳಾಪುರ ಅಪೆರಲ್ ಪಾರ್ಕ್ ನಲ್ಲಿ ಬಾಗಿಲು ಮುಚ್ಚುತ್ತಿರುವ ಗಾರ್ಮೆಂಟ್ಸ್ ಗಳು

10 ಸಾವಿರಕ್ಕೂ ಹೆಚ್ಚು ಉದ್ಯೋಗ ಕಳೆದು ಕೊಂಡ ಕಾರ್ಮಿಕರು
Body:ದೊಡ್ಡಬಳ್ಳಾಪುರ : ಹತ್ತು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಪೆರಲ್ ಪಾರ್ಕ್ ಶುರುವಾಗುವ ಮೂಲಕ ಸ್ಥಳೀಯ ಸಾವಿರಾರು ಮಂದಿಗೆ ಉದ್ಯೋಗ ನೀಡಿತ್ತು. ಅದರೀವತ್ತು ನಾನಾ ಕಾರಣದಿಂದ ಅಪೆರಲ್ ಪಾರ್ಕ್ ನಲ್ಲಿರುವ ಗಾರ್ಮೆಂಟ್ಸ್ ಗಳು ಬಾಗಿಲು ಮುಚ್ಚುವ ಮೂಲಕ 10 ಸಾವಿರಕ್ಕು ಹೆಚ್ಚು ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.


ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಪಿಣ್ಯದ ನಂತರ ಅತಿ ದೊಡ್ಡ ಕೈಗಾರಿಕಾ ಪ್ರದೇಶ. ಇಲ್ಲಿ 250ಕ್ಕೂ ವಿವಿಧ ರೀತಿಯ ಕಾರ್ಖಾನೆ ಕಾರ್ಖಾನೆಗಳಿದ್ದು ಲಕ್ಷಕ್ಕು ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಸಿದ್ದ ಉಡುಪು ಉದ್ಯಮ ಬೆಳವಣಿಗಾಗಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿಯೇ ಅಪೆರಲ್ ಪಾರ್ಕ್ ಸ್ಫಾಪನೆ ಮಾಡಲಾಗಿತ್ತು. ಸುಮಾರು 140ಕ್ಕೂ ಹೆಚ್ಚು ಗಾರ್ಮೆಂಟ್ಸ್ ಕೆಲಸ ಮಾಡುತ್ತಿವೆ. 40 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾರ್ಮಿಕರಿಗೆ ವೇತನ ಕೊಡಲಾರದೆ ಗಾರ್ಮೆಂಟ್ಸ್ ಒದೊಂದೇ ಬಾಗಿಲು ಮುಚ್ಚುತ್ತಿವೆ ಇದರಿಂದ 10 ಸಾವಿರಕ್ಕು ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

ಸ್ಕಾಟ್ಸ್. ಜಸ್ಟ್ ಲವ್, ಬ್ಲೂಮ್ ಕ್ರಾಪ್ಟ್ ಗಾರ್ಮೆಂಟ್ಸ್ ಗಳು ಕಾರ್ಮಿಕರಿಗೆ ವೇತನ ಕೊಡಲಾರದೆ ಬಾಗಿಲು ಮುಚ್ಚುತ್ತಿವೆ. ಸ್ಕಾಟ್ಸ್ ತನ್ನ ಕಾರ್ಮಿಕರಿಗೆ ಎರಡು ತಿಂಗಳ ವೇತನ ಒಂದೂವರೆ ವರ್ಷ ಪಿಎಫ್ ಹಣ ಕೊಟ್ಟಿಲ್ಲ. ವೇತನ ಕೊಡಲಾರದೆ ಸ್ಕಾಟ್ಸ್ ಬಾಗಿಲು ಮುಚ್ಚಿದೆ ಇದರಿಂದ 200ದ ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಗಾರ್ಮೆಂಟ್ಸ್ ಗಳು ಬಾಗಿಲು ಮುಚ್ಚಲು ಪ್ರಮುಖ ಕಾರಣವಾಗಿರೋದು ಆಡಳಿತಿ ಮಂಡಳಿಯ ವೈಫಲ್ಯ, ಅಪೆರಲ್ ಪಾರ್ಕ್ ನಲ್ಲಿ ಮೂಲಭೂತ ಸೌಲಭ್ಯದ ಕೊರತೆ ಮತ್ತು ಕೆಲವು ಸಂಘಟನೆಗಳ ಮಧ್ಯ ಪ್ರವೇಶದಿಂದ ಗಾರ್ಮೆಂಟ್ಸ್ ಬಾಗಿಲು ಮುಚ್ಚುತ್ತಿವೆ.

ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರೋದು ಗೌರಿಬಿದನೂರು,ಹಿಂದೂಪುರ,ಕೊರಟಗೆರೆ ಮತ್ತು ಚಿಕ್ಕಬಳ್ಳಾಪುರದ ಮಹಿಳೆಯರು. ಇವರನ್ನು ಕೆಲಸದ ಸ್ಥಳಕ್ಕೆ ಕರೆದುಕೊಂಡು ಬರವು ಮತ್ತು ಬೀಡಲು ಬಸ್ ವ್ಯವಸ್ಥೆಯನ್ನು ಗಾರ್ಮೆಂಟ್ಸ್ ಗಳೇ ಮಾಡಿವೆ. ಇದರಿಂದ ಕಂಪನಿಯ ಲಾಭದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಎಚ್ಚೇತ್ತಿರುವ ಮಾಲೀಕರು ಹಿಂದೂಪುರ ಗೌರಿಬಿದನೂರು ಕಡೇ ಗಾರ್ಮೆಂಟ್ಸ್ ತೆರೆಯುವ ಪ್ರಯತ್ನದಲ್ಲಿವೆ. ಇಧೇ ಕಾರಣಕ್ಕೆ ಇಲ್ಲಿ ಬಾಗಿಲು ಹಾಕುತ್ತಿವೆ ಜೊತೆಗೆ ಇಲ್ಲಿಗೆ ಬರುವ ಕಾರ್ಮಿಕರಿಗೆ 12 ಸಾವಿರಕ್ಕು ಹೆಚ್ಚು ವೇತನ ಕೊಡಬೇಕು. ಗೌರಿಬಿದನೂರು ಮತ್ತು ಹಿಂದೂಪುರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ ಅನ್ನೋ ದುರಾಸೆ ಕಾರ್ಖಾನೆ ಮಾಲೀಕರಿಗೆ.

ಒಟ್ಟಿನಲ್ಲಿ ದೊಡ್ಡಬಳ್ಳಾಪುರದ ಅಪರೆಲ್ ಪಾರ್ಕ್ ನಲ್ಲಿರುವ ಗಾರ್ಮೆಂಟ್ಸ್ ಗಳು ಒದೊಂದೇ ಬಾಗಿಲು ಹಾಕುವ ಮೂಲಕ ಭವಿಷ್ಯದಲ್ಲಿ ಸಾವಿರಾರು ಉದ್ಯೋಗಿಗಳ ಭವಿಷ್ಯಕ್ಕೆ ಕತ್ತರಿಹಾಕುವ ಹಂತದಲ್ಲಿದೆ.

ಬೈಟ್ , ಬಿ. ಜಯರಾಮಯ್ಯ. ಕಾರ್ಮಿಕ ಮುಖಂಡ
ಬೈಟ್ – ಲಕ್ಷ್ಮಿನರಸಪ್ಪ, ಕಾರ್ಮಿಕ ಮುಖಂಡ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.